ಜಡೇಜಾ-ಅಶ್ವಿನ್ ಗೆ ಯಾಕೆ ವಿಶ್ರಾಂತಿ? ವಿರಾಟ್ ಕೊಹ್ಲಿ ಹೇಳಿದ್ದು ಹೀಗೆ!

Webdunia
ಭಾನುವಾರ, 22 ಅಕ್ಟೋಬರ್ 2017 (09:48 IST)
ಮುಂಬೈ: ಟೀಂ ಇಂಡಿಯಾ ಏಕದಿನ ತಂಡಕ್ಕೆ ಹಿರಿಯ ಸ್ಪಿನ್ ಜೋಡಿ ರವಿಚಂದ್ರನ್ ಅಶ್ವಿನ್ ಮತ್ತು ರವೀಂದ್ರ ಜಡೇಜಾರನ್ನು ಕಡೆಗಣಿಸುತ್ತಿರುವುದು ಏಕೆ? ಇದಕ್ಕೆ ಸ್ವತಃ ನಾಯಕ ಕೊಹ್ಲಿ ಉತ್ತರಿಸಿದ್ದಾರೆ.

 
ನ್ಯೂಜಿಲೆಂಡ್ ವಿರುದ್ಧದ ಏಕದಿನ ಪಂದ್ಯಕ್ಕೆ ಮೊದಲು ಮಾತನಾಡಿದ ಅವರು ‘ಮುಂಬರುವ ವಿಶ್ವಕಪ್ ಗೆ ಮೊದಲು ನಮ್ಮ ಬಳಿ ಉತ್ತಮ ಬೌಲಿಂಗ್ ಕಾಂಬಿನೇಷನ್ ಬೇಕು. ಅಶ್ವಿನ್-ಜಡೇಜಾ ಕಳೆದ 6-7 ವರ್ಷಗಳಿಂದ ಕ್ರಿಕೆಟ್ ಆಡುತ್ತಲೇ ಇದ್ದಾರೆ.

ಇದೀಗ ಯುವ ಆಟಗಾರರು ಅವರ ಸ್ಥಾನದಲ್ಲಿ ಉತ್ತಮ ಪ್ರದರ್ಶನ ತೋರುತ್ತಿದ್ದಾರೆ. ಇದರಿಂದಾಗಿ ನಮಗೆ ಉತ್ತಮ ಬೌಲಿಂಗ್ ಆಯ್ಕೆ ಸಿಗುತ್ತಿದೆ. ಹೀಗಾಗಿಯೇ ಇವರಿಬ್ಬರನ್ನು ಕಣಕ್ಕಿಳಿಸಲಾಗುತ್ತಿದೆ’ ಎಂದು ಕೊಹ್ಲಿ ಹೇಳಿದ್ದಾರೆ. ಈ ನಡುವೆ ಆರಂಭಿಕರ ಸ್ಥಾನಕ್ಕೆ ಈ ಪಂದ್ಯದಲ್ಲಿ ಶಿಖರ್ ಧವನ್ ತಂಡಕ್ಕೆ ಮರಳಿರುವುದರಿಂದ ರೋಹಿತ್ ಶರ್ಮಾ ಜತೆಗೆ ಅವರೇ ಕಣಕ್ಕಿಳಿಯುತ್ತಾರೆ. ಅಜಿಂಕ್ಯಾ ರೆಹಾನೆ ನಮ್ಮ ಮೂರನೇ ಆಯ್ಕೆ ಎಂದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಶ್ರೇಯಾಂಕ ಪಾಟೀಲ್ ಅಂದುಕೊಂಡಿದ್ದು ಆಗಲೇ ಇಲ್ಲ: ವಿಶ್ವಕಪ್ ನಿಂದಲೇ ಔಟ್

IPL 2027: ಐಪಿಎಲ್ 2027 ರ ಆರಂಭಿಕ ದಿನಾಂಕ ಪ್ರಕಟಿಸಿದ ಬಿಸಿಸಿಐ; ಇಲ್ಲಿದೆ ಸಂಪೂರ್ಣ ಅಪ್‌ಡೇಟ್ಸ್

ಲಾರ್ಡ್ಸ್ ನಲ್ಲಿ ಭಾರತಕ್ಕೆ ವಿಶ್ವಕಪ್ ಗೆದ್ದುಕೊಡಬೇಕು ಎಂದಿದ್ದ ಶ್ರೇಯಾಂಕ ಪಾಟೀಲ್: ಇದೇನಾಗಿ ಹೋಯ್ತು

IND vs AFG: ಅಫ್ಘಾನಿಸ್ತಾನ ವಿರುದ್ಧ ಟೀಂ ಇಂಡಿಯಾಗೆ ಮತ್ತೊಂದು ಸುಲಭ ಜಯ

ICC Women T20 WC: ಕ್ವೀನ್ ಎಂದು ಸುಮ್ನೇ ಹೇಳಲ್ಲ.. ಹರ್ಮನ್ ಪ್ರೀತ್ ಕೌರ್ ನ್ನೇ ಹಿಂದಿಕ್ಕಿದ ಸ್ಮೃತಿ ಮಂಧಾನ

ಮುಂದಿನ ಸುದ್ದಿ
Show comments