ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Webdunia
ಬುಧವಾರ, 12 ಡಿಸೆಂಬರ್ 2018 (08:41 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ಉದ್ಯೋಗದಲ್ಲಿ ಸ್ಥಾನಪಲ್ಲಟವಾಗುವ ಸಾಧ್ಯತೆಯಿದೆ ಅವಿವಾಹಿತರಿಗೆ ಕಂಕಣ ಕೂಡಿ ಬರಲಿದೆ. ದೇವತಾ ಕಾರ್ಯದಲ್ಲಿ ಪಾಲ್ಗೊಳ್ಳುವಿರಿ.

ವೃಷಭ: ಆರೋಗ್ಯದ ಬಗ್ಗೆ ಎಚ್ಚರವಹಿಸಿ. ವಿದ್ಯಾರ್ಥಿಗಳಿಗೆ ಯಶಸ್ಸು ಸಿಗಲಿದೆ. ಉದ್ಯೋಗಾರ್ಥಿಗಳಿಗೆ ಮುಂಬಡ್ತಿಗೆ ಅವಕಾಶವಿದೆ.

ಮಿಥುನ: ಮನೆಯಲ್ಲಿ ಶುಭ ಕಾರ್ಯ ನಡೆಸುವಿರಿ. ಕುಟುಂಬದವರ ಸಹಕಾರ ಸಿಕ್ಕಿ ಸಂತಸದಿಂದಿರುವಿರಿ.

ಕರ್ಕಟಕ: ಬಹುದಿನಗಳಿಂದ ನಷ್ಟ ಅನುಭವಿಸುತ್ತಿದ್ದರೆ ಇಂದು ನಿಮ್ಮ ವ್ಯವಹಾರದಲ್ಲಿ ಕೊಂಚ ಚೇತರಿಕೆ ಕಂಡು ನೆಮ್ಮದಿ ಕಾಣುವಿರಿ. ಕೋಪದ ಕೈಗೆ ಬುದ್ಧಿ ಕೊಡಬೇಡಿ.

ಸಿಂಹ: ಹೊಸ ಪ್ರಯತ್ನಗಳಿಗೆ ಕೈ ಹಾಕುವಿರಿ. ದೇವತಾ ಕಾರ್ಯಗಳಲ್ಲಿ ಪಾಲ್ಗೊಳ್ಳುವಿರಿ. ಖರ್ಚುವೆಚ್ಚಗಳು ಅಧಿಕವಾಗಬಹುದು.

ಕನ್ಯಾ: ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಿದರೆ ಯಶಸ್ಸು ಸಿಗಲಿದೆ. ವೃತ್ತಿಯಲ್ಲಿ ಯಶಸ್ಸು ಕಾಣುವಿರಿ. ಆರೋಗ್ಯ ಏರುಪೇರಾಗಬಹುದು.

ತುಲಾ: ಹಿರಿಯರ ಸಲಹೆಗಳನ್ನು ಅವಗಣಿಸಬೇಡಿ. ಗುರುಬಲ ನಿಮ್ಮೊಂದಿಗಿದ್ದು ಪ್ರಯತ್ನಕ್ಕೆ ತಕ್ಕ ಯಶಸ್ಸು ಕಾಣುವಿರಿ.

ವೃಶ್ಚಿಕ: ತಾಳ್ಮೆಯಿಂದ ಇದ್ದರೆ ಮಾತ್ರ ಯಶಸ್ಸು ಕೈ ಹಿಡಿಯಲಿದೆ. ಹಿತಶತ್ರುಗಳ ಕಾಟವಿದ್ದರೂ ಕಾರ್ಯಕ್ಷೇತ್ರದಲ್ಲಿ ಯಶಸ್ಸು ಕಾಣುವಿರಿ. ಕುಟುಂಬದವರೊಂದಿಗೆ ಎಚ್ಚರಿಕೆಯಿಂದ ವ್ಯವಹರಿಸಿ.

ಧನು: ಇಂದಿನ ದಿನ ನಿಮಗೆ ಉಲ್ಲಾಸದಾಯಕವಾಗಲಿದೆ. ಬಹುದಿನಗಳ ಆರೋಗ್ಯ ಸಮಸ್ಯೆ ನಿವಾರಣೆಯಾಗಲಿದೆ. ಹಣ ಖರ್ಚಾದರೂ ನೆಮ್ಮದಿಗೆ ಕೊರತೆಯಿಲ್ಲ.

ಮಕರ: ಪ್ರೀತಿ, ಪ್ರೇಮದಲ್ಲಿ ಬಿದ್ದವರಿಗೆ ಇಂದು ಯಶಸ್ಸು. ವಿದ್ಯಾರ್ಥಿಗಳಿಗೆ ಯಶಸ್ಸು ಮತ್ತು ಆರೋಗ್ಯದಲ್ಲಿ ಸುಧಾರಣೆಯಾಗಲಿದೆ.

ಕುಂಭ: ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗುವಿರಿ. ಕೆಲಸಗಳಲ್ಲಿ ಉತ್ತಮ ಫಲ ದೊರೆತರೂ ನಿಮ್ಮ ಮೇಲೆ ವೃಥಾ ಆರೋಪವೊಂದು ಕೇಳಿಬಂದೀತು.

ಮೀನ: ದೂರ ಸಂಚಾರ ಮಾಡುವಿರಿ. ಆತ್ಮವಿಶ್ವಾಸದಿಂದ ನಡೆದರೆ ಯಾವುದೇ ಕಾರ್ಯದಲ್ಲೂ ಯಶಸ್ಸು ಸಾಧಿಸುವಿರಿ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.        

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಬುಧ ಗ್ರಹ ದೋಷವಿದ್ದಾಗ ಯಾವ ಆಹಾರ ಸೇವಿಸಬೇಕು, ಬಟ್ಟೆ ಧರಿಸಬೇಕು ತಿಳಿಯಿರಿ

ಬುಧವಾರ ಶಾರದಾ ದೇವಿಯ ಈ ಪ್ರಾರ್ಥನಾ ಮಂತ್ರ ಹೇಳಿ

ಜ್ಯೋತಿಷ್ಯ ಪ್ರಕಾರ ಮೀನ ರಾಶಿಯವರು ಯಾವ ಆರೋಗ್ಯ ಸೇವಿಸಬೇಕು

ಏಕಾದಶಮುಖ ಹನುಮತ್ಕವಚ ಸ್ತೋತ್ರಂ ಕನ್ನಡದಲ್ಲಿ

ಜ್ಯೋತಿಷ್ಯ ಪ್ರಕಾರ ಕುಂಭ ರಾಶಿಯವರು ಯಾವ ಆರೋಗ್ಯ ಸೇವಿಸಬೇಕು

ಮುಂದಿನ ಸುದ್ದಿ
Show comments