Webdunia - Bharat's app for daily news and videos

Install App

ಅಶಿಸ್ತು ತೋರಿದ ಯಶಸ್ವಿ ಜೈಸ್ವಾಲ್‌ನನ್ನು ಹೋಟೆಲ್‌ನಲ್ಲೇ ಬಿಟ್ಟು ತೆರಳಿದ ರೋಹಿತ್ ಶರ್ಮಾ

Sampriya
ಬುಧವಾರ, 11 ಡಿಸೆಂಬರ್ 2024 (20:41 IST)
Photo Courtesy X
ಅಡಿಲೇಡ್: ಟೀಂ ಇಂಡಿಯಾ ಯುವ ಕ್ರಿಕೆಟಿಗ ಯಶಸ್ವಿ ಜೈಸ್ವಾಲ್ ಅಶಿಸ್ತಿನ ವರ್ತನೆಯಿಂದ ಸಿಟ್ಟಿಗೆದ್ದ ತಂಡದ ನಾಯಕ ರೋಹಿತ್ ಶರ್ಮಾ ಅವರನ್ನು ಹೋಟೆಲ್‌ನಲ್ಲಿಯೇ ಬಿಟ್ಟು ಏರ್ ಪೋರ್ಟ್‌ಗೆ ತೆರಳಿದ ಘಟನೆ ನಡೆದಿದೆ.

ಅಡಿಲೇಡ್‌ನಿಂದ ಮುಂದಿನ ಪಂದ್ಯಕ್ಕೆ ಗಬ್ಬಾಕ್ಕೆ ತೆರಳಲು ಟೀಂ ಇಂಡಿಯಾ ಆಟಗಾರರೆಲ್ಲರೂ ಹೋಟೆಲ್ ನಿಂದ ಹೊರಬಂದು ತಂಡಕ್ಕಾಗಿ ಕಾದಿರಿಸಿದ ಬಸ್ ಏರಿದ್ದರು. ಆದರೆ ಎಷ್ಟು ಹೊತ್ತು ಕಾದರೂ ಜೈಸ್ವಾಲ್ ಬರಲೇ ಇಲ್ಲ. ಇದರಿಂದ ರೋಹಿತ್ ಶರ್ಮಾ ಬಸ್‌ನಿಂದ ಹೊರ ಬಂದು ಫೋನ್‌ನಲ್ಲಿ ಮಾತನಾಡಿ ವಿಚಾರಣೆ ನಡೆಸಿದರು.

ಪಕ್ಕದಲ್ಲಿದ್ದ ಭದ್ರತಾ ಸಿಬ್ಬಂದಿ ಜೊತೆ ಮಾತನಾಡಿದ ರೋಹಿತ್ ಸಿಟ್ಟಿನಲ್ಲಿ ಮತ್ತೆ ಬಸ್ ಏರಿದರು. ಅವರು ಬಸ್ ಏರಿದ ತಕ್ಷಣ ಬಸ್ ಏರ್‌ಪೋರ್ಟ್‌ನತ್ತ ಹೊರಟೇ ಬಿಟ್ಟಿತು. ಯಶಸ್ವಿ ಜೈಸ್ವಾಲ್ ಏಕಾಂಗಿಯಾಗಿ ಹೋಟೆಲ್‌ನಲ್ಲಿ ಬಾಕಿ ಉಳಿದರು.

ಸಾಮಾನ್ಯವಾಗಿ, ಸಮಯಕ್ಕೆ ಕಟ್ಟುನಿಟ್ಟಾಗಿ ಬದ್ಧರಾಗಿರುವ ಯಶಸ್ವಿ ಜೈಸ್ವಾಲ್ ಅವರು ಸಾಮಾನ್ಯವಾಗಿ ಇಂತಹ ತಪ್ಪುಗಳನ್ನು ಮಾಡುವುದಿಲ್ಲ. ಆದರೆ ಬುಧವಾರ ಯಾವುದೂ ಕಾರಣಕ್ಕೂ ಅವರು ನಿಗದಿತ ಸಮಯಕ್ಕೆ ಬರುವಲ್ಲಿ ವಿಫಲವಾದರು.

ಜೈಸ್ವಾಲ್ ಅವರ ವಿಳಂಬದ ನಂತರ, ಭಾರತ ತಂಡದ ನಾಯಕ ರೋಹಿತ್ ಶರ್ಮಾ ಕೋಪಗೊಂಡರು. ಬಸ್‌ನಿಂದ ಕೆಳಗಿಳಿದು ಯಶಸ್ವಿಯನ್ನು ಹುಡುಕಲು ಸಹಾಯಕ ಸಿಬ್ಬಂದಿಗೆ ಸೂಚಿಸಿದರು. ಮ್ಯಾನೇಜರ್ ಮತ್ತು ತಂಡದ ಭದ್ರತಾ ಅಧಿಕಾರಿ ಕೂಡ ಬಸ್‌ನಿಂದ ಇಳಿದರು. ಸ್ವಲ್ಪ ಸಮಯದ ಚರ್ಚೆಯ ನಂತರ, ಎಲ್ಲರೂ ಮತ್ತೆ ಬಸ್ಸಿನಲ್ಲಿ ಕುಳಿತುಕೊಂಡರು, ಮತ್ತು ಯಶಸ್ವಿ ಜೈಸ್ವಾಲ್ ಇಲ್ಲದೆ ಬಸ್ ಹೊರಟಿತು.<>

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

KL Rahul: ಟೀಂ ಇಂಡಿಯಾ ಟೆಸ್ಟ್ ತಂಡಕ್ಕೆ ಕೆಎಲ್ ರಾಹುಲ್ ನಾಯಕನಾಗಬೇಕಾ ಶುಬ್ಮನ್ ಗಿಲ್ ಬೇಕಾ

IPL 2025: ಟೈಟನ್ಸ್‌ ವಿರುದ್ಧ ಡೆಲ್ಲಿಗೆ ಮುಖಭಂಗ: ಗುಜರಾತ್‌, ಆರ್‌ಸಿಬಿ, ಪಂಜಾಬ್‌ ತಂಡಗಳಿಗೆ ಪ್ಲೇಆಫ್‌ ಟಿಕೆಟ್‌

ಜೀವಬೆದರಿಕೆ ಬೆನ್ನಲ್ಲೇ ತಿರುಪತಿಗೆ ಟೀ ಇಂಡಿಯಾ ಕೋಚ್ ಭೇಟಿ, ಇಬ್ಬರು ಮಕ್ಕಳನ್ನು ಕೈಹಿಡಿದು ನಡೆದ ಗೌತಮ್ ಗಂಭೀರ್‌

ದೋಹಾ ಡೈಮಂಡ್‌ ಲೀಗ್‌ನಲ್ಲಿ ನೀರಜ್ ಚೋಪ್ರಾ ವಿರುದ್ಧ ಸ್ಪರ್ಧಿಸದ ಪಾಕ್‌ನ ಅರ್ಷದ್‌ ನದೀಮ್, ಕಾರಣ ಹೀಗಿದೆ

ಮುಂದಿನ ಸುದ್ದಿ
Show comments