ಕೀಪಿಂಗ್ ಗಷ್ಟೇ ಸೀಮಿತರಾದರೇ ಧೋನಿ?!

Webdunia
ಸೋಮವಾರ, 19 ಫೆಬ್ರವರಿ 2018 (08:33 IST)
ಸೆಂಚೂರಿಯನ್: ಟೀಂ ಇಂಡಿಯಾಕ್ಕೆ ಹೊಸ ಹೊಳಪು ತಂದಿತ್ತ ಧೋನಿ ಇತ್ತೀಚೆಗಿನ ದಿನಗಳಲ್ಲಿ ಬ್ಯಾಟಿಂಗ್ ಮಾಡುವುದೇ ಕಡಿಮೆ. ಅದಕ್ಕಿಂತ ಹೆಚ್ಚಿಗೆ ಹೇಳಬೇಕೆಂದರೆ ಹೊಸಬರ ದರ್ಬಾರ್ ನಲ್ಲಿ ಅವರಿಗೆ ಬ್ಯಾಟಿಂಗ್ ಅವಕಾಶವೇ ಸಿಗುತ್ತಿಲ್ಲ.
 

ಇದಕ್ಕೆ ಕಾರಣ ಧೋನಿ ಬ್ಯಾಟಿಂಗ್ ಕ್ರಮಾಂಕವೂ ಒಂದು. ಇದರಿಂದಾಗಿ ಇತ್ತೀಚೆಗೆ ಧೋನಿ ಆಡುವ ಬಳಗದಲ್ಲಿದ್ದರೂ ಕೇವಲ ಕೀಪಿಂಗ್ ಗೆ ಸೀಮಿತರಾಗಿದ್ದಾರೆ. ವಿಕೆಟ್ ಹಿಂದುಗಡೆ ಇದ್ದುಕೊಂಡೇ ಅವರು ಆಟವನ್ನು ನಿಯಂತ್ರಿಸುವುದರಲ್ಲಿ ಈಗಲೂ ನಿಸ್ಸೀಮರು. ಆದರೂ ಧೋನಿ ಬ್ಯಾಟಿಂಗ್ ಇಷ್ಟಪಡುವ ಅಭಿಮಾನಿಗಳಿಗೆ ನಿರಾಸೆಯಾಗಿದೆ.

ಇದಕ್ಕೆ ಮಾಜಿ ಕ್ರಿಕೆಟಿಗ ಸೆಹ್ವಾಗ್ ನಾಯಕ ಕೊಹ್ಲಿಗೆ ಒಂದು ಸಲಹೆ ನೀಡಿದ್ದಾರೆ. ಧೋನಿಗೆ ಆರನೇ ಕ್ರಮಾಂಕದ ಬದಲು ನಾಲ್ಕನೇ ಕ್ರಮಾಂಕಕ್ಕೆ ಬಡ್ತಿ ನೀಡಬೇಕು. ಇದರಿಂದಾಗಿ ಭಾರತದ ಮಧ್ಯಮ ಕ್ರಮಾಂಕಕ್ಕೆ ಬಲ ಸಿಗುತ್ತದೆ. ಧೋನಿ ಬೇಗ ಔಟಾಗಿಬಿಟ್ಟರೆ ಕೆಳ ಕ್ರಮಾಂಕ ಖಾಲಿಯಾಗುತ್ತದೆ ಎಂಬ ಲೆಕ್ಕಾಚಾರ ಕೊಹ್ಲಿಯದು.

ಆದರೆ ಹಾಗಲ್ಲ. ಧೋನಿಗೆ ಮೊದಲು ಅವಕಾಶ ಮಾಡಿಕೊಟ್ಟು, ಮನೀಶ್ ಪಾಂಡೆ ಅಥವಾ ಹಾರ್ದಿಕ್ ಪಾಂಡ್ಯ ಫಿನಿಶಿಂಗ್ ಕೆಲಸ ಮಾಡಲಿ ಎಂದು ಸೆಹ್ವಾಗ್ ಸಲಹೆ ಇತ್ತಿದ್ದಾರೆ. ಧೋನಿ ಸಿಕ್ಸರ್ ಗೆ ಕಾಯುತ್ತಿರುವ ಅಭಿಮಾನಿಗಳೂ ಇದನ್ನೇ ಬಯಸುತ್ತಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಅಭಿಷೇಕ್ ಶರ್ಮಾ ಹ್ಯಾಟ್ರಿಕ್‌ ಡಕ್‌ ಔಟ್‌: ಅನಗತ್ಯ ದಾಖಲೆ ಮಾಡಿದ ವಿಶ್ವನ ನಂಬರ್‌ ಒನ್‌ ಬ್ಯಾಟರ್‌

T20 World Cup: ನಮೀಬಿಯಾವನ್ನು ಮಣಿಸಿದ ಸೂಪರ್‌ 8 ಸುತ್ತಿಗೆ ಲಗ್ಗೆ ಹಾಕಿದ ಪಾಕಿಸ್ತಾನ

T20 WC: ಡಚ್ಚರ ವಿರುದ್ಧ ಟಾಸ್‌ ಗೆದ್ದ ಸೂರ್ಯಕುಮಾರ್‌: ಭಾರತ ತಂಡದಲ್ಲಿ ಮಹತ್ವದ ಬದಲಾವಣೆ

ಟಿ20 WC: ಸೂಪರ್‌ 8ರಲ್ಲಿ ಭಾರತಕ್ಕೆ ಕಠಿಣ ಪರೀಕ್ಷೆ: ಪ್ರಬಲ ದಕ್ಷಿಣ ಆಫ್ರಿಕಾ ಮೊದಲ ಎದುರಾಳಿ

ಆಸ್ಟ್ರೇಲಿಯಾ ಇಲ್ಲದ ಟಿ20 ವಿಶ್ವಕಪ್ ಸೂಪರ್ 8: ಅದೊಂದು ಅಹಂಕಾರವೇ ಅವನತಿಗೆ ಕಾರಣವಾ

ಮುಂದಿನ ಸುದ್ದಿ
Show comments