Publish Date: Mon, 02 Mar 2020 (09:53 IST)
Updated Date: Mon, 02 Mar 2020 (09:55 IST)
ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪಾಲಿಗೆ ಇಂದು ವಿಶೇಷ ದಿನ. ಆದರೆ ಇಂದೇ ಅವರು ಟೆಸ್ಟ್ ಸರಣಿ ಸೋಲಿನ ಬೇಸರದಲ್ಲಿರುವುದು ವಿಪರ್ಯಾಸ.
ಇದೇ ದಿನ 11 ವರ್ಷಗಳ ಹಿಂದೆ ವಿರಾಟ್ ಅಂಡರ್ 19 ವಿಶ್ವಕಪ್ ತಂಡದ ನೇತೃತ್ವ ವಹಿಸಿ ಫೈನಲ್ ನಲ್ಲಿ ಗೆಲುವು ಸಾಧಿಸಿದ್ದು. ವಿಪರ್ಯಾಸವೆಂದರೆ ಅಂದು ವಿಶ್ವಕಪ್ ಗೆಲ್ಲಿಸಿ ಮೆರೆದಿದ್ದ ಕೊಹ್ಲಿ ಇಂದು ಅದೇ ದಿನ ಸರಣಿ ಸೋಲಿನ ಬೇಸರದಲ್ಲಿ ಕೂರುವಂತಾಗಿದೆ.
ಆದರೆ ಕೊಹ್ಲಿ ಅಭಿಮಾನಿಗಳು ಮಾತ್ರ ತಮ್ಮ ನೆಚ್ಚಿನ ತಾರೆಯ ಬೆಂಬಲಕ್ಕೆ ನಿಂತಿದ್ದು, ಗಾಯಗೊಂಡ ಸಿಂಹ ಯಾವತ್ತೂ ಎರಡು ಪಟ್ಟು ಭೀಕರವಾಗಿ ದಾಳಿ ಮಾಡುತ್ತದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಎಚ್ಚರಿಕೆಯ ಸಂದೇಶ ಬರೆದುಕೊಂಡಿದ್ದಾರೆ.