Publish Date: Tue, 10 Mar 2026 (09:26 IST)
Updated Date: Tue, 10 Mar 2026 (09:29 IST)
ಅಹ್ಮದಾಬಾದ್: ಟೀಂ ಇಂಡಿಯಾ ಟಿ20 ವಿಶ್ವಕಪ್ ಗೆದ್ದ ಬೆನ್ನಲ್ಲೇ ತಂಡದ ಮುಂದಿನ ಟಾರ್ಗೆಟ್ ಏನು ಎಂದು ಕೋಚ್ ಗೌತಮ್ ಗಂಭೀರ್ ಘೋಷಣೆ ಮಾಡಿದ್ದಾರೆ.
ಟಿ20 ವಿಶ್ವಕಪ್ 2026 ರನ್ನು ಗೆಲ್ಲುವ ಮೂಲಕ ಟೀಂ ಇಂಡಿಯಾ ಸತತ ಎರಡನೇ ಬಾರಿಗೆ ಟಿ20 ವಿಶ್ವಕಪ್ ಗೆದ್ದು ಇತಿಹಾಸ ನಿರ್ಮಿಸಿತ್ತು. ಇದರ ಬೆನ್ನಲ್ಲೇ ಈಗ ಗೌತಮ್ ಗಂಭೀರ್ ತಮ್ಮ ಮುಂದಿನ ಗುರಿ ಏನೆಂದು ಹೇಳಿದ್ದಾರೆ.
ನಮ್ಮ ಮುಂದಿನ ಟಾರ್ಗೆಟ್ 2027 ರ ಏಕದಿನ ವಿಶ್ವಕಪ್. ಐಪಿಎಲ್ ಮುಗಿದ ತಕ್ಷಣ ಅದರ ತಯಾರಿ ಶುರುವಾಗುತ್ತದೆ. ಮೊದಲು ಏಕದಿನ ವಿಶ್ವಕಪ್ 2027 ರ ನೀಲನಕ್ಷೆ ತಯಾರಿಸುತ್ತೇವೆ. ನಂತರ ಅದಕ್ಕೆ ತಕ್ಕಂತೆ ಕೆಲಸ ಮಾಡಲಿದ್ದೇವೆ ಎಂದಿದ್ದಾರೆ.
ಇನ್ನು ತಾವು ಕೋಚ್ ಆಗಿರುವವರೆಗೂ ತಂಡದಲ್ಲಿ ವೈಯಕ್ತಿಕ ದಾಖಲೆಗಳಿಗೆ ಜಾಗವಿಲ್ಲ ಎಂದು ಗೌತಮ್ ಗಂಭೀರ್ ಖಡಕ್ ಸೂಚನೆ ಕೊಟ್ಟಿದ್ದಾರೆ. ವೈಯಕ್ತಿಕ ದಾಖಲೆಗಳಿಂದ ಕಪ್ ಗೆಲ್ಲುವುದೇ ಮುಖ್ಯ ಎಂದು ಸಂದೇಶ ನೀಡಿದ್ದಾರೆ.