Webdunia - Bharat's app for daily news and videos

Install App

ರೋಹಿತ್ ಶರ್ಮಾ ಮೇಲಿರುವ ಒತ್ತಡ ವಿರಾಟ್ ಕೊಹ್ಲಿ ಮೇಲೆ ಯಾಕಿಲ್ಲ: ಇಲ್ಲಿದೆ ಕಾರಣ

Krishnaveni K
ಗುರುವಾರ, 6 ಫೆಬ್ರವರಿ 2025 (09:23 IST)
ಮುಂಬೈ: ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾಗೆ ತಂಡದಿಂದ ನಿವೃತ್ತಿಯಾಗಲು ಬಿಸಿಸಿಐ ಗಡುವು ನೀಡಿದೆ ಎಂಬ ಮಾತು ಕೇಳಿಬರುತ್ತಿದೆ. ರೋಹಿತ್ ಗಿರುವ ಒತ್ತಡ ಕೊಹ್ಲಿ ಮೇಲೆ ಯಾಕಿಲ್ಲ ಎಂದು ಅವರ ಅಭಿಮಾನಿಗಳು ಕೇಳುತ್ತಿದ್ದಾರೆ. ಅದಕ್ಕೆ ಕಾರಣವೂ ಇದೆ.

ರೋಹಿತ್ ಶರ್ಮಾ ಮತ್ತು  ವಿರಾಟ್ ಕೊಹ್ಲಿ ಇಬ್ಬರೂ ಟೀಂ ಇಂಡಿಯಾದ ದಿಗ್ಗಜ ಆಟಗಾರರು. ಆದರೆ ಕೊಹ್ಲಿಗಿರುವ ಫ್ಯಾನ್ ಫಾಲೋವಿಂಗ್ ರೋಹಿತ್ ಗಿಲ್ಲದೇ ಇರಬಹುದು. ಆದರೆ ರೋಹಿತ್ ತಂಡಕ್ಕೆ ಐಸಿಸಿ ಟ್ರೋಫಿ ಗೆದ್ದುಕೊಟ್ಟ ಕ್ಯಾಪ್ಟನ್.

ಆದರೆ ರೋಹಿತ್ ಗೆ ಚಾಂಪಿಯನ್ಸ್ ಟ್ರೋಫಿ ಬಳಿಕ ನಿವೃತ್ತಿಯಾಗಲು ಬಿಸಿಸಿಐ ಗಡುವು ನೀಡಿದೆ ಎನ್ನಲಾಗಿದೆ. ಇದಕ್ಕೆ ಬಹುಶಃ ಅವರ ನಾಯಕತ್ವವೇ ಕಾರಣವಾಗಿದೆ. ಮುಂಬರುವ ಏಕದಿನ ವಿಶ್ವಕಪ್ ಇರುವುದು ಎರಡು ವರ್ಷಗಳ ಬಳಿಕ. ಆ ವೇಳೆಗೆ ತಂಡಕ್ಕೆ ಹೊಸ ನಾಯಕನನ್ನು ತಯಾರು ಮಾಡಬೇಕಿದೆ. ಹೊಸ ನಾಯಕನನ್ನು ಬೆಳೆಸಬೇಕಾದರೆ ರೋಹಿತ್ ನಿವೃತ್ತಿಯಾಗಬೇಕು ಎಂಬುದು ಬಿಸಿಸಿಐ ನಿಲುವು. ಒಂದು ವೇಳೆ ರೋಹಿತ್ ಕೇವಲ ಬ್ಯಾಟಿಗನಾಗಿ ಮುಂದುವರಿಯಬೇಕಿದ್ದರೆ ಅವರು ದೊಡ್ಡ ಮೊತ್ತ ಗಳಿಸಲೇಬೇಕು.

ಆದರೆ ವಿರಾಟ್ ಕೊಹ್ಲಿಗೆ ಸದ್ಯಕ್ಕೆ ನಾಯಕತ್ವದ ಒತ್ತಡವಿಲ್ಲ. ಅವರು ಕೇವಲ ಆಟಗಾರನಾಗಿರುವುದರಿಂದ ತಮ್ಮ ಆಟದ ಬಗ್ಗೆ ಗಮನ ಕೇಂದ್ರೀಕರಿಸಿದರೆ ಸಾಕು. ಜೊತೆಗೆ ರೋಹಿತ್ ಗಿಂತ ಅವರು ಒಂದು ವರ್ಷ ಕಿರಿಯರು. ಜೊತೆಗೆ ಫಿಟ್ನೆಸ್ ನಲ್ಲೂ ನಂ.1 ಹೀಗಾಗಿ ಕೊಹ್ಲಿಗೆ ಸದ್ಯಕ್ಕೆ ವಿನಾಯ್ತಿ ನೀಡಲಾಗಿದೆ ಎನ್ನಲಾಗುತ್ತಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IPL 2025: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಟಿಮ್ ಡೇವಿಡ್ ನೀರಾಟ, Video Viral

Virat Kohli: ವಿರಾಟ್ ಕೊಹ್ಲಿ ನಿವೃತ್ತಿ ಬಗ್ಗೆ ಶಾಕಿಂಗ್ ಸತ್ಯ ರಿವೀಲ್ ಮಾಡಿದ ರವಿಶಾಸ್ತ್ರಿ

IPL 2025: ಪ್ಲೇ ಆಫ್‌ಗೆ ಜೀವ ತುಂಬಲು ಮತ್ತೇ ಆರ್‌ಸಿಬಿಯನ್ನು ಸೇರಿಕೊಂಡ ಟಿಮ್ ಡೇವಿಡ್‌

Rajat Patidar: ಆರ್ ಸಿಬಿ ಅಭಿಮಾನಿಗಳ ಆತಂಕ ನಿವಾರಸಿದ ರಜತ್ ಪಾಟೀದಾರ್

Boycott Delhi Capitals ಟ್ರೆಂಡ್: ಭಾರತ ವಿರೋಧಿ ದೇಶದ ಆಟಗಾರನೇ ಕಾರಣ

ಮುಂದಿನ ಸುದ್ದಿ
Show comments