Publish Date: Wed, 22 Jul 2020 (10:57 IST)
Updated Date: Wed, 22 Jul 2020 (10:59 IST)
ಬೆಂಗಳೂರು: ಕೊರೋನಾ ತಡೆಗೆ ಲಾಕ್ ಡೌನ್ ಪರಿಹಾರವಲ್ಲ ಎಂದರೂ ರಾಜ್ಯ ಸರ್ಕಾರ ಕೆಲವು ಕಟ್ಟುನಿಟ್ಟಿನ ನಿಯಮ ಜಾರಿಗೆ ತರಲು ಉದ್ದೇಶಿಸಿದೆ. ಇದಕ್ಕಾಗಿ ಈಗ ಇರುವ ನಿಯಮದಲ್ಲಿ ಕೊಂಚ ಬದಲಾವಣೆ ತರಲಿದೆ.
ಮಾಸ್ಕ್, ಸಾಮಾಜಿಕ ಅಂತರದ ಜತೆಗೆ ಕೊರೋನಾ ನಿಯಮ ಉಲ್ಲಂಘನೆಗೆ ಈಗಿರುವ ಐದು ಪಟ್ಟು ಹೆಚ್ಚಳ ದಂಡ ವಸೂಲಿ ಮಾಡುವ ಕಟ್ಟುನಿಟ್ಟಿನ ನಿಯಮ ಜಾರಿಗೆ ತರಲು ಸರ್ಕಾರಕ್ಕೆ ಬಿಬಿಎಂಪಿ ಆಯುಕ್ತರು ಸಲಹೆ ನೀಡಲಿದ್ದಾರೆ.
ಈಗಾಗಲೇ ಬೆಂಗಳೂರು ವ್ಯಾಪ್ತಿಯಲ್ಲಿ ಹಲವರಿಂದ ದಂಡ ಕಟ್ಟಿಸಿಕೊಳ್ಳಲಾಗಿದೆ. ಹಾಗಿದ್ದರೂ ಜನರು ದಾರಿಗೆ ಬರುತ್ತಿಲ್ಲ. ಹೀಗಾಗಿ ದಂಡದ ಮೊತ್ತ ಹೆಚ್ಚಿಸುವ ಬಗ್ಗೆ ಆಯುಕ್ತರು ಸರ್ಕಾರದ ಜತೆ ಚರ್ಚೆ ನಡೆಸಲಿದ್ದಾರೆ.