Webdunia - Bharat's app for daily news and videos

Install App

ಕೆಎಲ್ ರಾಹುಲ್ ಗೆ ಮುಚ್ಕೊಂಡು ಸಹಿ ಹಾಕು ಎಂದಿದ್ದರಂತೆ ವಿರಾಟ್ ಕೊಹ್ಲಿ

Krishnaveni K
ಶುಕ್ರವಾರ, 19 ಏಪ್ರಿಲ್ 2024 (15:10 IST)
Photo Courtesy: Twitter
ಮುಂಬೈ: ಪ್ರಸಕ್ತ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕರಾಗಿರುವ ಟೀಂ ಇಂಡಿಯಾ ಕ್ರಿಕೆಟಿಗ ಕೆಎಲ್ ರಾಹುಲ್ ಈ ಹಿಂದೆ ಆರ್ ಸಿಬಿ ಜೊತೆ ಒಪ್ಪಂದ ಮಾಡಿಕೊಳ್ಳುವಾಗ ನಡೆದ ಘಟನೆಯೊಂದನ್ನು ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ.

ಕರ್ನಾಟಕ ಮೂಲದ ಕ್ರಿಕೆಟಿಗ ಕೆಎಲ್ ರಾಹುಲ್ 2013 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಸೇರ್ಪಡೆಯಾಗಿದ್ದರು. ಈ ವೇಳೆ ವಿರಾಟ್ ಕೊಹ್ಲಿ ಜೊತೆಗೆ ನಡೆದ ಘಟನೆಯನ್ನು ರವಿಚಂದ್ರನ್ ಅಶ್ವಿನ್ ಅವರ ಯೂ ಟ್ಯೂಬ್ ಚಾನೆಲ್ ಗೆ ನೀಡಿದ ಸಂದರ್ಶನದಲ್ಲಿ ರಾಹುಲ್ ಬಹಿರಂಗಪಡಿಸಿದ್ದಾರೆ.

ಆಗ ನನಗೆ 20 ವರ್ಷವಷ್ಟೇ. 2013 ರಲ್ಲಿ ಆರ್ ಸಿಬಿ ತಂಡಕ್ಕೆ ಆಯ್ಕೆಯಾಗಿದ್ದೆ. ಅದೊಂಥರಾ ನನಗೆ ಕನಸು ನನಸಾದ ಕ್ಷಣ. ನನಗಿನ್ನೂ ನೆನಪಿದೆ. ನನ್ನನ್ನು ಹೋಟೆಲ್ ಐಟಿಸಿ ಗಾರ್ಡೇನಿಯಾಗೆ ಕರೆಸಿದ್ದರು. ಅಲ್ಲಿ ಕೋಚ್ ರೇ ಜೆನಿಂಗ್ಸ್, ನಾಯಕ ವಿರಾಟ್ ಕೊಹ್ಲಿ ಇದ್ದರು.

ನನಗೆ ಒಪ್ಪಂದ ಪತ್ರ ನೀಡಿದ ಬಳಿಕ ಕೊಹ್ಲಿ ಕೇಳಿದರು ‘ನೀನು ನಿಜವಾಗಿಯೂ ಆರ್ ಸಿಬಿ ಪರ ಆಡಲು ತಯಾರಿದ್ದೀಯಲ್ವಾ?’ ನನಗೆ ‘ಅರೆ ಯಾಕಿಲ್ಲ. ಇದು ನನ್ನ ಕನಸು ನನಸಾದ ಕ್ಷಣ’ ಎಂಬ ಭಾವದಲ್ಲಿ ಅವರನ್ನು ನೋಡಿದೆ. ಬಳಿಕ ವಿರಾಟ್ ‘ ನಾನು ತಮಾಷೆ ಮಾಡಿದೆ ಅಷ್ಟೇ. ನಿನಗೆ ಬೇರೆ ಆಯ್ಕೆಯೇ ಇಲ್ಲ, ಮುಚ್ಕೊಂಡು ಸಹಿ ಹಾಕು’ ಎಂದರು. ನಾನು ಸಹಿ ಹಾಕಿದ ಬಳಿಕ ವಿರಾಟ್ ‘ಈ ಪ್ರಯಾಣ  ಕ್ರೇಝಿಯಾಗಿರುತ್ತದೆ. ಮುಂದಿನ ಕೆಲವು ತಿಂಗಳು ನೀನು ಎಂಜಾಯ್ ಮಾಡುವೆ’ ಎಂದರು.

ಆದರೆ ಆ ಸೀಸನ್ ರಾಹುಲ್ ಪಾಲಿಗೆ ಯಶಸ್ವಿಯಾಗಿರಲಿಲ್ಲ. ಬಳಿಕ ಅವರು ಹೈದರಾಬಾದ್ ತಂಡದ ಪರ ಆಡಿದರು. ಮತ್ತೆ 2016 ರಲ್ಲಿ ಆರ್ ಸಿಬಿಗೆ ಬಂದಾಗ 14 ಪಂದ್ಯಗಳಿಂದ 397 ರನ್ ಗಳಿಸಿದ್ದರು. ಇದಾದ ಬಳಿಕ ಪಂಜಾಬ್ ತಂಡಕ್ಕೆ ಅವರು 11 ಕೋಟಿ ರೂ.ಗೆ ಬಿಕರಿಯಾದರು.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IPL 2025: ಗೆಲ್ಲಲೇಬೇಕಿದ್ದ ಪಂದ್ಯವನ್ನು ಕೈಚೆಲ್ಲಿ ಪ್ಲೇಆಫ್‌ ರೇಸ್‌ನಿಂದ ಹೊರಬಿದ್ದ ಲಖನೌ ಸೂಪರ್‌ ಜೈಂಟ್ಸ್‌

KL Rahul: ಟೀಂ ಇಂಡಿಯಾ ಟೆಸ್ಟ್ ತಂಡಕ್ಕೆ ಕೆಎಲ್ ರಾಹುಲ್ ನಾಯಕನಾಗಬೇಕಾ ಶುಬ್ಮನ್ ಗಿಲ್ ಬೇಕಾ

IPL 2025: ಟೈಟನ್ಸ್‌ ವಿರುದ್ಧ ಡೆಲ್ಲಿಗೆ ಮುಖಭಂಗ: ಗುಜರಾತ್‌, ಆರ್‌ಸಿಬಿ, ಪಂಜಾಬ್‌ ತಂಡಗಳಿಗೆ ಪ್ಲೇಆಫ್‌ ಟಿಕೆಟ್‌

ಜೀವಬೆದರಿಕೆ ಬೆನ್ನಲ್ಲೇ ತಿರುಪತಿಗೆ ಟೀ ಇಂಡಿಯಾ ಕೋಚ್ ಭೇಟಿ, ಇಬ್ಬರು ಮಕ್ಕಳನ್ನು ಕೈಹಿಡಿದು ನಡೆದ ಗೌತಮ್ ಗಂಭೀರ್‌

ಮುಂದಿನ ಸುದ್ದಿ
Show comments