Webdunia - Bharat's app for daily news and videos

Install App

ಆರ್ ಸಿಬಿ ಗೆಲುವಿನ ಬೆನ್ನಲ್ಲೇ ಸಿಎಸ್ ಕೆ ಡ್ರೆಸ್ಸಿಂಗ್ ರೂಂಗೆ ಹೋಗಿದ್ದೇಕೆ ವಿರಾಟ್ ಕೊಹ್ಲಿ

Krishnaveni K
ಸೋಮವಾರ, 20 ಮೇ 2024 (08:50 IST)
Photo Courtesy: X
ಬೆಂಗಳೂರು: ಐಪಿಎಲ್ 2024 ರಲ್ಲಿ ಸಿಎಸ್ ಕೆ ತಂಡದ ವಿರುದ್ಧ ಗೆದ್ದು ಪ್ಲೇ ಆಫ್ ಗೇರಿದ ಸಂಭ್ರಮದಲ್ಲಿದ್ದ ಆರ್ ಸಿಬಿ ಆಟಗಾರರು ಕೆಲವು ವಿವಾದಕ್ಕೂ ಕಾರಣವಾಗಿದ್ದಾರೆ. ಪಂದ್ಯ ಮುಗಿದ ಕೂಡಲೇ ಕೊಹ್ಲಿ ನೇರವಾಗಿ ಧೋನಿಯನ್ನು ಹುಡುಕಿಕೊಂಡು ಸಿಎಸ್ ಕೆ ಡ್ರೆಸ್ಸಿಂಗ್ ರೂಂಗೆ ತೆರಳಿದ್ದಾರೆ.

ಗೆಲುವಿನ ಬಳಿಕ ಧೋನಿ ಆರ್ ಸಿಬಿ ಆಟಗಾರರಿಗೆ ಕೈ ಕುಲುಕಲು ತಂಡದ ಸಾರಥ್ಯ ವಹಿಸಿದ್ದರು. ಆದರೆ ಆರ್ ಸಿಬಿ ಆಟಗಾರರು ತಮ್ಮ ಸಂಭ್ರಮದಲ್ಲಿ ಮುಳುಗಿದ್ದರು. ಹೀಗಾಗಿ ಧೋನಿ ಋತುರಾಜ್ ಗಾಯಕ್ ವಾಡ್ ರನ್ನು ಮುಂದೆ ಬಿಟ್ಟು ಕೈ ಕುಲುಕಲು ಹೇಳಿ ಮೈದಾನದಿಂದ ಹೊರನಡೆದಿದ್ದರು. ವಿರಾಟ್ ಕೊಹ್ಲಿಗೂ ಧೋನಿ ಕೈಕುಲುಕಲಿಲ್ಲ.

ಇದು ಕೊಹ್ಲಿ ಗಮನಕ್ಕೆ ಬಂದಿತ್ತು. ಹೀಗಾಗಿ ಕೊಹ್ಲಿ ನೇರವಾಗಿ ಧೋನಿಯನ್ನು ಹುಡುಕಿಕೊಂಡು ಸಿಎಸ್ ಕೆ ಡ್ರೆಸ್ಸಿಂಗ್ ರೂಂಗೆ ತೆರಳಿದ್ದರು. ಧೋನಿ ಎಂದರೆ ಕೊಹ್ಲಿಗೆ ಎಷ್ಟು ಗೌರವ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಧೋನಿ ತಮ್ಮ ಕ್ಯಾಪ್ಟನ್, ನಾನು ಸಂಕಷ್ಟದಲ್ಲಿದ್ದಾಗ ಏನೊಂದೂ ಕೇಳದೇ ಸಹಾಯಕ್ಕೆ ಬಂದವರು ಎಂದು ಕೊಹ್ಲಿ ಹೇಳುತ್ತಲೇ ಇರುತ್ತಾರೆ.

ಇದೀಗ ಧೋನಿ ಬೇಸರಿಂದ ಮೈದಾನದಿಂದ ಹೊರನಡೆದಿದ್ದು ಕೊಹ್ಲಿ ಗಮನಿಸಿದ್ದಾರೆ. ಹೀಗಾಗಿ ಧೋನಿಯನ್ನು ಹುಡುಕುತ್ತಾ ನೇರವಾಗಿ ಅವರು ಸಿಎಸ್ ಕೆ ಡ್ರೆಸ್ಸಿಂಗ್ ರೂಂಗೆ ತೆರಳಿದ್ದಾರೆ. ಆರ್ ಸಿಬಿ ಆಟಗಾರರ ವರ್ತನೆ ಸಿಎಸ್ ಕೆ ಅಭಿಮಾನಿಗಳ ಕಣ್ಣು ಕೆಂಪಗಾಗಿಸಿತ್ತು.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

KL Rahul: ಟೀಂ ಇಂಡಿಯಾ ಟೆಸ್ಟ್ ತಂಡಕ್ಕೆ ಕೆಎಲ್ ರಾಹುಲ್ ನಾಯಕನಾಗಬೇಕಾ ಶುಬ್ಮನ್ ಗಿಲ್ ಬೇಕಾ

IPL 2025: ಟೈಟನ್ಸ್‌ ವಿರುದ್ಧ ಡೆಲ್ಲಿಗೆ ಮುಖಭಂಗ: ಗುಜರಾತ್‌, ಆರ್‌ಸಿಬಿ, ಪಂಜಾಬ್‌ ತಂಡಗಳಿಗೆ ಪ್ಲೇಆಫ್‌ ಟಿಕೆಟ್‌

ಜೀವಬೆದರಿಕೆ ಬೆನ್ನಲ್ಲೇ ತಿರುಪತಿಗೆ ಟೀ ಇಂಡಿಯಾ ಕೋಚ್ ಭೇಟಿ, ಇಬ್ಬರು ಮಕ್ಕಳನ್ನು ಕೈಹಿಡಿದು ನಡೆದ ಗೌತಮ್ ಗಂಭೀರ್‌

ದೋಹಾ ಡೈಮಂಡ್‌ ಲೀಗ್‌ನಲ್ಲಿ ನೀರಜ್ ಚೋಪ್ರಾ ವಿರುದ್ಧ ಸ್ಪರ್ಧಿಸದ ಪಾಕ್‌ನ ಅರ್ಷದ್‌ ನದೀಮ್, ಕಾರಣ ಹೀಗಿದೆ

ಮುಂದಿನ ಸುದ್ದಿ
Show comments