Publish Date: Sat, 01 Aug 2020 (13:17 IST)
Updated Date: Sat, 01 Aug 2020 (13:19 IST)
ಮುಂಬೈ: ಕೊರೋನಾ ಮಹಾಮಾರಿ ಇರುವಾಗಲೇ ಕ್ರಿಕೆಟ್ ಆರಂಭಿಸಲು ಬಿಸಿಸಿಐ ತಯಾರಿ ನಡೆಸುತ್ತಿದೆ. ಈ ನಡುವೆ ದೇಶೀಯ ಕ್ರಿಕೆಟ್ ಆಯೋಜಿಸುವ ಬಗ್ಗೆ ‘ವಾಲ್’ ರಾಹುಲ್ ದ್ರಾವಿಡ್ ಎಚ್ಚರಿಕೆ ನೀಡಿದ್ದಾರೆ.
ದೇಶೀಯ ಕ್ರಿಕಟ್ ನಲ್ಲಿ ಆಟಗಾರರಿಗೆ ಕೊರೋನಾ ಬಾರದಂತೆ ಎಚ್ಚರಿಕೆ ವಹಿಸಲು ‘ಬಯೋ ಸೆಕ್ಯೂರ್’ ವಾತಾವರಣ ಸೃಷ್ಟಿಸುವುದು ಸುಲಭವಲ್ಲ. ಇಂತಹ ಪರಿಸ್ಥಿತಿಯಲ್ಲಿ ಕ್ರಿಕೆಟ್ ಆಯೋಜಿಸಿದರೆ ಕ್ರಿಕೆಟಿಗರಿಗೆ ಕಷ್ಟ ಎಂದು ದ್ರಾವಿಡ್ ಅಭಿಪ್ರಾಯಪಟ್ಟಿದ್ದಾರೆ.
‘ಅಕ್ಟೋಬರ್ ನಂತರ ಪರಿಸ್ಥಿತಿ ಕಠಿಣವಾಗಲಿದೆ. ದೇಶೀಯ ಕ್ರಿಕೆಟ್ ಆರಂಭವಾಗುವ ಈ ಸಮಯದಲ್ಲಿ ಕೊರೋನಾ ಪರಿಣಾಮ ಕಾಡಲಿದೆ. ಇದು ನಮ್ಮ ದೇಶೀಯ ಕ್ರಿಕೆಟ್ ಮತ್ತು ಆಟಗಾರರ ಮೇಲೆ ಪರಿಣಾಮ ಬೀರಲಿದೆ’ ಎಂದು ದ್ರಾವಿಡ್ ಎಚ್ಚರಿಸಿದ್ದಾರೆ.