ಟೀಂ ಇಂಡಿಯಾ ಗೆಲುವಿಗೆ ಕಾರಣವಾದ ಡಿಕೆ ಬಾಸ್!

Webdunia
ಸೋಮವಾರ, 19 ಮಾರ್ಚ್ 2018 (09:01 IST)
ಕೊಲೊಂಬೊ: ತ್ರಿಕೋನ ಟಿ20 ಸರಣಿಯ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಅಂತಿಮ ಬಾಲ್ ನಲ್ಲಿ ರೋಚಕವಾಗಿ ಗೆದ್ದು ಸರಣಿ ತನ್ನದಾಗಿಸಿಕೊಂಡಿದೆ. ಇದಕ್ಕೆಲ್ಲಾ ಕಾರಣವಾಗಿದ್ದು ಡಿಕೆ ಬಾಸ್!
 

ಅಂದರೆ ದಿನೇಶ್ ಕಾರ್ತಿಕ್! ಅವರನ್ನು ಟೀಂ ಇಂಡಿಯಾ ಸದಸ್ಯರು ಪ್ರೀತಿಯಿಂದ ಕರೆಯುವ ಹೆಸರು ಡಿಕೆ. ಕಾರ್ತಿಕ್ ಕೊನೆಯಲ್ಲಿ ಬಂದು ಬಿರುಗಾಳಿಯಂತೆ ಅಬ್ಬರಿಸದೇ ಹೋಗಿದ್ದರೆ ಟೀಂ ಇಂಡಿಯಾ ಬಾಂಗ್ಲಾದಂತಹ ಕ್ರಿಕೆಟ್ ಶಿಶುಗಳ ಎದುರು ಸೋತು ಮುಖಭಂಗ ಅನುಭವಿಸಬೇಕಾಗಿತ್ತು.

ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 166 ರನ್ ಗಳಿಸಿತ್ತು. ಬಾಂಗ್ಲಾ  ಪರ ಶಬ್ಬೀರ್ ರೆಹಮಾನ್ 50 ಎಸೆತದಲ್ಲಿ 77 ರನ್ ಸಿಡಿಸಿದರು. ಟೀಂ ಇಂಡಿಯಾ ಪರ ಯಜುವೇಂದ್ರ ಚಾಹಲ್ 3, ಜಯದೇವ್ ಉನಾದ್ಕಟ್ 2 ವಿಕೆಟ್ ಹಾಗೂ ವಾಷಿಂಗ್ಟನ್ ಸುಂದರ್ 1 ವಿಕೆಟ್ ಕಬಳಿಸಿದರು.

ಬ್ಯಾಟಿಂಗ್ ಆರಂಭಿಸಿದ ಭಾರತ ಇನ್ನೇನು ಉತ್ತಮ ಆರಂಭ ಪಡೆಯಿತು ಎನ್ನುವಷ್ಟರಲ್ಲಿ ಶಿಖರ್ ಧವನ್ ವಿಕೆಟ್ ಕಳೆದುಕೊಂಡಿತು. ಹಾಗಿದ್ದರೂ ರೋಹಿತ್ ಶರ್ಮಾ ಬಿರುಸಿನ 56 ರನ್ ಗಳಿಸಿದರು. ರೈನಾ ಬೇಗನೇ ಔಟಾದರೂ ಮನೀಶ್ ಪಾಂಡೆ (28), ಕೆಎಲ್ ರಾಹಲ್ ಬಿರುಸಿನ 24 ರನ್ ಗಳಿಸಿದರು. ಆದರೆ ಯುವ ಆಟಗಾರ ವಿಜಯ್ ಶಂಕರ್ 19 ಬಾಲ್ ಗಳಲ್ಲಿ 17 ರನ್ ಗಳಿಸಿ ಭಾರತಕ್ಕೆ ಸಂಕಟ ತಂದಿತ್ತರು. ಅಷ್ಟೇ ಅಲ್ಲ, ಗೆಲುವಿಗೆ ನಾಲ್ಕು ರನ್ ಬೇಕಾಗಿದ್ದಾಗ ಅಂತಿಮ ಘಟ್ಟದಲ್ಲಿ ವಿಕೆಟ್ ಕೈ ಚೆಲ್ಲಿ ವಿಲನ್ ಆದರು.

ಆದರೆ ಕ್ರೀಸ್ ನಲ್ಲಿ ದಿನೇಶ್ ಕಾರ್ತಿಕ್ ಗೆ ಅಂತಿಮ ಎಸೆತ ಎದುರಿಸುವ ಅವಕಾಶ ಸಿಕ್ಕಿದ್ದರಿಂದ ಭಾರತಕ್ಕೆ ಗೆಲುವು ಸಾಧ್ಯವಾಯಿತು. ಅಂತಿಮ ಎಸೆತದಲ್ಲಿ ಭಾರತಕ್ಕೆ 5 ರನ್ ಬೇಕಾಗಿತ್ತು. ಈ ಹಂತದಲ್ಲಿ ಟಿ20 ಪಂದ್ಯದ ರೋಚಕತೆ ಏನೆಂಬುದು ಅಕ್ಷರಶಃ ಅನುಭವಕ್ಕೆ ಬಂದಿತ್ತು. ಈ ಹಂತದಲ್ಲಿ ಕೂಲ್ ಆಗಿ ಸಿಕ್ಸರ್ ಬಾರಿಸಿದ ಡಿಕೆ ಗೆಲುವು ತಂದಿತ್ತರು. ತಕ್ಷಣ ಟೀಂ ಇಂಡಿಯಾ ಅವರನ್ನು ಸುತ್ತುವರೆದು ಬಿಗಿದಪ್ಪ ಸಂಭ್ರಮಿಸಿತು. ಅಂತಿಮವಾಗಿ ಕಾರ್ತಿಕ್ 8 ಬಾಲ್ ಗಳಲ್ಲಿ 3 ಸಿಕ್ಸರ್, 2 ಬೌಂಡರಿ ನೆರವಿನಿಂದ 29 ರನ್ ಗಳಿಸಿದರು. ಟೀಂ ಇಂಡಿಯಾ 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು ಗೆಲುವಿನ ಗುರು ಮುಟ್ಟಿತು.

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ರಣಜಿ ಟ್ರೋಫಿ ಫೈನಲ್ ನ ಮೊದಲ ದಿನ ಕರ್ನಾಟಕದ ವಿರುದ್ಧ ಜಮ್ಮು ಕಾಶ್ಮೀರ ಬ್ಯಾಟಿಂಗ್ ಹೇಗಿತ್ತು

ಮಹಿಳೆಯರ ಟಿ20 ವಿಶ್ವಕಪ್ ವೇಳಾಪಟ್ಟಿ ಪ್ರಕಟ: ಭಾರತಕ್ಕೆ ಪಾಕಿಸ್ತಾನ ಮೊದಲ ಎದುರಾಳಿ

INDW vs AUSW: ಮೊದಲ ಏಕದಿನ ಪಂದ್ಯವನ್ನೇ ಸೋತ ಭಾರತ ವನಿತೆಯರು

ರಾಹುಲ್ ದ್ರಾವಿಡ್ ಗಿದ್ದ ಒಂದೇ ಒಂದು ವೀಕ್ನೆಸ್ ಎಂದರೆ ಇದೇ ಅಂತೆ

ರಣಜಿ ಫೈನಲ್‌ನಲ್ಲಿ ಕರ್ನಾಟಕ ವಿರುದ್ಧ ಜಮ್ಮು ಕಾಶ್ಮೀರ ಉತ್ತಮ ಆರಂಭ: ಯಾರಾಗುತ್ತಾರೆ ದೇಶೀಯ ಕ್ರಿಕೆಟ್‌ನ ಒಡೆಯ

ಮುಂದಿನ ಸುದ್ದಿ
Show comments