Publish Date: Thu, 03 Dec 2020 (09:24 IST)
Updated Date: Thu, 03 Dec 2020 (09:26 IST)
ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿ ಸೋತ ಮೇಲೆ ಟೀಂ ಇಂಡಿಯಾಕ್ಕೆ ಒಂದಂತೂ ಖಾತರಿಯಾಗಿದೆ. ಆರನೇ ಬೌಲರ್ ನ ಕೊರತೆ ಭಾರತ ತಂಡದಲ್ಲಿ ಎದ್ದು ಕಾಣುತ್ತಿದೆ.
ಹಿಂದೆಲ್ಲಾ ಗಂಗೂಲಿ, ಸಚಿನ್ ರಂತಹ ದಿಗ್ಗಜ ಬ್ಯಾಟ್ಸ್ ಮನ್ ಗಳು ಬ್ಯಾಟಿಂಗ್ ಜತೆಗೆ ಅರೆಕಾಲಿಕ ಬೌಲರ್ ಗಳಾಗಿಯೂ ಕೊರತೆ ತುಂಬುತ್ತಿದ್ದರು. ಆದರೆ ಈಗಿನ ತಂಡದಲ್ಲಿ ಅಂತಹ ಆಲ್ ರೌಂಡರ್ ಕ್ರಿಕೆಟಿಗರ ಕೊರತೆಯಿದೆ. ಒಂದು ವೇಳೆ ಅಂತಹ ಆಟಗಾರರಿದ್ದರೆ ಪ್ರೈಮ್ ಬೌಲರ್ ಗಳು ಕೈಕೊಟ್ಟಾಗ ಅರೆಕಾಲಿಕ ಬೌಲರ್ ಗಳು ವಿಕೆಟ್ ಕಿತ್ತು ಪವಾಡ ಮಾಡುವುದಿದೆ. ಆದರೆ ಈಗ ಕೇವಲ ಬೌಲರ್ ಗಳನ್ನು ಮಾತ್ರ ನೆಚ್ಚಿಕೊಳ್ಳಬೇಕಾಗಿದೆ. ಇದು ಭಾರತ ತಂಡಕ್ಕೆ ಭಾರೀ ಹೊಡೆತ ನೀಡುತ್ತಿದೆ.