Webdunia - Bharat's app for daily news and videos

Install App

ಇಂದು ಈ ರಾಶಿಯವರು ಆಡಿದ ಮಾತು ಆಪತ್ತು ತರುವ ಸಾಧ್ಯತೆಯಿದೆ

Sampriya
ಭಾನುವಾರ, 18 ಆಗಸ್ಟ್ 2024 (11:11 IST)
Photo Courtesy X
ಇಂದಿನ ದಿನಭವಿಷ್ಯವನ್ನು ನೋಡುವುದಾದರೆ ಚಂದ್ರನು ಕುಂಭ ರಾಶಿಯಲ್ಲೇ ನೆಲೆಸಿದ್ದು,  ಇದರಿಂದಾಗಿ ಮೇಷ, ಕಟಕ, ತುಲಾ, ಕುಂಭ, ಮೀನ ರಾಶಿಯವರಿಗೆ  ಚಂದ್ರನ ಬಲವಿದೆ. ಇನ್ನೂ ಮೇಷ ರಾಶಿಯವರು ಭಾವನಾತ್ಮಕವಾಗಿ ಸ್ಥಿರವಾಗಿರುವುದಿಲ್ಲ. ಇಂದಿನ ಭವಿಷ್ಯ ಪ್ರಕಾರ ಇವರು ಆತುರದಿಂದ ಆಡಿದ ಮಾತು ಅಪಾಯ ತಂದೊಡ್ಡುವ ಸಾಧ್ಯತೆಯಿದೆ.  ಆರೋಗ್ಯ ಕೊಂಚ ಮಟ್ಟಿಗೆ ಹದಗೆಡುವ ಸಾಧ್ಯತೆ ಇದೆ. ಇದೂ ಸೇರಿದಂತೆ ದ್ವಾದಶ ರಾಶಿಗಳ ಇಂದಿನ ಭವಿಷ್ಯ ಹೇಗಿದೆ? ಪಂಚಾಂಗ ಏನು ಹೇಳುತ್ತದೆ ಎಂಬುದನ್ನು ತಿಳಿಯೋಣ.

ಮೇಷ: ಭಾವನಾತ್ಮಕವಾಗಿ ಮನಸ್ಸು ಸ್ಥಿರವಾಗಿರುವುದಿಲ್ಲ, ಆತುರದ ಮಾತುಗಳು ಅಪಾಯ ತಂದೊಡ್ಡುವ ಸಾಧ್ಯತೆಯಿದೆ. ಇವರಿಗೆ ಅದೃಷ್ಟ ಸಂಖ್ಯೆ ಒಂದು.

ವೃಷಭ: ಆರ್ಥಿಕ ಪ್ರಗತಿ ಸಾಧಾರಣವಾಗಿರಲಿದೆ. ಇನ್ನೂ ಮನೆಯಲ್ಲಿ ಶುಭ ಕಾರ್ಯಗಳ ಕುರಿತು ಚರ್ಚೆ ನಡೆಯಲಿದೆ. ಹೂಡಿಕೆ ವ್ಯವಹಾರದಲ್ಲಿ ತೊಡುಗುವುದು ಬೇಡ.ಇವರಿಗೆ ಕೌಟುಂಬಿಕವಾಗಿ ಒಳ್ಳೆಯ ದಿನ. ಅದೃಷ್ಟ ಸಂಖ್ಯೆ ಒಂಭತ್ತು

ಮಿಥುನ: ಇವರ ಆರೋಗ್ಯದಲ್ಲಿ ಕೊಂಚ ಮಟ್ಟಿಗೆ ಹದಗೆಟ್ಟುವ ಸಾಧ್ಯತೆಯಿದೆ. ಸಕಾರಾತ್ಮಕ ಆಲೋಚನೆಗಳು ಪುಷ್ಟಿ ನೀಡುವಂತೆ ಮಾಡುವುದು. ಆತುರದ ತೀರ್ಮಾನ, ಮಾತುಗಳು ಅಪಾಯ ತಂದಿತು ಎಚ್ಚರಿಕೆ ಇರಲಿ. ಅದೃಷ್ಟ ಸಂಖ್ಯೆ ಏಳು.

ಕಟಕ: ಅತಿ ಒತ್ತಡದಿಂದ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಸೂಕ್ತ ವ್ಯಕ್ತಿಗಳ ಬೆಂಬಲದಿಂದ ಹೂಡಿಕೆ ವ್ಯವಹಾರದಲ್ಲಿ ತೊಡುಗುವ ಸಾಧ್ಯತೆ ಇದೆ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ ಎರಡು.

ಸಿಂಹ: ವರ್ತನೆಯಲ್ಲಿ ಬದಲಾವಣೆಯಾಗಿ, ಹಿರಿಯರ ಆಶೀರ್ವಾದಿಂದ ಯಶಸ್ಸು ನಿಮ್ಮದಾಗಲಿದೆ. ಹಣಕಾಸು ವ್ಯವಹಾರಲ್ಲಿ ಯಶಸ್ಸು ಸಿಗಲಿದೆ.  ಕೌಟುಂಬಿಕವಾಗಿ ಮಿಶ್ರ ಫಲ. ಅದೃಷ್ಟ ಸಂಖ್ಯೆ ಒಂಭತ್ತು.

ಕನ್ಯಾ: ಕುಟುಂಬಕ್ಕಾಗಿ ಅನಗತ್ಯ ಖರ್ಚು ಆಗಲಿದೆ. ಒತ್ತಡದ ಕಾರ್ಯ ಆಯಾಸವನ್ನುಂಟು ಮಾಡುವುದು. ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುವ ಸಾಧ್ಯತೆ ಇದೆ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ ಏಳು.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Karnataka Weather: ಈ ವಾರದಿಂದ ರಾಜ್ಯದಲ್ಲಿ ಮಳೆ ಹೇಗಿರಲಿದೆ ಇಲ್ಲಿದೆ ಸಂಪೂರ್ಣ ವರದಿ

Shiva Mantra: ಸೋಮವಾರ ಶಿವ ಅಷ್ಟೋತ್ತರ ಭಕ್ತಿಯಿಂದ ಓದಿ

Subramanya Mantra: ಸುಬ್ರಹ್ಮಣ್ಯ ಸ್ವಾಮಿಯ ಈ ಸ್ತೋತ್ರವನ್ನು ತಪ್ಪದೇ ಓದಿ

ಪಾಂಡುರಂಗಾಷ್ಟಕಂ ಕನ್ನಡದಲ್ಲಿ ಇಲ್ಲಿದೆ

Sai Baba astakam: ಸಾಯಿಬಾಬ ಪ್ರಾರ್ಥನಾಷ್ಟಕಂ ಕನ್ನಡದಲ್ಲಿ ಇಲ್ಲಿದೆ ನೋಡಿ

ಮುಂದಿನ ಸುದ್ದಿ
Show comments