Webdunia - Bharat's app for daily news and videos

Install App

Video: ನಾವು ಹಿಂದೂಗಳಂತಲ್ಲ, ಕಾಶ್ಮೀರ ಯಾವತ್ತಿದ್ರೂ ನಮ್ಮದೇ, ಶತ್ರುಗಳು ಏನೂ ಮಾಡಕ್ಕಾಗಲ್ಲ: ಪಾಕ್ ಸೇನಾ ಮುಖ್ಯಸ್ಥ

Krishnaveni K
ಗುರುವಾರ, 17 ಏಪ್ರಿಲ್ 2025 (11:18 IST)
Photo Credit: X
ಇಸ್ಲಾಮಾಬಾದ್: ನಾವು ಹಿಂದೂಗಳಿಗಿಂತ ಭಿನ್ನರು, ಅದಕ್ಕೇ ನಾವು ಪ್ರತ್ಯೇಕ ರಾಷ್ಟ್ರ ಸ್ಥಾಪಿಸಿದ್ದೇವೆ. ಕಾಶ್ಮೀರ ಯಾವತ್ತಿದ್ರೂ ನಮ್ಮದೇ, ಶತ್ರುಗಳು ಏನೂ ಮಾಡಕ್ಕೆ ಆಗಲ್ಲ ಎಂದು ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ಕಾರ್ಯಕ್ರಮವೊಂದರಲ್ಲಿ ಭಾಷಣ ಮಾಡಿದ್ದಾರೆ.

ಪಾಕಿಸ್ತಾನದ ವಲಸಿಗರನ್ನುದ್ದೇಶಿಸಿ ಮಾತನಾಡಿರುವ ಮುನೀರ್ ಇಸ್ಲಾಂ ಧರ್ಮವನ್ನು ಹಾಡಿಹೊಗಳಿದ್ದು, ನಾವು ಹಿಂದೂಗಳಿಂತ ಭಿನ್ನರಾಗಿದ್ದೇವೆ ಎಂದಿದ್ದಾರೆ. ಅಲ್ಲದೆ, ಭಾರತದ ವಿರುದ್ಧ ಕಿಡಿ ಕಾರಿದ್ದಾರೆ.

ಪಾಕಿಸ್ತಾನದ ಪ್ರಧಾನಿ ಶಹಬಾಜ್ ಷರೀಫ್ ಸೇರಿದಂತೆ ಪ್ರಮುಖ ನಾಯಕರ ಮುಂದೆ ಮುನೀರ್ ತಮ್ಮ ದೇಶದ ಬಗ್ಗೆ ಉದ್ದುದ್ದ ಭಾಷಣ ಮಾಡಿದ್ದಾರೆ. ನಾವು ಶೀಘ್ರದಲ್ಲೇ ಭಯೋತ್ಪಾದಕರ ಬೆನ್ನು ಮುರಿಯಲಿದ್ದೇವೆ. 13 ಲಕ್ಷ ಜನರ ಭಾರತೀಯ ಸೇನೆಗೇ ನಮ್ಮನ್ನು ಹೆಸರಿಸಲಾಗಲಿಲ್ಲ. ಇನ್ನು, 15 ಸಾವಿರ ಭಯೋತ್ಪಾದಕರಿಗೆ ಹೆದರುತ್ತೇವಾ ಎಂದು ಟಾಂಗ್ ಕೊಟ್ಟಿದ್ದಾರೆ.

ಇನ್ನು, ನಾವು ಹಿಂದೂಗಳಿಗಿಂತ ಭಿನ್ನರು, ನಮ್ಮ ಯೋಚನೆ, ಪ್ರವೃತ್ತಿ ಎಲ್ಲವೂ ವಿಭಿನ್ನ. ಹೀಗಾಗಿ ನಮ್ಮ ಪೂರ್ವಜರು ಬೇರೆ ದೇಶವನ್ನು ಸ್ಥಾಪಿಸಿದ್ದಾರೆ. ನಾವು ಒಂದೇ ದೇಶವಲ್ಲ, ನಮ್ಮದು ಬೇರೆ ಬೇರೆ ದೇಶ. ಪಾಕಿಸ್ತಾನದ ಮಕ್ಕಳಿಗೆ ನಮ್ಮ ದೇಶದ ಬಗ್ಗೆ ಕಥೆಗಳನ್ನು ಹೇಳಬೇಕು. ಪಾಕಿಸ್ತಾನದ ಪೂರ್ವಜರ ಕಥೆಗಳನ್ನು ಹೇಳಬೇಕು. ಮೂರನೇ ತಲೆಮಾರು, ನಾಲ್ಕನೇ ತಲೆಮಾರು ದುರ್ಬಲವಾಗಬಾರದು. ವಿದೇಶದಲ್ಲಿ ವಾಸಿಸುವ ಪಾಕಿಸ್ತಾನಗಳು ನಮಗೆ ಆರ್ಥಿಕ ಸಹಾಯ ಮಾಡಬೇಕು. ನೀವು ಹಣವನ್ನು ಕಳುಹಿಸುವ ಮೂಲಕ ನಿಮ್ಮ ದೇಶದ ಮೇಲಿನ ಪ್ರೀತಿಯನ್ನು ತೋರಿಸುತ್ತೀರಿ. ನೀವು ಣ ಕಳುಹಿಸುತ್ತಿರಿ, ನಾವು ಕಾಶ್ಮೀರವನ್ನು ಎಂದೂ ನಮ್ಮ ಕೈ ತಪ್ಪಿಹೋಗಲು ಬಿಡಲ್ಲ ಎಂದು ಕೊಚ್ಚಿಕೊಂಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Pakistan: ಉಗ್ರ ಸೈಫುಲ್ಲಾ ಮೃತದೇಹಕ್ಕೆ ರಾಷ್ಟ್ರಧ್ವಜ: ಪಾಕಿಸ್ತಾನದ ನಾಟಕ ಬಯಲು

India Pakistan: ಭಾರತದ ವಿರುದ್ಧ ಸೋತು ಸುಣ್ಣವಾದ ಬಳಿಕ ಚೀನಾ ಬಳಿ ಓಡಿದ ಪಾಕಿಸ್ತಾನ

Pakistan ಉಗ್ರರಿಗೆ ಶುರುವಾಯ್ತು ಅಜ್ಞಾತ ಶೂಟರ್ ಭಯ

Joe Biden: ಅಮೆರಿಕಾ ಮಾಜಿ ಅಧ್ಯಕ್ಷ ಜೋ ಬೈಡನ್ ಗೆ ಕ್ಯಾನ್ಸರ್

Dharmasthala: ಪಂಜಾಬ್ ನಲ್ಲಿ ಧರ್ಮಸ್ಥಳ ಯುವತಿ ಸಾವು ಪ್ರಕರಣಕ್ಕೆ ಟ್ವಿಸ್ಟ್: ಕಾರಣ ಬಹಿರಂಗ

ಮುಂದಿನ ಸುದ್ದಿ
Show comments