Webdunia - Bharat's app for daily news and videos

Install App

ಮೊದಲ ಟೆಸ್ಟ್ ನಿಂದ ರಿಷಬ್ ಪಂತ್ ಔಟ್: ವೃದ್ಧಿಮಾನ್ ಸಹಾ ಆಯ್ಕೆಗೆ ಕೊಹ್ಲಿ ನೀಡಿದ ಕಾರಣವಿದು

Webdunia
ಬುಧವಾರ, 2 ಅಕ್ಟೋಬರ್ 2019 (07:40 IST)
ವಿಶಾಖಪಟ್ಟಣ: ಭಾರತ ಮತ್ತು ದ.ಆಫ್ರಿಕಾ ವಿರುದ್ಧ ಇಂದಿನಿಂದ ಆರಂಭವಾಗುತ್ತಿರುವ ಮೊದಲ ಟೆಸ್ಟ್ ಪಂದ್ಯದಿಂದ ರಿಷಬ್ ಪಂತ್ ಗೆ ಕೊಕ್ ನೀಡಿ ವೃದ್ಧಿಮಾನ್ ಸಹಾಗೆ ಅವಕಾಶ ನೀಡಿರುವುದರ ಬಗ್ಗೆ ನಾಯಕ ವಿರಾಟ್ ಕೊಹ್ಲಿ ಸ್ಪಷ್ಟನೆ ನೀಡಿದ್ದಾರೆ.


ಹಲವು ದಿನಗಳ ಬಳಿಕ ವಿಕೆಟ್ ಕೀಪರ್ ಸ್ಥಾನಕ್ಕೆ ಮತ್ತೆ ವೃದ್ಧಿಮಾನ್ ಸಹಾ ಕಮ್ ಬ್ಯಾಕ್ ಮಾಡಿದ್ದಾರೆ. ಇದಕ್ಕೂ ಮೊದಲು ಗಾಯಗೊಂಡು ಸಹಾ ಹಲವು ದಿನಗಳ ಕಾಲ ಬ್ರೇಕ್ ಪಡೆದಿದ್ದರು. ಇದಾದ ಬಳಿಕ ರಿಷಬ್ ಪಂತ್ ರನ್ನು ಭವಿಷ್ಯದ ವಿಕೆಟ್ ಕೀಪರ್ ಆಗಿ ತಯಾರು ಮಾಡುವ ಉದ್ದೇಶದಿಂದ ಹೆಚ್ಚಿನ  ಅವಕಾಶ ಪಂತ್ ಗೇ ನೀಡಲಾಗುತ್ತಿತ್ತು.

ಆದರೆ ಪಂತ್ ಫಾರ್ಮ್ ಕಳೆದುಕೊಂಡಿರುವ ಹಿನ್ನಲೆಯಲ್ಲಿ ಮತ್ತೆ ಸಹಾಗೆ ಮಣೆ ಹಾಕಲಾಗಿದೆ. ಈ ಬಗ್ಗೆ ಮಾತನಾಡಿರುವ ವಿರಾಟ್ ಕೊಹ್ಲಿ ‘ವೃದ್ಧಿಮಾನ್ ಸಹಾ ಫಿಟ್ ಆಗಿ ಮರಳಿರುವುದು ಖುಷಿಯ ಸಂಗತಿ. ಅವರು ಈ ಫಾರ್ಮ್ಯಾಟ್ ನಲ್ಲಿ ವಿಶ್ವದ ಶ್ರೇಷ್ಠ ವಿಕೆಟ್ ಕೀಪರ್ ಗಳಲ್ಲೊಬ್ಬರು. ರಿಷಬ್ ಕೂಡಾ ಪ್ರತಿಭಾವಂತರು. ಆದರೆ ರಿಷಬ್ ಫಿನಿಶರ್ ಆಗಿ, ಒತ್ತಡ ನಿಭಾಯಿಸಲು ಇನ್ನೂ ಕಲಿಯುವುದು ಸಾಕಷ್ಟಿದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತದ ಕೀರ್ತಿ ಪತಾಕೆಯನ್ನು ಬಾನೆತ್ತರಕ್ಕೆ ಹಾರಿಸಿದ ಶಿಲ್ಪಾಗೆ ಬಂಪರ್ ಬಹುಮಾನ

ಪದೇ ಪದೇ ಆಟಗಾರರಿಗೆ ಗಾಯ, ಫಿಟ್ನೆಸ್ ವಿಚಾರಕ್ಕೆ ಬಿಸಿಸಿಐ ಅಸಮಾಧಾನ

ರೋಹಿತ್ ಶರ್ಮಾರನ್ನು ಹೊರಹಾಕ್ತೀನಿ ಎಂದು ಅಜಿತ್ ಅಗರ್ಕರ್ ಗೆ ತಾನೇ ನಡೆಯುವ ಪರಿಸ್ಥಿತಿ: ಟ್ರೋಲ್

ಫ್ರಾಂಚೈಸಿ ಕ್ರಿಕೆಟ್‌ನಲ್ಲಿ ಹೊಸ ಇನಿಂಗ್ಸ್‌ ಆರಂಭಿಸಿದ ಭಾರತದ ಮಾಜಿ ವೇಗಿ ಜಹೀರ್ ಖಾನ್

ಮುಂದಿನ ಸುದ್ದಿ
Show comments