ಜಿಮ್ ಮಾಡುವವರು ಡಾ ಸಿಎನ್ ಮಂಜುನಾಥ್ ಅವರ ಈ ಸಲಹೆಯನ್ನು ತಪ್ಪದೇ ಗಮನಿಸಿ

Krishnaveni K
ಬುಧವಾರ, 9 ಜುಲೈ 2025 (09:06 IST)
ಬೆಂಗಳೂರು: ಇತ್ತೀಚೆಗಿನ ದಿನಗಳಲ್ಲಿ ಹೃದಯಾಘಾತ ಹೆಚ್ಚಳವಾಗುವುದಕ್ಕೆ ಅತಿಯಾದ ವರ್ಕೌಟ್ ಕೂಡಾ ಕಾರಣ ಎನ್ನಲಾಗುತ್ತಿದೆ. ಹೀಗಾಗಿ ಜಿಮ್ ಮಾಡುವವರು ಹೃದ್ರೋಗ ತಜ್ಞ ಡಾ ಸಿಎನ್ ಮಂಜುನಾಥ್ ಅವರ ಈ ಸಲಹೆಯನ್ನು ಗಮನಿಸಿ.

ಸಂದರ್ಶನವೊಂದರಲ್ಲಿ ಡಾ ಸಿಎನ್ ಮಂಜುನಾಥ್ ಜಿಮ್ ಮಾಡುವವರಿಗೆ ಅತ್ಯಮೂಲ್ಯ ಸಲಹೆ ನೀಡಿದ್ದಾರೆ. ಹೃದಯಾಘಾತ ತಡೆಯಬೇಕು ಮತ್ತು ಹೃದಯ ಸಂಬಂಧೀ ಖಾಯಿಲೆಗಳನ್ನು ಬಾರದಂತೆ ನೋಡಿಕೊಳ್ಳಬೇಕು ಎಂದರೆ ಜಿಮ್ ಮಾಡುವವರು ಕೆಲವು ವಿಚಾರಗಳನ್ನು ತಪ್ಪದೇ ಗಮನಿಸಬೇಕು.

ಜಿಮ್ ಮಾಡುವುದು ತಪ್ಪು ಎಂದು ಯಾರೂ ಹೇಳಲ್ಲ. ಆದರೆ ನಾವು ಯಾವ ರೀತಿ ವರ್ಕೌಟ್ ಮಾಡಬೇಕು ಎಂಬುದನ್ನು ಗಮನಿಸಬೇಕು. ಜಿಮ್ ಗೆ ಹೋಗುವ ಮೊದಲು ಏನಾದರೂ ಅನುಮಾನಗಳಿದ್ದರೆ ನಿಮ್ಮ ಹೃದಯದ ಆರೋಗ್ಯ ತಪಾಸಣೆ ನಡೆಸಬಹುದು.

ವೈಟ್ ಲಿಫ್ಟರ್ ಗಳು 150 ಕೆ.ಜಿ., 200 ಕೆ.ಜಿ. ಭಾರ ಎತ್ತುವುದನ್ನು ನೋಡಿರಬಹುದು. ಇದೆಲ್ಲವೂ ಒಂದೇ ದಿನದಲ್ಲಿ ಆಗುವ ಕೆಲಸವಲ್ಲ. ಅವರು ಹಂತ ಹಂತವಾಗಿ ತರಬೇತಿ ಪಡೆದು ಆ ರೀತಿ ಭಾರ ಎತ್ತುತ್ತಾರೆ. ಹೀಗಾಗಿ ನಾವು ಜಿಮ್ ಮಾಡಲು ಆರಂಭಿಸಿದ ದಿನವೇ ಅತಿಯಾದ ಭಾರ ಎತ್ತುವುದು, ವರ್ಕೌಟ್ ಮಾಡುವುದು ಮಾಡಲು ಹೋದರೆ ಅದು ಹೃದಯದ ಮೇಲೆ ಪರಿಣಾಮ ಬೀರಬಹುದು. ಹಂತ ಹಂತವಾಗಿ ಸರಿಯಾದ ಸಲಹೆ ಪಡೆದುಕೊಂಡು ವರ್ಕೌಟ್ ಮಾಡಬೇಕು. ವರ್ಕೌಟ್ ಮಾಡುವುದು ಹೃದಯಕ್ಕೆ ಒಳ್ಳೆಯದು. ಆದರೆ ಅತಿಯಾಗಿ ಮತ್ತು ಒಮ್ಮೆಲೇ ಅತಿಯಾದ ವರ್ಕೌಟ್ ಮಾಡುವುದು ಹೃದಯಕ್ಕೆ ಭಾರವಾಗಬಹುದು ಎಂಬುದು ಡಾ ಸಿಎನ್ ಮಂಜುನಾಥ್ ಅವರ ಅಭಿಪ್ರಾಯವಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Video: ಎಎಪಿ ವಿರುದ್ಧ ಮತ್ತೆ ಸಿಡಿದೆದ್ದ ಸಂಸದ ರಾಘವ್ ಚಡ್ಡಾ: ಇದು ಟ್ರೈಲರ್‌ ಅಷ್ಟೇ

ಮದುವೆ ಪ್ರವಾಸಕ್ಕಾಗಿ ಒಂದು ಟ್ರೈನ್‌ ಅನ್ನೇ ಬುಕ್ ಮಾಡಿದ ಕುಟುಂಬ, ಸಂಭ್ರಮದ ಕ್ಷಣ ಇಲ್ಲಿದೆ

ಇಚ್ಚೆಗೆ ವಿರುದ್ಧವಾಗಿ ಮದುವೆ, ಮಗಳನ್ನು ಕೊಂದು ಆತ್ಮಹತ್ಯೆ ಎಂದು ಬಿಂಬಿಸಲು ಸಹಕರಿಸಿದ್ದ ಪೊಲೀಸ್‌ ಸಸ್ಪೆಂಡ್‌

ಕಾಂಗ್ರೆಸ್ಸಿನವರು ಡಿ.ಕೆ.ಶಿವಕುಮಾರ್ ಹೇಳಿದಂತೆ ಬಂದು ಗೂಂಡಾಗಿರಿ: ಆರ್.ಅಶೋಕ್

ಮನೆ ಹೊರಗಡೆ ಹಾಕಿದ್ದ ಬಲ್ಬ್‌ ಎಸ್ಕೇಪ್ ಮಾಡಲು ಖದೀಮರ ಮಾಸ್ಟರ್ ಪ್ಲಾನ್ ನೋಡಿ, Video

ಮುಂದಿನ ಸುದ್ದಿ
Show comments