ದುಡ್ಡಿಲ್ಲದೇ ಒದ್ದಾಡುವ ಯುವ ಕ್ರಿಕೆಟಿಗರ ನೆರವಿಗೆ ಧಾವಿಸಿದ ರಾಹುಲ್ ದ್ರಾವಿಡ್

Webdunia
ಶುಕ್ರವಾರ, 1 ಫೆಬ್ರವರಿ 2019 (09:09 IST)
ಮುಂಬೈ: ಕ್ರಿಕೆಟಿಗ ಎಂದರೆ ಹಣಕಾಸಿಗೆ ಏನೂ ಕೊರತೆಯಿಲ್ಲ ಎನ್ನುವುದು ಎಲ್ಲಾ ಕ್ರಿಕೆಟಿಗರ ವಿಚಾರದಲ್ಲಿ ಸತ್ಯವಲ್ಲ. ಅವಕಾಶಗಳಿಲ್ಲದೇ ಹೋದಾಗ, ಫಾರ್ಮ್ ಕಳೆದುಕೊಂಡು ಮೂಲೆಗುಂಪಾದಾಗ ಕ್ರಿಕೆಟಿಗರೂ  ಹಣಕ್ಕಾಗಿ ಪರದಾಡಬೇಕಾಗುತ್ತದೆ.


ಈ ರೀತಿ ಹಣಕಾಸಿನ ಮುಗ್ಗಟ್ಟು ಎದುರಿಸುವ ಯುವ ಕ್ರಿಕೆಟಿಗರ ನೆರವಿಗೆ ಇದೀಗ ರಾಹುಲ್ ದ್ರಾವಿಡ್ ಧಾವಿಸಿದ್ದಾರೆ. ಇಂತಹ ಕ್ರಿಕೆಟಿಗರಿಗೆ ಕ್ರಿಕೆಟ್ ಹೊರತಾಗಿ ಬೇರೊಂದು ಕ್ಷೇತ್ರದಲ್ಲಿ ಉದ್ಯೋಗ ಮಾಡಲು ನೆರವಾಗುವಂತೆ ಬಿಸಿಸಿಐ ಅಧಿಕಾರಿಗಳಿಗೆ ದ್ರಾವಿಡ್ ಸಲಹೆ ನೀಡಿದ್ದಾರೆ.

ದ್ರಾವಿಡ್ ಸಲಹೆಯನ್ನು ಗಂಭೀರವಾಗಿ ಪರಿಗಣಿಸಿರುವ ಬಿಸಿಸಿಐ ಮತ್ತು ಎನ್ ಸಿಎ ಅಧಿಕಾರಿಗಳು ಕ್ರಿಕೆಟಿಗರಿಗೆ ಕ್ರಿಕೆಟ್ ಯೇತರ ಕ್ಷೇತ್ರಗಳಲ್ಲೂ ಉದ್ಯೋಗ ಮಾಡಲು ನೆರವಾಗುವಂತಹ ಯೋಜನೆಯೊಂದನ್ನು ರೂಪಿಸಲು ಮುಂದಾಗಿದೆ. ಕ್ರಿಕೆಟ್ ನಿಂದ ನಿವೃತ್ತಿಯಾದ ಮೇಲೆ ಎ ತಂಡದ ಕೋಚ್ ಆಗಿ ಟೀಂ ಇಂಡಿಯಾಕ್ಕೆ ಅತ್ಯುತ್ತಮ ಕ್ರಿಕೆಟಿಗರನ್ನು ತಯಾರು ಮಾಡುತ್ತಿರುವ ದ್ರಾವಿಡ್ ಹಲವಾರು ಬಾರಿ ಯುವ  ಆಟಗಾರರಿಗೆ ನೆರವಾಗಿ ಜಂಟಲ್ ಮೆನ್ ಎನಿಸಿಕೊಂಡಿದ್ದಾರೆ. ಈಗ ದ್ರಾವಿಡ್ ಮತ್ತೊಂದು ಹೆಜ್ಜೆಯಿಟ್ಟಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಧೋನಿ, ಕೊಹ್ಲಿ ಸೋತಿಲ್ವಾ, ಶ್ರೇಯಸ್ ಕೂಡಾ ಅವರಂತೆ ಗ್ರೇಟ್ ಕ್ಯಾಪ್ಟನ್ ಆಗ್ತಾನೆ: ಅಣ್ಣನ ಪರ ತಂಗಿ ಬ್ಯಾಟಿಂಗ್ Video

IND vs ENG: ಟೀಂ ಇಂಡಿಯಾಕ್ಕೆ ಇಂದು ಕೊನೆ ಚಾನ್ಸ್, ಈ ಆಟಗಾರನಿಗೆ ಕೊಕ್ ಸಾಧ್ಯತೆ

IND vs ENG: ವಿ ವಾಂಟ್ ಸಂಜು ಎಂದು ಜೋರಾಗಿ ಕೂಗಿದ ಫ್ಯಾನ್ಸ್: ಗಂಭೀರ್, ತಿಲಕ್ ವರ್ಮ ಮುಖಭಾವ ನೋಡಬೇಕು Video

IND vs ENG: ಟೀಂ ಇಂಡಿಯಾ ಹೀನಾಯವಾಗಿ ಸೋತ ಮೇಲೂ ಪತ್ರಿಕಾಗೋಷ್ಠಿಯಲ್ಲಿ ಕೋಚ್ ಗೌತಮ್ ಗಂಭೀರ್ ಹೀಗೆ ಹೇಳೋದಾ Video

IND vs ENG: ಇಂದು ವೈಭವ್ ಸೂರ್ಯವಂಶಿ ಆಡೋದು ಡೌಟ್, ಎಲ್ಲದಕ್ಕೂ ಕನ್ನಡಿಗ ರಘು ಕಾರಣ Video

ಮುಂದಿನ ಸುದ್ದಿ
Show comments