ಆಸ್ಟ್ರೇಲಿಯಾದಲ್ಲಿ ಟೀಂ ಇಂಡಿಯಾ ಆಪತ್ಬಾಂಧವರಾದ ಕ್ರಿಕೆಟಿಗರು ಈಗ ಬೇಡವಾದರು!

Webdunia
ಗುರುವಾರ, 4 ಫೆಬ್ರವರಿ 2021 (10:21 IST)
ಚೆನ್ನೈ: ಇಂಗ್ಲೆಂಡ್ ವಿರುದ್ಧ ನಾಳೆಯಿಂದ ಭಾರತ ಟೆಸ್ಟ್ ಸರಣಿ ಆರಂಭವಾಗಲಿದ್ದು, ನಾಯಕ ವಿರಾಟ್ ಕೊಹ್ಲಿ ಅಂತಿಮ 11 ರ ಬಳಗವನ್ನು ಆರಿಸುವುದೇ ದೊಡ್ಡ ತಲೆನೋವಾಗಿದೆ.


ಆಸ್ಟ್ರೇಲಿಯಾ ಸರಣಿಯಲ್ಲಿ ಪ್ರಮುಖ ಆಟಗಾರರೆಲ್ಲಾ ಗಾಯದಿಂದಾಗಿ ತಂಡಕ್ಕೆ ಕೈ ಕೊಟ್ಟಾಗ ಟೀಂ ಇಂಡಿಯಾಕ್ಕೆ ಆಸರೆಯಾಗಿದ್ದವರೇ ಟಿ ನಟರಾಜನ್, ಮೊಹಮ್ಮದ್ ಸಿರಾಜ್, ವಾಷಿಂಗ್ಟನ್ ಸುಂದರ್, ಶಬ್ನಂ ಗಿಲ್ ಎಂಬಿತ್ಯಾದಿ ಪ್ರತಿಭಾವಂತ ಯುವ ಕ್ರಿಕೆಟಿಗರು. ಆದರೆ ಈಗ ತಂಡಕ್ಕೆ ಅನುಭವಿಗಳು ಪುನರಾಗಮನವಾಗಿರುವುದರಿಂದ ಯುವ ಕ್ರಿಕೆಟಿಗರು ಅನಿವಾರ್ಯವಾಗಿ ತಂಡದಿಂದ ಹೊರಗುಳಿಯಬೇಕಾಗಿದೆ. ಇಶಾಂತ್ ಶರ್ಮಾ ವಾಪಸಾತಿಯಾಗಿರುವುದರಿಂದ ಟಿ ನಟರಾಜನ್ ಅಥವಾ ಮೊಹಮ್ಮದ್ ಸಿರಾಜ್ ಇಬ್ಬರಲ್ಲಿ ಒಬ್ಬರಿಗೆ ಮಾತ್ರ ಅವಕಾಶ ಸಿಗಲಿದೆ. ಮೂವರು ಸ್ಪಿನ್ನರ್ ಗಳೊಂದಿಗೆ ಕಣಕ್ಕಿಳಿಯುವುದಿದ್ದರೆ ವಾಷಿಂಗ್ಟನ್ ಸುಂದರ್ ಅವಕಾಶ ಪಡೆಯಲಿದ್ದಾರೆ. ಶಬ್ನಂ ಗಿಲ್ ಫಾರ್ಮ್ ಗೆ ಮಣೆ ನೀಡಿ ಅವರನ್ನೇ ಮಯಾಂಕ್ ಬದಲಿಗೆ ಆರಂಭಿಕರಾಗಿ ಕಣಕ್ಕಿಳಿಸಬಹುದು. ಆದರೆ ಚೆನ್ನೈ ಸ್ಪಿನ್ನರ್ ಗಳಿಗೆ ನೆರವಾಗುವ ಪಿಚ್ ಆಗಿರುವುದರಿಂದ ಹಾರ್ದಿಕ್ ಪಾಂಡ್ಯ ಅವಕಾಶ ಪಡೆಯುವ ಸಾಧ‍್ಯತೆ ಕಡಿಮೆ. ಇಬ್ಬರು ವೇಗಿಗಳು ಮಾತ್ರ ಆಡಿಸುವುದಾದರೆ ಬುಮ್ರಾ ಮತ್ತು ಇಶಾಂತ್ ಆಡುವುದು ಖಚಿತವಾಗಲಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಹೊಸ ಇನಿಂಗ್ಸ್‌ ಶುರು ಮಾಡಿದ ಕರ್ನಾಟಕದ ಸ್ಟಾರ್‌ ಕ್ರಿಕೆಟರ್‌: ಕಿಚ್ಚ ಸುದೀಪ್ ಸೇರಿ ಗಣ್ಯರಿಂದ ವಿಷ್‌

Video: ಪುತ್ರ ಅರ್ಜುನ್ ತೆಂಡುಲ್ಕರ್ ಸೊಸೆಗೆ ಹಾರ ಹಾಕುವಾಗ ಭಾವುಕರಾಗಿ ನಿಂತ ಸಚಿನ್ ತೆಂಡುಲ್ಕರ್

T20 WC: ವಾಂಖೆಡೆ ಮೈದಾನದ ಟೀಂ ಇಂಡಿಯಾ ಫ್ಯಾನ್ಸ್ ಬಾಯಿ ಬಂದ್ ಮಾಡ್ತೀವಿ: ಇಂಗ್ಲೆಂಡ್ ಬೌಲರ್ ಸವಾಲು

T20 WC: ಸತತ ಮೂರನೇ ಬಾರಿಗೆ ಇಂಗ್ಲೆಂಡ್ ವಿರುದ್ಧ ಸೆಮಿಫೈನಲ್: ಟೀಂ ಇಂಡಿಯಾ ಇಂದು ಗೆಲ್ಲುತ್ತಾ

ಸೋಫಿ ಶೈನ್‌ರನ್ನು ಮದುವೆಯಾದ ಬೆನ್ನಲ್ಲೇ ಮಾಜಿ ಪತ್ನಿಯಿಂದ ಶಿಖರ್ ಧವನ್ ಸಿಕ್ತು ಹಣ, ಯಾವಾ ಕಾರಣದಲ್ಲಿ

ಮುಂದಿನ ಸುದ್ದಿ
Show comments