Webdunia - Bharat's app for daily news and videos

Install App

T20 World Cup 2024: ಟೀಂ ಇಂಡಿಯಾ ಆಟಗಾರರ ಕಣ್ಣೀರು, ಗೆಲುವಿನ ಬೆನ್ನಲ್ಲೇ ಮಳೆಯ ಪನ್ನೀರು

Krishnaveni K
ಶನಿವಾರ, 29 ಜೂನ್ 2024 (23:53 IST)
Photo Credit: BCCI
ಬಾರ್ಬಡೋಸ್: ಟಿ20 ವಿಶ್ವಕಪ್ 2024 ರ ಫೈನಲ್ ಪಂದ್ಯವನ್ನು 7 ರನ್ ಗಳಿಂದ ಗೆದ್ದ ಬಳಿಕ ಟೀಂ ಇಂಡಿಯಾದ ಪ್ರತಿಯೊಬ್ಬ ಆಟಗಾರರ ಕಣ್ಣಲ್ಲಿ ನೀರು. ಗೆಲುವಿನ ಬೆನ್ನಲ್ಲೇ ವರುಣ ಕೂಡಾ ಪನ್ನೀರು ಸುರಿದಿದ್ದು ವಿಶೇಷವಾಗಿತ್ತು.

19.5 ಓವರ್ ನಲ್ಲಿ ಭಾರತದ ಗೆಲುವು ಖಚಿತವಾಗುತ್ತಿದ್ದಂತೇ ನಾಯಕ ರೋಹಿತ್ ಶರ್ಮಾ ಸಂಭ್ರಮಿಸಲು ಆರಂಭಿಸಿದ್ದರೆ ವಿರಾಟ್ ಕೊಹ್ಲಿ ಕೂಡಾ ಕಣ್ಣೀರು ಹಾಕಲು ಆರಂಭಿಸಿದ್ದರು. ಇನ್ನು, ಹಾರ್ದಿಕ್ ಪಾಂಡ್ಯ ಕೊನೆಯ ಎಸೆತವನ್ನು ಕಣ್ಣೀರು ಹಾಕುತ್ತಲೇ ಎಸೆದರು.

ಇದುವರೆಗೆ ಅಳದ ಜಸ್ಪ್ರೀತ್ ಬುಮ್ರಾ ಕೂಡಾ ಇಂದು ಕಣ್ಣೀರು ಸುರಿಸಿದರು. ರಿಷಬ್ ಪಂತ್ ಕೂಡಾ ಇದಕ್ಕೆ ಹೊರತಾಗಿರಲಿಲ್ಲ. ವಿಶೇಷವೆಂದರೆ ಏಕದಿನ ವಿಶ್ವಕಪ್ ಫೈನಲ್ ಸೋಲಿನ ಬಳಿಕ ನಿರಾಸೆಯಲ್ಲಿ ಕಣ್ಣೀರು ಹಾಕಿದ್ದ ಮೊಹಮ್ಮದ್ ಸಿರಾಜ್ ಇಂದು ಮೈದಾನಕ್ಕೆ ಓಡಿ ಬಂದು ಖುಷಿಯಲ್ಲಿ ಕಣ್ಣೀರು ಹಾಕಿದರು.

ವಿಶೇಷವೆಂದರೆ ಭಾರತ ಗೆಲುವಿನ ಬೆನ್ನಲ್ಲೇ ಅಷ್ಟು ಹೊತ್ತು ತಡೆದಿದ್ದ ವರುಣ ಕೂಡಾ ಧರೆಗುಳಿದು ಬಂದಿದ್ದ. ಗೆಲುವಿನ ಜೊತೆಗೆ ಮಳೆಯೂ ಬಂದಿದ್ದು ಭಾರತಕ್ಕೆ ಶುಭ ಶಕುನವಾಗಿತ್ತು. ಕೊನೆಗೂ ಆಟಗಾರನಾಗಿ ಸಿಗದ ಐಸಿಸಿ ಟ್ರೋಫಿ ರಾಹುಲ್ ದ್ರಾವಿಡ್ ಗೆ ಕೋಚ್ ಆಗಿ ಸಿಕ್ಕಿದ್ದು ವಿಶೇಷವಾಗಿತ್ತು.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IPL 2025: ಗೆಲ್ಲಲೇಬೇಕಿದ್ದ ಪಂದ್ಯವನ್ನು ಕೈಚೆಲ್ಲಿ ಪ್ಲೇಆಫ್‌ ರೇಸ್‌ನಿಂದ ಹೊರಬಿದ್ದ ಲಖನೌ ಸೂಪರ್‌ ಜೈಂಟ್ಸ್‌

KL Rahul: ಟೀಂ ಇಂಡಿಯಾ ಟೆಸ್ಟ್ ತಂಡಕ್ಕೆ ಕೆಎಲ್ ರಾಹುಲ್ ನಾಯಕನಾಗಬೇಕಾ ಶುಬ್ಮನ್ ಗಿಲ್ ಬೇಕಾ

IPL 2025: ಟೈಟನ್ಸ್‌ ವಿರುದ್ಧ ಡೆಲ್ಲಿಗೆ ಮುಖಭಂಗ: ಗುಜರಾತ್‌, ಆರ್‌ಸಿಬಿ, ಪಂಜಾಬ್‌ ತಂಡಗಳಿಗೆ ಪ್ಲೇಆಫ್‌ ಟಿಕೆಟ್‌

ಜೀವಬೆದರಿಕೆ ಬೆನ್ನಲ್ಲೇ ತಿರುಪತಿಗೆ ಟೀ ಇಂಡಿಯಾ ಕೋಚ್ ಭೇಟಿ, ಇಬ್ಬರು ಮಕ್ಕಳನ್ನು ಕೈಹಿಡಿದು ನಡೆದ ಗೌತಮ್ ಗಂಭೀರ್‌

ಮುಂದಿನ ಸುದ್ದಿ
Show comments