Webdunia - Bharat's app for daily news and videos

Install App

KL Rahul: ಆರ್ ಸಿಬಿಯಂತಲ್ಲ, ಕೆಎಲ್ ರಾಹುಲ್ ಗಾಗಿ ಯಾವುದಕ್ಕೂ ರೆಡಿಯಿದ್ದ ಡೆಲ್ಲಿ ಕ್ಯಾಪಿಟಲ್ಸ್

Krishnaveni K
ಶುಕ್ರವಾರ, 29 ನವೆಂಬರ್ 2024 (10:55 IST)
ನವದೆಹಲಿ: ಈ ಬಾರಿ ಐಪಿಎಲ್ 2025 ರ ಮೆಗಾ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ತಂಡ ಕೆಎಲ್ ರಾಹುಲ್ ರನ್ನು ಖರೀದಿಸದೇ ಅಭಿಮಾನಿಗಳ ಆಕ್ರೋಶಕ್ಕೆ ಗುರಿಯಾಗಿತ್ತು. ಆದರೆ ಅತ್ತ ಡೆಲ್ಲಿ ಕ್ಯಾಪಿಟಲ್ಸ್ ರಾಹುಲ್ ಗಾಗಿ ಏನು ಮಾಡಲೂ ರೆಡಿಯಿತ್ತು ಎಂಬ ಅಂಶ ಬೆಳಕಿಗೆ ಬಂದಿದೆ.

ಕೆಎಲ್ ರಾಹುಲ್ ರನ್ನು ಖರೀದಿ ಮಾಡಲು ಮೊದಲು ಆರ್ ಸಿಬಿ ಬಿಡ್ಡಿಂಗ್ ಮಾಡಿತ್ತು. ಆದರೆ ಕನ್ನಡಿಗನ ಆಯ್ಕೆಗೆ ಕೇವಲ 7 ಕೋಟಿ ರೂ. ಮೀಸಲಿಟ್ಟಿತ್ತು. ಈ ಮೊತ್ತ ದಾಟುತ್ತಿದ್ದಂತೇ ಆರ್ ಸಿಬಿ ಬಿಡ್ಡಿಂಗ್ ನಿಲ್ಲಿಸಿತ್ತು. ಆದರೆ ಡೆಲ್ಲಿ ಕ್ಯಾಪಿಟಲ್ಸ್ ಬಿಡ್ಡಿಂಗ್ ಮುಂದುವರಿಸಿ 14 ಕೋಟಿ ರೂ.ಗೆ ರಾಹುಲ್ ರನ್ನು ತನ್ನ ತಂಡಕ್ಕೆ ಖರೀದಿ ಮಾಡಿತ್ತು.

ಈ ಬಗ್ಗೆ ಡೆಲ್ಲಿ ಕ್ಯಾಪಿಟಲ್ಸ್ ಸಹ ಮಾಲಿಕ ಪಾರ್ಥ್ ಜಿಂದಾಲ್ ಹೇಳಿಕೆ ನೀಡಿದ್ದಾರೆ. ನಾವು ರಾಹುಲ್ ಗಾಗಿ ಎಷ್ಟು ಬೇಕಾದರೂ ವೆಚ್ಚ ಮಾಡಲು ರೆಡಿಯಿದ್ದೆವು ಎಂದಿದ್ದಾರೆ. ರಿಷಬ್ ಪಂತ್ ರನ್ನು ಕೈ ಬಿಟ್ಟ ಮೇಲೆ ಡೆಲ್ಲಿ ತಂಡಕ್ಕೆ ಈ ಬಾರಿ ಒಬ್ಬ ವಿಕೆಟ್ ಕೀಪರ್ ಬ್ಯಾಟಿಗ ಮತ್ತು ಕ್ಯಾಪ್ಟನ್ ಆಗಬಲ್ಲ ಆಟಗಾರನ ಅವಶ್ಯಕತೆಯಿತ್ತು. ಹೀಗಾಗಿ ರಾಹುಲ್ ರನ್ನು ಹೇಗಾದರೂ ಖರೀದಸಲೇ ಬೇಕು ಎಂದು ಡೆಲ್ಲಿ ಫ್ರಾಂಚೈಸಿ ತೀರ್ಮಾನಿಸಿತ್ತು.

ಒಂದು ವೇಳೆ ರಾಹುಲ್ ಬೆಲೆ 14 ಕೋಟಿ ದಾಟಿದ್ದರೂ ವೆಚ್ಚ ಮಾಡಲು ನಾವು ತಯಾರಿದ್ದೆವು ಎಂದಿದ್ದಾರೆ. ರಾಹುಲ್ ನಾಯಕತ್ವ ಗುಣ ತಂಡದ ಯಶಸ್ಸಿಗೆ ಪೂರಕವಾಗಬಹುದು ಎಂದು ನಾವು ಅಂದುಕೊಂಡಿದ್ದೆವು. ಹೀಗಾಗಿ ಅವರನ್ನು ಹೇಗಾದರೂ ಖರೀದಿಸಲೇಬೇಕು ಎಂದುಕೊಂಡಿದ್ದೆವು ಎಂದಿದ್ದಾರೆ. ವಿಪರ್ಯಾಸವೆಂದರೆ ಇತ್ತ ಆರ್ ಸಿಬಿ ಅಭಿಮಾನಿಗಳು ನಮ್ಮ ಹುಡುಗ ರಾಹುಲ್ ಖರೀದಿಸಿ, ನಾಯಕ ಮಾಡಿ ಎಂದೆಲ್ಲಾ ಬೇಡಿಕೆಯಿಟ್ಟಿದ್ದಷ್ಟೇ ಬಂತು. ಆರ್ ಸಿಬಿ ಮಾಲಿಕರಿಗೆ ಅವರನ್ನು ಖರೀದಿಸುವ ಆಸಕ್ತಿಯೇ ಇರಲಿಲ್ಲ

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

KL Rahul: ಟೀಂ ಇಂಡಿಯಾ ಟೆಸ್ಟ್ ತಂಡಕ್ಕೆ ಕೆಎಲ್ ರಾಹುಲ್ ನಾಯಕನಾಗಬೇಕಾ ಶುಬ್ಮನ್ ಗಿಲ್ ಬೇಕಾ

IPL 2025: ಟೈಟನ್ಸ್‌ ವಿರುದ್ಧ ಡೆಲ್ಲಿಗೆ ಮುಖಭಂಗ: ಗುಜರಾತ್‌, ಆರ್‌ಸಿಬಿ, ಪಂಜಾಬ್‌ ತಂಡಗಳಿಗೆ ಪ್ಲೇಆಫ್‌ ಟಿಕೆಟ್‌

ಜೀವಬೆದರಿಕೆ ಬೆನ್ನಲ್ಲೇ ತಿರುಪತಿಗೆ ಟೀ ಇಂಡಿಯಾ ಕೋಚ್ ಭೇಟಿ, ಇಬ್ಬರು ಮಕ್ಕಳನ್ನು ಕೈಹಿಡಿದು ನಡೆದ ಗೌತಮ್ ಗಂಭೀರ್‌

ದೋಹಾ ಡೈಮಂಡ್‌ ಲೀಗ್‌ನಲ್ಲಿ ನೀರಜ್ ಚೋಪ್ರಾ ವಿರುದ್ಧ ಸ್ಪರ್ಧಿಸದ ಪಾಕ್‌ನ ಅರ್ಷದ್‌ ನದೀಮ್, ಕಾರಣ ಹೀಗಿದೆ

ಮುಂದಿನ ಸುದ್ದಿ
Show comments