ಕೆಎಲ್ ರಾಹುಲ್ ಗೆ ಶ್ಯಾನೇ ಬ್ಯಾಸರವಾಗಿದ್ಯಂತೆ!

Webdunia
ಬುಧವಾರ, 22 ನವೆಂಬರ್ 2017 (08:46 IST)
ಕೋಲ್ಕೊತ್ತಾ: ಅದ್ಯಾಕೋ ಕನ್ನಡಿಗ ಬ್ಯಾಟ್ಸ್ ಮನ್ ಕೆಎಲ್ ರಾಹುಲ್ ಅದೃಷ್ಟವೇ ನೆಟ್ಟಗಿಲ್ಲ. ದೇಶೀಯ ಟೂರ್ನಿ ಇರಲಿ, ರಾಷ್ಟ್ರೀಯ ತಂಡವಿರಲಿ, ಅವರಿಗೆ ಬ್ಯಾಟ್ ಮೇಲೆತ್ತಿ ಶತಕ ಸಂಭ್ರಮಾಚರಿಸುವ ಅದೃಷ್ಟವೇ ಕೂಡಿಬರುತ್ತಿಲ್ಲ.
 

ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯಲ್ಲಿ 190 ಕ್ಕೆ ಔಟಾಗಿ ದ್ವಿಶತಕ ಭಾರಿಸಿದ್ದೇ ಕೊನೆ. ಅದಾದ ಬಳಿಕ ರಾಹುಲ್ ಅದೆಷ್ಟೋ ಪಂದ್ಯಗಳನ್ನು ಆಡಿ ತಂಡಕ್ಕೆ ಉತ್ತಮ ಕೊಡುಗೆಯಿತ್ತರೂ ಶತಕ ಭಾರಿಸುವ ಅದೃಷ್ಟ ಕೂಡಿ ಬಂದಿಲ್ಲ.

ರಾಹುಲ್ ಗೆ ಈ ಬಗ್ಗೆ ಭಾರೀ ಬೇಸರವಿದೆಯಂತೆ. ಶತಕ ಭಾರಿಸದಿದ್ದರೂ ಚಿಂತೆಯಿಲ್ಲ, ತಂಡಕ್ಕೆ ಉತ್ತಮ ಆರಂಭ ಕೊಡುತ್ತಿದ್ದೇನಲ್ಲ ಎನ್ನುತ್ತಿದ್ದ ರಾಹುಲ್ ಗೆ ಈಗ ಅರ್ಧಶತಕಕ್ಕೆ ಪದೇ ಪದೇ ಔಟಾಗಿ ತಾವೊಬ್ಬ ಏವರೇಜ್ ಬ್ಯಾಟ್ಸ್ ಮನ್ ಸಾಲಿಗೆ ಸೇರುತ್ತಿರುವುದಕ್ಕೆ ಬೇಸರವಿದೆಯಂತೆ.

‘ಏಳೆಂಟು ಬಾರಿ ನನಗೆ ಹೀಗೇ ಆಗಿದೆ. ಆದರೆ ಒಂದಲ್ಲಾ ಒಂದು ದಿನ ಶತಕ ಭಾರಿಸಿಯೇ ತೀರುತ್ತೇನೆ. ಏನೇ ಆದರೂ ಮೊದಲ ಬಾಲ್ ನಲ್ಲೇ ಔಟ್ ಆಗುವುದಕ್ಕಿಂತ ಬೆಟರ್ ಇದು’ ರಾಹುಲ್ ಹೇಳಿಕೊಂಡಿದ್ದಾರೆ. ವಿಪರ್ಯಾಸವೆಂದರೆ ಈ ಋತುವಿನಲ್ಲಿ ಒಂದು ರಣಜಿ ಪಂದ್ಯವಾಡಿದ್ದ ರಾಹುಲ್ ಅದರಲ್ಲೂ 90 ರ ಆಸುಪಾಸಿನಲ್ಲಿ ಔಟಾಗಿದ್ದರು!

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

Video: ಆರ್ ಸಿಬಿ ಫ್ಯಾನ್ಸ್ ನಿಂದ ಶಾಲಾ ಮಕ್ಕಳಿಗೆ ಉಡುಗೊರೆ: ಅಭಿಮಾನ ಅಂದ್ರೆ ಹೀಗಿರಬೇಕು

IPL 2026: ಎಲ್ಲಿದ್ದೇ ಇಲ್ಲಿ ತನಕ... ಬೌಲರ್ ಅಭಿನಂದನ್ ಸಿಂಗ್ ಮೇಲೆ ಆರ್ ಸಿಬಿ ಫ್ಯಾನ್ಸ್ ಸಿಟ್ಟು

2 ಎಸೆತದಲ್ಲಿ 7ರನ್‌ ಬೇಕಾಗಿರುವಾಗ ಮುಕುಲ್ ಚೌಧರಿ ಸಿಕ್ಸರ್ ಹೊಡೆದಾಗ ಲಕ್ನೋ ಮಾಲೀಕ ಸಂಜೀವ ರಿಯಾಕ್ಷನ್‌ ನೋಡಿ, Video

ರಿಷಭ್ ಪಂತ್ ಈ ಸಲಹೆ ನನಗೆ ವರ್ಕ್ ಆಯಿತು: LSGಗೆ ಗೆಲುವು ತಂದುಕೊಟ್ಟ ಮುಕುಲ್ ಚೌಧರಿ ಮಾತು

ಐಪಿಎಲ್ 2026: ಜಿಟಿ ವಿರುದ್ಧ ಡಿಸಿ ಘರ್ಷಣೆ ವೇಳೆ ಸ್ಲೋ ಓವರ್ ರೇಟ್‌ಗಾಗಿ ಶುಭಮನ್ ಗಿಲ್‌ಗೆ 12 ಲಕ್ಷ ದಂಡ

ಮುಂದಿನ ಸುದ್ದಿ
Show comments