Publish Date: Sun, 28 Jan 2018 (08:54 IST)
Updated Date: Sun, 28 Jan 2018 (08:56 IST)
ಬೆಂಗಳೂರು: ಈ ಬಾರಿ ಐಪಿಎಲ್ ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ ಆರ್ ಅಶ್ವಿನ್ ರನ್ನು ಮತ್ತೆ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಕರೆಸಿಕೊಳ್ಳುವುದಾಗಿ ಧೋನಿ ನೀಡಿದ್ದ ಭರವಸೆ ಹುಸಿಯಾಗಿದೆ.
ಅಶ್ವಿನ್ ಪಂಜಾಬ್ ತಂಡದ ಪಾಲಾಗಿದ್ದಾರೆ. ತಮಿಳುನಾಡು ಮೂಲದ ಆಲ್ ರೌಂಡರ್ ಅಶ್ವಿನ್ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಆಡುತ್ತಿದ್ದರು. ಆದರೆ ಚೆನ್ನೈ ತಂಡ ಎರಡು ವರ್ಷ ನಿಷೇಧಕ್ಕೊಳಗಾದಾಗ ಪುಣೆ ತಂಡದಲ್ಲಿ ಧೋನಿಗೆ ಜತೆಯಾಗಿದ್ದರು.
ಆದರೆ ಮತ್ತೆ ಚೆನ್ನೈ ತಂಡ ಕಣಕ್ಕೆ ಮರಳಿದಾಗ ಅಶ್ವಿನ್ ರನ್ನು ಉಳಿಸಿಕೊಳ್ಳಲಿಲ್ಲ. ಈ ಬಗ್ಗೆ ನಾಯಕ ಧೋನಿಯನ್ನು ಪ್ರಶ್ನಿಸಿದಾಗ ಹರಾಜಿನಲ್ಲಿ ಅಶ್ವಿನ್ ರನ್ನು ಕೊಳ್ಳಲು ಶಕ್ತಿ ಮೀರಿ ಪ್ರಯತ್ನಿಸುವುದಾಗಿ ಹೇಳಿದ್ದರು. ಹೀಗಾಗಿ ಅಶ್ವಿನ್ ರ ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿಗಳು ಸಮಾಧಾನಪಟ್ಟುಕೊಂಡಿದ್ದರು. ಆದರೆ ಇದೀಗ ನಿರೀಕ್ಷೆ ಹುಸಿಯಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ