ಮುಂಬೈ: ಭಕ್ತರ ಕರೆಗೆ ಅಯ್ಯಪ್ಪ ಸ್ವಾಮಿ ಕರಗುತ್ತಾನೆ ಎಂಬ ಮಾತಿದೆ. ಇಲ್ಲೊಂದು ದೇವಸ್ಥಾನದಲ್ಲಿ ಆ ಮಾತು ನಿಜವಾಗಿದೆ.
									
			
			 
 			
 
 			
					
			        							
								
																	ಮುಂಬೈನ ಆದರ್ಶ ನಗರದ ಅಯ್ಯಪ್ಪ ಗುಡಿಯಲ್ಲಿ ಮಧ್ಯರಾತ್ರಿ ಭಕ್ತನೊಬ್ಬನಿಗೆ ಸ್ವತಃ ಅಯ್ಯಪ್ಪ ಸ್ವಾಮಿಯೇ ಬಾಗಿಲು ತೆರೆದು ದರ್ಶನ ಕೊಟ್ಟಿದ್ದಾನೆ! ಆದರೆ ಭಕ್ತನಿಗೆ ದೇವರ ಈ ಪವಾಡ ಗೊತ್ತೇ ಆಗಲಿಲ್ಲ.
									
										
								
																	ವ್ಯಕ್ತಿಯೊಬ್ಬರು ಭಕ್ತಿಯಿಂದ ಅಯ್ಯಪ್ಪ ಸ್ವಾಮಿಯನ್ನು ನೆನೆಯುತ್ತಾ ನಮಸ್ಕರಿಸಿ, ಪ್ರದಕ್ಷಿಣೆ ಬರುತ್ತಾರೆ. ಅವರು ಹಿಂದುಗಡೆ ಪ್ರದಕ್ಷಿಣೆ ಹಾಕಿಕೊಂಡು ಬರುವಾಗ ಬೀಗ ಹಾಕಿದ್ದಾಗ ಮುಂಬಾಗಿಲು ತಾನೇ ತೆರೆದುಕೊಳ್ಳುತ್ತದೆ. ಇದರ ಅರಿವೇ ಇಲ್ಲದೇ ಆ ವ್ಯಕ್ತಿ ದೇವರಿಗೆ ಮತ್ತೆ ಅಡ್ಡಬಿದ್ದು ನಮಸ್ಕರಿಸಿ ಅಲ್ಲಿಂದ ತೆರಳುತ್ತಾರೆ.
									
											
							                     
							
							
			        							
								
																	ಆದರೆ ಸಿಸಿಟಿವಿ ಕ್ಯಾಮರಾಗಳಲ್ಲಿ ಈ ದೃಶ್ಯ ಸೆರೆಯಾಗಿದೆ. ಇದನ್ನು ನೋಡಿ ಕೆಲವರು ಇದು ಸ್ವಾಮಿಯ ಪವಾಡ ಎಂದು ಉದ್ಘರಿಸಿದ್ದಾರೆ.