T20 WC Final: 2023 ದುರಾದೃಷ್ಟ ಮರುಕಳಿಸುವುದು ಬೇಡವೆಂದು ಟೀಂ ಇಂಡಿಯಾದಿಂದ ಶಾಕಿಂಗ್ ನಿರ್ಧಾರ

Krishnaveni K
ಶನಿವಾರ, 7 ಮಾರ್ಚ್ 2026 (15:01 IST)
Photo Credit: BCCI
ಅಹ್ಮದಾಬಾದ್: 2023 ರ ಏಕದಿನ ವಿಶ್ವಕಪ್ ಫೈನಲ್ ದುರಾದೃಷ್ಟ ಮರುಕಳಿಸುವುದು ಬೇಡವೆಂದು ಟೀಂ ಇಂಡಿಯಾ ಕೈಗೊಂಡಿರುವ ನಿರ್ಧಾರ ಶಾಕಿಂಗ್ ಆಗಿದೆ.

2023 ರಲ್ಲಿ ಅಹ್ಮದಾಬಾದ್ ನಲ್ಲಿ ಏಕದಿನ ವಿಶ್ವಕಪ್ ಫೈನಲ್ ಪಂದ್ಯ ನಡೆದಿತ್ತು. ಆ ಕೂಟದಲ್ಲಿ ಅದುವರೆಗೂ ಗೆಲ್ಲುತ್ತಲೇ ಬಂದಿದ್ದ ಟೀಂ ಇಂಡಿಯಾ ಫೈನಲ್ ನಲ್ಲಿ ಎಡವಿತ್ತು. ಇದಾದ ಬಳಿಕ ಅಹ್ಮದಾಬಾದ್ ಮೈದಾನದಲ್ಲಿ ಮತ್ತೆ ಗೆಲ್ಲಬೇಕು ಎಂಬುದು ಟೀಂ ಇಂಡಿಯಾ ಕನಸಾಗಿದೆ.

ಈ ಹಿಂದೆ ಸೂರ್ಯಕುಮಾರ್ ಯಾದವ್ ಕೂಡಾ ಇದೇ ಮಾತು ಹೇಳಿದ್ದರು. ಅದೇ ಅಹ್ಮದಾಬಾದ್ ಮೈದಾನದಲ್ಲಿ ವಿಶ್ವಕಪ್ ಟ್ರೋಫಿ ಎತ್ತಿ ಹಿಡಿಯಬೇಕು ಎಂಬುದು ನಮ್ಮ ಗುರಿ ಎಂದಿದ್ದರು. ಇದೇ ಛಲ ಹೊತ್ತು ಈ ಬಾರಿ ನ್ಯೂಜಿಲೆಂಡ್ ವಿರುದ್ಧ ಫೈನಲ್ ಪಂದ್ಯವಾಡಲಿದೆ.

ಆದರೆ ಇದಕ್ಕಾಗಿ ಕಳೆದ ಬಾರಿ ಆದಂತೆ ಫಲಿತಾಂಶ ಬರಬಾರದು ಎಂದು ಟೀಂ ಇಂಡಿಯಾ ಸಾಕಷ್ಟು ಪ್ರಯತ್ನ ಮಾಡುತ್ತಿದೆ. ಇದರ ಅಂಗವಾಗಿ ಈ ಬಾರಿ ಕಳೆದ ಬಾರಿ ತಂಗಿದ್ದ ಹೋಟೆಲ್ ಬಿಟ್ಟು ಬೇರೆ ಹೋಟೆಲ್ ನಲ್ಲಿ ವಾಸ್ತವ್ಯ ಹೂಡಿದೆಯಂತೆ. ಕಳೆದ ಬಾರಿ ಟೀಂ ಇಂಡಿಯಾ ಐಟಿಸಿ ನರ್ಮದಾ ಹೋಟೆಲ್ ನಲ್ಲಿ ತಂಗಿತ್ತು. ಆದರೆ ಈ ಬಾರಿ ದುರಾದೃಷ್ಟವಾಗಬಾರದು ಎಂದು ತಾಜ್ ಸ್ಕೈಲೈನ್ ಗೆ ಶಿಫ್ಟ್ ಆಗಿದೆ. ಕ್ರಿಕೆಟಿಗರೂ ಕೆಲವೊಂದು ನಂಬಿಕೆಗಳನ್ನು ಫಾಲೋ ಮಾಡುತ್ತಾರೆ. ಅದರಂತೆ ಈ ಬಾರಿ ಹೋಟೆಲ್ ಬದಲಾಯಿಸಿ ಅದೃಷ್ಟ ಪರೀಕ್ಷೆ ಮಾಡಲಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಗೌತಮ್ ಗಂಭೀರ್ ಇಲ್ಲದ್ದಕ್ಕೇ ಟೀಂ ಇಂಡಿಯಾ ಗೆದ್ದಿದ್ದು: ಫುಲ್ ಟ್ರೋಲ್

IND VS ZIM: ಜಿಂಬಾಬ್ವೆ ವಿರುದ್ಧ ಗೆದ್ದು ಬೀಗಿ ಟಿ20 ಸೋಲಿನ ಸರಣಿಗೆ ಅಂತ್ಯ ಹಾಡಿದ ಭಾರತ

IND vs ZIM: ಭಾರತದ ಯುವ ಬೌಲರ್‌ಗಳಿಗೆ ತತ್ತರಿಸಿದ ಜಿಂಬಾಬ್ವೆ, ಗಳಿಸಿದ ರನ್ ಎಷ್ಟು ಗೊತ್ತಾ

IND vs ZIM: ಟೀಂ ಇಂಡಿಯಾಗೆ ಇಂದಿನಿಂದ ಜಿಂಬಾಬ್ವೆ ಟಿ20 ಸರಣಿ: ಲೈವ್ ಎಲ್ಲಿ ವೀಕ್ಷಿಸಬೇಕು ಇಲ್ಲಿದೆ ವಿವರ

Video: ಕೆಸರನ್ನು ಲೆಕ್ಕಿಸದೆ ಬರಿಗಾಲದಲ್ಲಿ ವೃಂದಾವನಕ್ಕೆ ಭೇಟಿ ನೀಡಿದ ವಿರಾಟ್‌- ಅನುಷ್ಕಾ ದಂಪತಿ

ಮುಂದಿನ ಸುದ್ದಿ
Show comments