Publish Date: Sun, 14 Mar 2021 (09:36 IST)
Updated Date: Sun, 14 Mar 2021 (09:37 IST)
ಅಹಮ್ಮದಾಬಾದ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟಿ20 ಯಲ್ಲಿ ಹಿಟ್ ಮ್ಯಾನ್ ರೋಹಿತ್ ಶರ್ಮಾಗೆ ಕೊಕ್ ನೀಡಿರುವುದು ಅಭಿಮಾನಿಗಳು, ಮಾಜಿ ಕ್ರಿಕೆಟಿಗರ ಆಕ್ರೋಶಕ್ಕೆ ಕಾರಣವಾಗಿದೆ.
ರೋಹಿತ್ ಆಡಲಿಲ್ಲವೆಂದರೆ ಟಿವಿಯಲ್ಲಿ ಮ್ಯಾಚ್ ನೋಡುವ ಆಸಕ್ತಿಯೂ ನಮಗಿಲ್ಲ. ನಾವು ಟಿವಿ ಬಂದ್ ಮಾಡ್ತೀವಿ ಎಂದು ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್, ಅಭಿಮಾನಿಗಳು ಖಡಕ್ ಆಗಿ ಹೇಳಿದ್ದಾರೆ.
ಅದೂ ಅಲ್ಲದೆ ಕಳೆದ ಪಂದ್ಯಕ್ಕೆ ಮೊದಲು ಕೊಹ್ಲಿ ರೋಹಿತ್-ರಾಹುಲ್ ನಮ್ಮ ಓಪನರ್ ಗಳು ಎಂದಿದ್ದರು. ಆದರೆ ಕೊನೆಯ ಗಳಿಗೆಯಲ್ಲಿ ರೋಹಿತ್ ರನ್ನು ಆಡುವ ಬಳಗದಿಂದ ಹೊರಗಿಟ್ಟಿದ್ದು ಎಲ್ಲರ ಆಕ್ರೋಶಕ್ಕೆ ಕಾರಣವಾಗಿದೆ. ರೋಹಿತ್ ರಂತಹ ಸ್ಟಾರ್ ಬ್ಯಾಟ್ಸ್ ಮನ್ ಗಳನ್ನು ಕಡೆಗಣಿಸಿರುವುದಕ್ಕೆ ಆಕ್ರೋಶ ವ್ಯಕ್ತವಾಗಿದೆ.