Publish Date: Thu, 22 Jun 2023 (09:00 IST)
Updated Date: Thu, 22 Jun 2023 (09:06 IST)
ಬೆಂಗಳೂರು: ಟೀಂ ಇಂಡಿಯಾ ಕ್ರಿಕೆಟಿಗ ಕೆಎಲ್ ರಾಹುಲ್ ಕರ್ನಾಟಕ ಮೂಲದವರೇ ಆದರೂ ಇತ್ತೀಚೆಗಿನ ದಿನಗಳಲ್ಲಿ ಮುಂಬೈಯಲ್ಲೇ ಸೆಟ್ಲ್ ಆಗಿರುವುದರಿಂದ ಕನ್ನಡ ನಾಡನ್ನು ಮರೆತೇ ಬಿಟ್ಟಿದ್ದಾರೇನೋ ಎಂಬಂತಾಗಿದ್ದರು.
ಇದೀಗ ಕೆಎಲ್ ರಾಹುಲ್ ಗಾಯಕ್ಕೆ ಶಸ್ತ್ರಚಿಕಿತ್ಸೆಗೊಳಗಾಗಿದ್ದು ಬೆಂಗಳೂರಿನ ಎನ್ ಸಿಎನಲ್ಲಿ ಪುನಶ್ಚೇತನ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಎನ್ ಸಿಎಗೆ ಬಂದ ತಕ್ಷಣ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಅಪ್ ಲೋಡ್ ಮಾಡಿದ್ದ ರಾಹುಲ್, ಮನೆ ಎಂದು ಕನ್ನಡದಲ್ಲೇ ಬರೆದು ಗಮನ ಸೆಳೆದಿದ್ದರು.
ಇದೀಗ ರಾಹುಲ್ ಇನ್ನೊಂದು ವಿಡಿಯೋ ವೈರಲ್ ಆಗಿದ್ದು, ಎನ್ ಸಿಎನಲ್ಲಿ ತಮ್ಮ ಜೊತೆ ಸೆಲ್ಫೀಗೆ ಮುಗಿಬಿದ್ದವರ ಜೊತೆ ಕನ್ನಡದಲ್ಲೇ ಮಾತನಾಡಿಸಿದ್ದಾರೆ. ಅವರ ವಿಡಿಯೋ ನೋಡಿದ ನೆಟ್ಟಿಗರು ಅಂತೂ ಗಾಯವಾಗಿದ್ದೇ ಆಗಿದ್ದು, ರಾಹುಲ್ ಪಕ್ಕಾ ಕನ್ನಡಿಗರಾದ್ರು ಎನ್ನುತ್ತಿದ್ದಾರೆ.