Webdunia - Bharat's app for daily news and videos

Install App

ನನ್ನ ಪುತ್ರಿ ವಿವಾಹವಾದ್ರೆ 2 ಕೋಟಿ ಕೊಡ್ತೇನೆ ಎಂದ ಉದ್ಯಮಿ

Webdunia
ಶುಕ್ರವಾರ, 8 ಮಾರ್ಚ್ 2019 (20:22 IST)
ಥೈಲೆಂಡ್: ದಕ್ಷಿಣ ಥೈಲೆಂಡ್‌‌ನಲ್ಲಿ ವಾಸಿಸುತ್ತಿರುವ ಖ್ಯಾತ ಉದ್ಯಮಿಯೊಬ್ಬ, ತನ್ನ ಪುತ್ರಿಯನ್ನು ವಿವಾಹವಾದಲ್ಲಿ 2 ಕೋಟಿ ರೂಪಾಯಿ ಹಣ ನೀಡುವುದಾಗಿ ಘೋಷಿಸಿದ್ದಾನೆ.
26 ವರ್ಷ ವಯಸ್ಸಿನ ಪುತ್ರಿ ಕರ್ನಸಿತಾ ವಿವಾಹವಾಗುವುದರಲ್ಲಿ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ತಂದೆ ಅರ್ನೋನ್ ರೋಡ್‌ಧೋಂಗ್, ಈ ರೀತಿಯಲ್ಲಾದರೂ ಪುತ್ರಿಯ ವಿವಾಹ ಮಾಡಬೇಕು ಎನ್ನುವ ಯೋಜನೆ ರೂಪಿಸಿದ್ದಾನೆ.
 
ಪುತ್ರಿ ಕರ್ನಸಿತಾ ಪದವೀಧರೆಯಾಗಿದ್ದು ಚೀನಾ ಮತ್ತು ಇಂಗ್ಲೀಷ್ ಭಾಷೆಗಳನ್ನು ಬಲ್ಲವಳಾಗಿದ್ದಾಳೆ. ಆದರೆ, ವಿವಾಹ ವಿಳಂಬವಾಗುತ್ತಿರುವುದು ತಂದೆಗೆ ಅಸಮಾಧಾನ ಮೂಡಿಸಿದೆ.
 
ತಂದೆಯ ಪ್ರಕಾರ, ತನ್ನ ಪುತ್ರಿಯನ್ನು ವಿವಾಹವಾಗಬಯಸುವವನು ಅಂತಹ ಸುಂದರವಾಗಿರಬೇಕು ಎಂದೇನಿಲ್ಲ. ಕೇವಲ ಓದಲು, ಬರೆಯಲು ಬಂದರೆ ಸಾಕು. ವರನ ಪದವಿ ಅಗತ್ಯವಿಲ್ಲ, ಸೋಂಬೇರಿಯಾಗಿರದೆ ಕಠಿಣ ಪರಿಶ್ರಮ ಪಡುವ ವ್ಯಕ್ತಿಯಾಗಿರಬೇಕು.
 
ಅರ್ನೊನ್, ಬೆಳೆಗಾರನಾಗಿದ್ದು, ಅವನ ಪ್ರದೇಶದಲ್ಲಿ ಅತ್ಯಂತ ದೊಡ್ಡ ವ್ಯವಹಾರವನ್ನು ಹೊಂದಿದ್ದಾನೆ, ಆದ್ದರಿಂದ ತನ್ನ ವ್ಯವಹಾರವನ್ನು ನಿರ್ವಹಿಸುವ ಯಾರಾದರೊಬ್ಬರು ಬೇಕು ಎಂದು ಬಯಸಿದ್ದಾನೆ.
 
"ನನ್ನ ವ್ಯವಹಾರವನ್ನು ಯಾರನ್ನಾದರೂ ನೋಡಿಕೊಳ್ಳಬೇಕು ಎಂದು ಬಯಸುತ್ತೇನೆ. ನನಗೆ ಪದವೀಧರ, ಅಥವಾ ಸ್ನಾತಕೋತ್ತರ ಅಥವಾ ತತ್ವಜ್ಞಾನಿ ಪದವಿ ಹೊಂದಿರುವ ವ್ಯಕ್ತಿಯು ಬಯಸುವುದಿಲ್ಲ. ಒಬ್ಬ ಶ್ರದ್ಧಾವಂತ ಮನುಷ್ಯನನ್ನು ಬಯಸುತ್ತೇನೆ, ಅದು ಅಷ್ಟೆ. ನಾನು ನನ್ನ ಸ್ವತ್ತುಗಳನ್ನು ಅವನಿಗೆ ಕೊಡುತ್ತೇನೆ "ಎಂದು ಹೇಳಿದ್ದಾನೆ.
 
ವಾಸ್ತವವಾಗಿ, ಕರ್ನಸೀತಾ ಸುದ್ದಿಯನ್ನು ತಿಳಿದು ಆಶ್ಚರ್ಯಚಕಿತಳಾಗಿದ್ದಾಳೆ. "ನನಗೆ ಆಶ್ಚರ್ಯವಾಗಿತ್ತು. ನಾನು ಇನ್ನೂ ಅವಿವಾಹಿತೆ ಎನ್ನುವುದು ನಿಜ, ನಾನು ಒಬ್ಬ ವ್ಯಕ್ತಿಯೊಂದಿಗೆ ಮದುವೆಯಾಗಬೇಕಾದರೆ, ಅವನ ಕುಟುಂಬವನ್ನು ಪ್ರೀತಿಸುವ ಶ್ರದ್ಧಾವಂತ ಮತ್ತು ಉತ್ತಮ ವ್ಯಕ್ತಿಯಾಗಬೇಕೆಂದು ನಾನು ಬಯಸುತ್ತೇನೆ ಎಂದು ತಿಳಿಸಿದ್ದಾಳೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Karnataka Weather: ಬೆಂಗಳೂರಿಗೆ ಇನ್ನೆಷ್ಟು ದಿನ ಮಳೆ, ಯಾವ ಜಿಲ್ಲೆಗೆ ಏನು ಅಲರ್ಟ್ ಇಲ್ಲಿದೆ ವಿವರ

ತಿರುಮಲ ದೇವಸ್ಥಾನಕ್ಕೆ ರಾಜಮಾತೆ ಪ್ರಮೋದಾ ದೇವಿಯಿಂದ ಎರಡು ದೀಪಗಳ ದೇಣಿಗೆ

ಧರ್ಮಸ್ಥಳ ಮೂಲದ ಆಕಾಂಕ್ಷ ಸಾವು ಪ್ರಕರಣ: ಸಮಗ್ರ ತನಿಖೆಗೆ ಸಚಿವ ಗುಂಡೂರಾವ್ ಆಗ್ರಹ

ನನ್ನ ಪಾಲಿನ ಎರಡನೇ ಅಂಬೇಡ್ಕರ್‌, ಸಿಎಂ ಸಿದ್ದರಾಮಯ್ಯನವರು: ಎಚ್‌ ಆಂಜನೇಯ ಗುಣಗಾನ

ಸಹಜ ಸ್ಥಿತಿಗೆ ಮರಲಿದ ಜಮ್ಮು ಕಾಶ್ಮೀರದ ಗಡಿಭಾಗದ ಪ್ರದೇಶಗಳು, ಶಾಲೆಗಳು ಮತ್ತೇ ಆರಂಭ

ಮುಂದಿನ ಸುದ್ದಿ
Show comments