Webdunia - Bharat's app for daily news and videos

Install App

ಫೇಸ್ಬುಕ್ ಗೆಳೆಯನ ಪ್ರೀತಿ ನಂಬಿ ಕೋಟಿ ಕೋಟಿ ಹಣ ಕಳೆದುಕೊಂಡ ಮಹಿಳೆ

Webdunia
ಗುರುವಾರ, 23 ನವೆಂಬರ್ 2023 (11:52 IST)
ಅಲನ್ ಮೆಕಾರ್ಟಿ ಎಂದು ಕರೆದುಕೊಂಡ ನಕಲಿ ಒಳಾಂಗಣ ವಿನ್ಯಾಸಗಾರನನ್ನು ನಂಬಿದ ಮಹಿಳೆ  ಅವನ ಜತೆ ಫೇಸ್‌ಬುಕ್ ಮೂಲಕ ಆನ್‌ಲೈನ್ ಸಂಭಾಷಣೆ ನಡೆಸುತ್ತಾ ಅವನ ಪ್ರೀತಿಗೆ ಬಿದ್ದಿದ್ದಳು. ಇದೀಗ ಅವನ ಮೋಸಕ್ಕೆ ಒಳಗಾಗಿ  3ಲಕ್ಷ ಡಾಲರ್ ಹಣವನ್ನು ಕಳೆದುಕೊಂಡು ಪೊಲೀಸರಿಗೆ ದೂರು ನೀಡಿದ್ದಾಳೆ.
 
ಆಸ್ಟ್ರೇಲಿಯಾ ಮಹಿಳೆಯೊಬ್ಬಳು ಫೇಸ್‌ಬುಕ್ ಪೋಸ್ಟ್‌ನಲ್ಲಿ  ಆನ್‌ಲೈನ್ ರೋಮ್ಯಾನ್ಸ್  ವಂಚನೆಯಲ್ಲಿ ಸಿಕ್ಕಿ 3 ಲಕ್ಷ ಡಾಲರ್ ಹಣವನ್ನು ಕಳೆದುಕೊಂಡಿದ್ದಾಳೆ.  
 
ಸ್ಕಾಟ್‌ಲೆಂಡ್ ಮೂಲದ ಈಗ ಆಸ್ಟ್ರೇಲಿಯಾದಲ್ಲಿ ವಾಸಿಸುತ್ತಿರುವ ಒಳಾಂಗಣ ವಿನ್ಯಾಸಕಾರ ಮೆಕಾರ್ಟಿಯ ಬಿಸಿನೆಸ್  ವೆಬ್‌ಸೈಟ್ ಮತ್ತು ಫೇಸ್‌ಬುಕ್ ವಿವರಗಳನ್ನು ಬಳಸಿಕೊಂಡು  ಮೆಕಾರ್ಟಿಯ ಸೋಗಿನಲ್ಲಿ  ಪರ್ತ್ ಮೂಲದ ಮಹಿಳೆಗೆ ತಾವು ವ್ಯವಹಾರ ಮಾಡಲು 3 ಲಕ್ಷ ಡಾಲರ್  ಹಣದ ಅಗತ್ಯವಿದೆಯೆಂದು  ನೈಜೀರಿಯಾದ ಕ್ರಿಮಿನಲ್‌ಗಳು ಕೋರಿದ್ದರು. 
 
ತಮ್ಮ ಜತೆ ಸಂಪರ್ಕದಲ್ಲಿರುವುದು ಮೆಕಾರ್ಟಿ ಎಂದು ಭಾವಿಸಿದ್ದ ಮಹಿಳೆ ಅವನನ್ನು ಪ್ರೀತಿಸತೊಡಗಿದ್ದಳು ಮತ್ತು ವ್ಯವಹಾರಕ್ಕಾಗಿ ಹಣ ಕೇಳಿದಾಗ ಮೂರು ಲಕ್ಷ ಡಾಲರ್ ಹಣವನ್ನು ಧಾರಾಳವಾಗಿ ನೀಡಿದ್ದಳು. 
 
ಗ್ರಾಹಕ ರಕ್ಷಣೆ ಮತ್ತು ಪೊಲೀಸ್ ತಂಡಗಳು ತನಿಖೆ ನಡೆಸಿದಾಗ, ನ್ಯೂ ಸೌತ್ ವೇಲ್ಸ್‌ನಲ್ಲಿ ಇದೇ ರೀತಿ ಅನೇಕ ಮಂದಿ ವಂಚನೆಗೊಳಗಾಗಿದ್ದು, ಒಬ್ಬ ಮಹಿಳೆ 50,000 ಡಾಲರ್ ಕಳೆದುಕೊಂಡಿದ್ದನ್ನು ಬೆಳಕಿಗೆ ಬಂದಿತ್ತು. 
 
ಈ ವಂಚನೆಯಲ್ಲಿ ಬಿಸಿನೆಸ್ ವೆಬ್‌ಸೈಟ್‌ಗಳನ್ನು ನೈಜೀರಿಯಾದ ಕಂಪ್ಯೂಟರ್ ಮತ್ತು ಈ ಮೇಲ್ ವಿಳಾಸ ಬಳಸಿ ನೋಂದಣಿ ಮಾಡಲಾಗಿದೆ ಎಂದು ಗ್ರಾಹಕ ರಕ್ಷಣೆ ಆಯುಕ್ತ ನ್ಯೂಕಾಂಬೆ ತಿಳಿಸಿದರು. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಯಾವಾ ಕಾರಣಕ್ಕೆ ಈ ಸಂಭ್ರಮ: ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ

ಪಾಕಿಸ್ತಾನ ಪರ ಬೇಹುಗಾರಿಗೆ: ಎನ್‌ಐಎಯಿಂದ ಯೂಟ್ಯೂಬರ್‌ ಜ್ಯೋತಿಗೆ ನಾನಾ ರೀತಿಯಲ್ಲಿ ಪ್ರಶ್ನೆ

ಕನ್ನಡ ಮಾತೇ ಆಡಲ್ಲ, ಹಿಂದಿ ರಾಷ್ಟ್ರ ಭಾಷೆ ಏನಿವಾಗ? SBI ಅಧಿಕಾರಿಯ ದರ್ಪ: video

Pahalgam Attack, ಅಂದು ಮೋದಿ ಎಚ್ಚರಿಕೆ ನೀಡುತ್ತಿದ್ದರೆ 26 ಮಂದಿಯ ಜೀವ ಉಳಿಯುತ್ತಿತ್ತು: ಮಲ್ಲಿಕಾರ್ಜುನ ಖರ್ಗೆ

ಅಂದು ನಾವು ನೀಡಿದ ಅನುದಾನದಲ್ಲಿ ಕಾಮಗಾರಿ ಮಾಡ್ತಿದ್ರೆ ಬೆಂಗಳೂರಿಗೆ ಈ ಪರಿಸ್ಥಿತಿ ಬರ್ತಿರ್ಲಿಲ್ಲ: ಆರ್‌ ಅಶೋಕ್‌

ಮುಂದಿನ ಸುದ್ದಿ
Show comments