Publish Date: Sun, 19 Mar 2023 (09:30 IST)
Updated Date: Sun, 19 Mar 2023 (09:36 IST)
ವಿಶಾಖಪಟ್ಟಣಂ: ಇಲ್ಲಿ ನಡೆಯಲಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ದ್ವಿತೀಯ ಏಕದಿನ ಪಂದ್ಯ ನಡೆಯುವುದು ಅನುಮಾನವಾಗಿದೆ.
ವಿಶಾಖಪಟ್ಟಣಂನಲ್ಲಿ ಮಳೆಯಾಗುತ್ತಿದ್ದು, ಹವಾಮಾನ ವರದಿ ಪ್ರಕಾರ ಇಂದಿನ ಪಂದ್ಯಕ್ಕೂ ಮಳೆ ಅಡ್ಡಿಪಡಿಸುವ ಸಾಧ್ಯತೆಯಿದೆ.
ಒಂದು ವೇಳೆ ಮಳೆ ಬಂದರೆ ಇಂದೇ ಸರಣಿ ಗೆಲ್ಲುವ ಭಾರತ ಕನಸು ಮತ್ತು ಸರಣಿ ಉಳಿಸಿಕೊಳ್ಳುವ ಆಸೀಸ್ ಕನಸು ಎರಡೂ ಭಗ್ನವಾಗಲಿದೆ. ಇಂದು ಹಗಲು-ರಾತ್ರಿಯಾಗಿ ಪಂದ್ಯ ನಡೆಯಲಿದೆ.