Webdunia - Bharat's app for daily news and videos

Install App

IPL 2025: ಬೇರೆಯವರು ಸೋತಾಗ ನಗಬೇಡಿ ಅಂಬಟಿ ರಾಯುಡು: ಆರ್ ಸಿಬಿ ಈಗ ಟಾಪರ್ ಸಿಎಸ್ ಕೆ ಲಾಸ್ಟ್

Krishnaveni K
ಸೋಮವಾರ, 28 ಏಪ್ರಿಲ್ 2025 (11:16 IST)
ಬೆಂಗಳೂರು: ಐಪಿಎಲ್ 2025 ಆರಂಭಕ್ಕೆ ಮುನ್ನ ವೀಕ್ಷಕ ವಿವರಣೆಕಾರ, ಚೆನ್ನೈ ಮಾಜಿ ಆಟಗಾರ ಅಂಬಟಿ ರಾಯುಡು, ಆರ್ ಸಿಬಿಯನ್ನು ಲೇವಡಿ ಮಾಡುತ್ತಲೇ ಇದ್ದರು. ಸಿಎಸ್ ಕೆ ಈ ಬಾರಿಯೂ ಕಪ್ ಗೆಲ್ಲುತ್ತದೆ ಎಂದಿದ್ದರು. ಆದರೆ ಈಗ ಆರ್ ಸಿಬಿ ಟೇಬಲ್ ಟಾಪರ್ ಆಗಿದ್ದರೆ ಸಿಎಸ್ ಕೆ ಕೊನೆಯ ಸ್ಥಾನದಲ್ಲಿದೆ. ಹೀಗಾಗಿ ಅಭಿಮಾನಿಗಳು ಬೇರೆಯವರು ಸೋತಾಗ ನಗಬೇಡಿ ಸಾರ್ ಎಂದು ಕಾಲೆಳೆದಿದ್ದಾರೆ.

ಆರ್ ಸಿಬಿಯಂತಹ ತಂಡ ಐಪಿಎಲ್ ನಲ್ಲಿ ಮನರಂಜನೆ ಕೊಡಲಾದರೂ ಇರಬೇಕು. ಈ ಬಾರಿಯೂ ಆರ್ ಸಿಬಿಯೇನೂ ಕಪ್ ಗೆಲ್ಲಲ್ಲ ಬಿಡಿ. ಕೇವಲ ಪ್ಲೇ ಆಫ್ ಗೇರಿದ್ದಕ್ಕೆ ಕಪ್ ಗೆದ್ದಂತೆ ಸಂಭ್ರಮಿಸುತ್ತದೆ ಎಂದು ಲೇವಡಿ ಮಾಡುತ್ತಲೇ ಇದ್ದರು.

ಜೊತೆಗೆ ತಮ್ಮ ಹಳೆಯ ತಂಡ ಸಿಎಸ್ ಕೆಯನ್ನು ಹೊಗಳಿ ಅಟ್ಟಕ್ಕೇರಿಸುತ್ತಿದ್ದರು. ಸಿಎಸ್ ಕೆ ಮುಂದೆ ಆರ್ ಸಿಬಿ ಏನೂ ಅಲ್ಲ ಎನ್ನುವಂತೆ ಆಡುತ್ತಿದ್ದರು. ಆದರೆ ಈಗ ಆರ್ ಸಿಬಿ 10 ಪಂದ್ಯಗಳಿಂದ 7 ಗೆಲುವುಗಳೊಂದಿಗೆ 14 ಅಂಕ ಸಂಪಾದಿಸಿ ಟೇಬಲ್ ಟಾಪರ್ ಆಗಿದೆ.

ಇತ್ತ ಸಿಎಸ್ ಕೆ 9 ಪಂದ್ಯಗಳಿಂದ ಕೇವಲ 2 ಗೆಲುವುಗಳೊಂದಿಗೆ ಕೊನೆಯ ಸ್ಥಾನದಲ್ಲಿದೆ. ಒಂದು ಕಾಲದ ಚಾಂಪಿಯನ್ ತಂಡದ ಸ್ಥಿತಿ ಈಗ ಹೀಗಾಗಿರುವುದಕ್ಕೆ ಅಭಿಮಾನಿಗಳು ಬೇಸರಗೊಂಡಿದ್ದಾರೆ. ಆದರೆ ಆರ್ ಸಿಬಿ ಅಭಿಮಾನಿಗಳು ಮಾತ್ರ ಖುಷಿಯಾಗಿದ್ದಾರೆ. ಕಾಲ ಒಂದೇ ಥರ ಇರಲ್ಲ, ನಮಗೂ ಕಾಲ ಬರುತ್ತದೆ ಎಂದು ಅಂಬಟಿ ರಾಯುಡು ಕಾಲೆಳೆದಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IPL 2025: ನೋಟ್ ಬುಕ್ ಸೆಲೆಬ್ರೇಷನ್ ತಂದ ಆಪತ್ತು, ದಿಗ್ವೇಶ್ ರಾಠಿ ಅಮಾನತು

IPL 2025 video: ಜುಟ್ಟು ಹಿಡಿದು ಎಳೀತೀನಿ ನಿಂದು.. ದಿಗ್ವೇಶ್ ಮೇಲೆ ಅಭಿಷೇಕ್ ಶರ್ಮಾ ರೋಷ

IPL 2025: ಗೆಲ್ಲಲೇಬೇಕಿದ್ದ ಪಂದ್ಯವನ್ನು ಕೈಚೆಲ್ಲಿ ಪ್ಲೇಆಫ್‌ ರೇಸ್‌ನಿಂದ ಹೊರಬಿದ್ದ ಲಖನೌ ಸೂಪರ್‌ ಜೈಂಟ್ಸ್‌

KL Rahul: ಟೀಂ ಇಂಡಿಯಾ ಟೆಸ್ಟ್ ತಂಡಕ್ಕೆ ಕೆಎಲ್ ರಾಹುಲ್ ನಾಯಕನಾಗಬೇಕಾ ಶುಬ್ಮನ್ ಗಿಲ್ ಬೇಕಾ

IPL 2025: ಟೈಟನ್ಸ್‌ ವಿರುದ್ಧ ಡೆಲ್ಲಿಗೆ ಮುಖಭಂಗ: ಗುಜರಾತ್‌, ಆರ್‌ಸಿಬಿ, ಪಂಜಾಬ್‌ ತಂಡಗಳಿಗೆ ಪ್ಲೇಆಫ್‌ ಟಿಕೆಟ್‌

ಮುಂದಿನ ಸುದ್ದಿ
Show comments