ಸಂಜು ಸ್ಯಾಮ್ಸನ್ ಈ ಕಾರಣಕ್ಕಾದರೂ ಮತ್ತೆ ಫಾರ್ಮ್ ಗೆ ಬರಬೇಕು

Krishnaveni K
ಮಂಗಳವಾರ, 27 ಜನವರಿ 2026 (15:04 IST)
ವಿಶಾಖಪಟ್ಟಣಂ: ನ್ಯೂಜಿಲೆಂಡ್ ವಿರುದ್ಧ ಟಿ20 ಸರಣಿಗೆ ಆರಂಭಿಕರಾಗಿ ಕಣಕ್ಕಿಳಿಯುತ್ತಿರುವ ಸಂಜು ಸ್ಯಾಮ್ಸನ್ ಈ ಒಂದು ಕಾರಣಕ್ಕಾಗಿಯಾದರೂ ಮತ್ತೆ ಫಾರ್ಮ್ ಗೆ ಮರಳಬೇಕಿದೆ.

ಸಂಜು ಸ್ಯಾಮ್ಸನ್ ಕಳೆದ ಮೂರು ಪಂದ್ಯಗಳಲ್ಲೂ ಕಳಪೆ ಮೊತ್ತಕ್ಕೆ ಔಟಾಗಿದ್ದಾರೆ. ಶುಭಮನ್ ಗಿಲ್ ಬದಲಿಗೆ ಅವರಿಗೆ ಆರಂಭಿಕರಾಗಿ ತಂಡದಲ್ಲಿ ಅವಕಾಶ ನೀಡಲಾಗಿತ್ತು. ಟಿ20 ವಿಶ್ವಕಪ್ ಕೂಟದಲ್ಲೂ ಅವರೇ ಟೀಂ ಇಂಡಿಯಾ ಓಪನರ್ ಎನ್ನಲಾಗಿತ್ತು.

ಆದರೆ ಸಂಜು ಪದೇ ಪದೇ ವೈಫಲ್ಯಕ್ಕೊಳಗಾಗುತ್ತಿರುವುದು ತಂಡದ ಚಿಂತೆ ಹೆಚ್ಚಿಸಿದೆ. ಹಾಗಿದ್ದರೂ ನಾಳೆ ವಿಶಾಖಪಟ್ಟಣಂನಲ್ಲಿ ನಡೆಯಲಿರುವ ನಾಲ್ಕನೇ ಟಿ20 ಪಂದ್ಯದಲ್ಲೂ ಸಂಜುಗೆ ಮತ್ತೊಂದು ಅವಕಾಶ ನೀಡಲು ಮ್ಯಾನೇಜ್ ಮೆಂಟ್ ತೀರ್ಮಾನಿಸಿದೆ.

ಆದರೆ ಈ ಪಂದ್ಯದಲ್ಲಿ ಸಂಜು ಫಾರ್ಮ್ ಗೆ ಬರಲೇಬೇಕು. ಯಾಕೆಂದರೆ ಈ ಪಂದ್ಯದ ಬಳಿಕ ಅಂತಿಮ ಪಂದ್ಯ ನಡೆಯುವುದು ತಿರುವನಂತಪುರಂನಲ್ಲಿ. ಕೇರಳದ ಕಣ್ಮಣಿಯಾಗಿರುವ ಸಂಜು ತವರಿನಲ್ಲಿ ಆಡುವುದನ್ನು ನೋಡಲು ಇಲ್ಲಿನ ಪ್ರೇಕ್ಷಕರು ಕಾಯುತ್ತಿದ್ದಾರೆ. ಅನೇಕ ಬಾರಿ ಇದು ಸಾಧ್ಯವಾಗಿಲ್ಲ. ಹೀಗಾಗಿ ಈ ಬಾರಿಯಾದರೂ ಸಂಜು ತವರಿನ ಪ್ರೇಕ್ಷಕರ ಎದುರು ಆಡಬೇಕೆಂದರೆ ಇಂದು ಫಾರ್ಮ್ ಗೆ ಬರಲೇಬೇಕು. ಮತ್ತೆ ವಿಫಲರಾದರೆ ಅವರು ಆಡುವ ಬಳಗದಿಂದ ಹೊರಗುಳಿದರೂ ಅಚ್ಚರಿಯಿಲ್ಲ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

RR VS GT Match: ತಂದೆ ಡ್ಯಾನ್ಸ್ ಮಾಡಿದಾಗ ಶುಭ್ಮನ್ ಗಿಲ್ ಹೇಗೇ ನಾಚಿಕೊಂಡ್ರು ನೋಡಿ, Video

ಆತನ ವಯಸ್ಸಿನಲ್ಲಿ ನನಗೆ ಚಿನ್ನಿದಾಂಡು ಆಡೋಕೂ ಬರುತ್ತಿರಲಿಲ್ಲ: ಸೂರ್ಯವಂಶಿ ಬ್ಯಾಟಿಂಗ್‌ಗೆ ಅಮಿತಾಬ್ ಬಚ್ಚನ್ ಫಿದಾ

ಸಾಯಿ ಸುದರ್ಶನ್ ಕೈಯಿಂದ ಇನ್ನು ಬ್ಯಾಟ್ ಜಾರಲ್ಲ: ಫನ್ನಿ ವಿಡಿಯೋ ಇಲ್ಲಿದೆ

RCB VS GT Match: ಆರ್‌ಸಿಬಿ ಅಭಿಮಾನಿಗಳಿಗೆ ಫ್ರೀ ಮೆಟ್ರೋ ಪ್ರಯಾಣ ಎಂದು ತಿಳ್ಕೊಂಡ್ಡು ಹೋದ್ರ ಅಷ್ಟೇ

IPL 2026: ನಾಳೆ ಐಪಿಎಲ್‌ ಫೈನಲ್‌: ಸಂಭ್ರಮಾಚರಣೆಗೆ ಬೆಂಗಳೂರು ಪೊಲೀಸರ ಖಡಕ್‌ ಮಾರ್ಗಸೂಚಿ

ಮುಂದಿನ ಸುದ್ದಿ
Show comments