Webdunia - Bharat's app for daily news and videos

Install App

ವಿನಾಯಕನ ಸೊಂಡಿಲು ಯಾವ ದಿಕ್ಕಿಗಿದ್ದರೆ ಏನು ಫಲ ಎಂದು ತಿಳಿಯಬೇಕಾ...?

Webdunia
ಗುರುವಾರ, 11 ಜನವರಿ 2018 (07:15 IST)
ಬೆಂಗಳೂರು : ಸಾಮಾನ್ಯವಾಗಿ ವಿನಾಯಕನ ಪ್ರತಿಮೆಯನ್ನು ಇಡುವುದು, ಪೂಜೆಮಾಡುವುದು, ವಿಸರ್ಜಿಸುವುದು ಎಲ್ಲಾ ಸಹಜ. ವಿನಾಯಕನ ಮೂರ್ತಿಗೆ  ಸೊಂಡಿಲು ಯಾವ ದಿಕ್ಕಿಗೆ ಇರುತ್ತದೆ ಎಂದು ಯಾರು ಅಷ್ಟಾಗಿ ಗಮನಿಸಿರುವುದಿಲ್ಲ. ಆದರೆ ಇದರಲ್ಲೂ ಒಂದು ವಿಶೇಷವಿದೆ.


ಮನೆಯಲ್ಲಿ , ಬೀದಿಗಳಲ್ಲಿ ಮಂಟಪಗಳಲ್ಲಿ ಇಡುವ ಗಣೇಶನ ವಿಗ್ರಹದಲ್ಲಿ ಸೊಂಡಿಲು ಎಡಕ್ಕೆ ತಿರುಗಿರುತ್ತದೆ. ದೇವಾಲಯಗಳಲ್ಲಿ ಇಡುವ ವಿನಾಯಕನ ಸೊಂಡಿಲು ಬಲಕ್ಕೆ ತಿರುಗಿ, ಇಲ್ಲವಾದರೆ ನೇರವಾಗಿ ಇರುವುದು ಕಂಡುಬರುತ್ತದೆ. ಆದರೆ ಈ ಮೂರು ಕಡೆಯಲ್ಲಿ ಒಂದೊಂದು ಕಡೆಯಲ್ಲಿ ಇರುವ ವಿನಾಯಕನನ್ನು ಪೂಜಿಸಿದರೆ ಒಂದೊಂದು ವಿಧವಾದ ಫಲ ಸಿಗುತ್ತದೆ. ಅದೇನೆಂದರೆ ಎಡಬದಿಗೆ ಸೊಂಡಿಲು ವಿನಾಯಕನ್ನು ಪೂಜಿಸಿದರೆ ಮನೆಯಲ್ಲಿರುವ ವಾಸ್ತುದೋಷ ಪರಿಹಾರವಾಗುತ್ತದೆಯಂತೆ ಹಾಗೆ ಮನೆಯವರ ಆರೋಗ್ಯ ಕೂಡ ಚೆನ್ನಾಗಿ ಇರುತ್ತದೆಯಂತೆ. ಜೊತೆಗೆ ಪಾರ್ವತಿದೇವಿಯ ಆಶೀರ್ವಾದ ಕೂಡ ಆ ಮನೆಯವರಿಗೆ ಇರುತ್ತದೆಯಂತೆ. ಮನೆಯಲ್ಲಿ ಯಾವಾಗಲೂ ಸಂತೋಷ ತುಂಬಿರುತ್ತದೆಯಂತೆ.


ಬಲಕ್ಕೆ ಸೊಂಡಿಲಿರುವ ವಿನಾಯಕನ್ನು ಸಿದ್ಧಿವಿನಾಯಕ ಎಂದು ಕರೆಯುತ್ತಾರಂತೆ, ಈ ರೀತಿ ಸೊಂಡಿಲು ಗಣೇಶನನ್ನು ಪೂಜಿಸಿದರೆ ನಮ್ಮ ಇಷ್ಟಾರ್ಥಗಳೆಲ್ಲ ಸಿದ್ಧಿಯಾಗುತ್ತದೆಯಂತೆ. ಆದರೆ ಸೊಂಡಿಲು ನೇರವಾಗಿರುವ ಗಣೇಶನ ವಿಗ್ರಹ ತುಂಬಾ ಅಪರೂಪಕ್ಕೆ ಕಾಣಸಿಗುತ್ತದೆ. ಈ ವಿಧದ ಗಣೇಶನನ್ನು ಪೂಜಿಸಿದರೆ ಅಂದುಕೊಂಡ ದೊಡ್ಡ ಕಾರ್ಯಗಳೆಲ್ಲವೊ ನೇರವೆರುತ್ತದೆ ಎಂದು ತಿಳಿದುಬಂದಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Durga Mantra: ಮಂಗಳವಾರ ಓದಲೇಬೇಕಾದ ದುರ್ಗಾ ಸ್ತೋತ್ರ ಇಲ್ಲಿದೆ ನೋಡಿ

Karnataka Weather: ಈ ವಾರದಿಂದ ರಾಜ್ಯದಲ್ಲಿ ಮಳೆ ಹೇಗಿರಲಿದೆ ಇಲ್ಲಿದೆ ಸಂಪೂರ್ಣ ವರದಿ

Shiva Mantra: ಸೋಮವಾರ ಶಿವ ಅಷ್ಟೋತ್ತರ ಭಕ್ತಿಯಿಂದ ಓದಿ

Subramanya Mantra: ಸುಬ್ರಹ್ಮಣ್ಯ ಸ್ವಾಮಿಯ ಈ ಸ್ತೋತ್ರವನ್ನು ತಪ್ಪದೇ ಓದಿ

ಪಾಂಡುರಂಗಾಷ್ಟಕಂ ಕನ್ನಡದಲ್ಲಿ ಇಲ್ಲಿದೆ

ಮುಂದಿನ ಸುದ್ದಿ
Show comments