Publish Date: Tue, 01 May 2018 (07:40 IST)
Updated Date: Tue, 01 May 2018 (07:43 IST)
ಬೆಂಗಳೂರು : ಎಷ್ಟೇ ಕೆಲಸಗಳಿದ್ದರೂ, ಯಾವಾಗಲೇ ಆಗಲಿ,ಎಲ್ಲೇ ಇರಲಿ . ನಾವು ಪ್ರತಿ ನಿತ್ಯ ಸ್ನಾನ ಮಾಡಲೇಬೇಕು. ಇದರಿಂದ ಶರೀರ ಶುದ್ಧವಾಗುವುದರ ಜೊತೆಗೆ ಅನೇಕ ರೀತಿಯ ರೋಗಗಳು ಹತ್ತಿರ ಸುಳಿಯದೆ ಇರುತ್ತವೆ. ಶರೀರದ ಆರೋಗ್ಯದ ಜೊತೆಗೆ ಮನಸ್ಸು ಸಹ ಉಲ್ಲಾಸದಿಂದಿದ್ದು ನೆಮ್ಮದಿ ದೊರೆಯುತ್ತದೆ. ನಾವು ದಿನವೂ ಸ್ನಾನ ಮಾಡುತ್ತೇವಾದರೂ ಕೆಲವು ಸಂದರ್ಭಗಳಲ್ಲಿ ತಪ್ಪದೆ ಸ್ನಾನ ಮಾಡಬೇಕೆಂದು ಆಚಾರ್ಯ ಚಾಣಕ್ಯ ಹೇಳಿದ್ದಾರೆ. ಆ ಸಂದರ್ಭಗಳು ಯಾವುವೆಂದು ತಿಳಿದುಕೊಳ್ಳೋಣ.
*ಯಾರಾದರು ಮರಣ ಹೊಂದಿದಾಗ ಅವರ ಮತದ ಸಂಪ್ರದಾಯದಂತೆ ದಹನ ಅಥವ ಖನನ ಮಾಡುತ್ತಾರೆ. ನಾವು ಅಲ್ಲಿಗೆ ಹೋಗಿ ಬಂದ ಮೇಲೆ ಸ್ನಾನ ಮಾಡಲೇ ಬೇಕು. ಯಾಕೆಂದರೆ, ಸತ್ತ ವ್ಯಕ್ತಿ ನಮಗೆ ಎಷ್ಟೇ ಹತ್ತಿರದವರಾದರೂ ಅದು ಮೃತ ದೇಹವೇ. ಅದರಲ್ಲಿ ಕೆಲವು ಕ್ರಿಮಿ ಕೀಟಗಳು ಇದ್ದೇ ಇರುತ್ತವೆ. ಅವು ನಮ್ಮ ಶರೀರಕ್ಕೂ ಅಂಟಿಕೊಂಡಿರಬಹುದು. ಆದುದರಿಂದ ಸ್ನಾನ ಮಾಡಲೇಬೇಕು.
*ಕೂದಲು ಕತ್ತರಿಸಿಕೊಂಡನಂತರ ಶರೀರದ ಮೇಲೆ ಅಂಟಿಕೊಂಡಿರುವ ಸಣ್ಣ ಕೂದಲುಗಳಿಂದ ಅನಾರೋಗ್ಯ ಉಂಟಾಗುತ್ತದೆ. ಆದುದರಿಂದ ಕಟ್ಟಿಂಗ್ ಮಾಡಿಸಿಕೊಂಡ ಒಡನೆಯೇ ಸ್ನಾನ ಮಾಡಬೇಕು.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ
pavithra
Publish Date: Tue, 01 May 2018 (07:40 IST)
Updated Date: Tue, 01 May 2018 (07:43 IST)