Publish Date: Sun, 27 Jan 2019 (07:20 IST)
Updated Date: Sun, 27 Jan 2019 (07:22 IST)
ಬೆಂಗಳೂರು : ಜಾತಕದಲ್ಲಿ ಗ್ರಹಗಳ ದೋಷವಿದ್ದರೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅದಕ್ಕಾಗಿ ಈ ಗ್ರಹಗಳ ದೋಷಕ್ಕೆ ಜ್ಯೋತಿಷ್ಯದಲ್ಲಿ ಪರಿಹಾರ ಕೂಡ ತಿಳಿಸಲಾಗಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗಳ ದೋಷ ನಿವಾರಣೆಗೆ ಸುಲಭವಾದ ಪರಿಹಾರ ಇಲ್ಲಿದೆ ನೋಡಿ.
ಮನೆಗೆ ಅತಿಥಿಗಳು ಬಂದಾಗ ಅವರಿಗೆ ಕುಡಿಯಲು ತಣ್ಣನೆಯ ನೀರನ್ನು ಕೊಡಬೇಕು. ಇದರಿಂದ ಗುರು ಗ್ರಹ ದೋಷದ ಜೊತೆಗೆ ಜಾತಕದಲ್ಲಿ ಕಾಳಸರ್ಪದ ದೋಷವಿದ್ದರೂ ಅದು ಕೂಡ ನಿವಾರಣೆಯಾಗುತ್ತದೆ.
ಅಡುಗೆ ಮನೆ ಸ್ವಚ್ಛವಾಗಿರಬೇಕು. ಅಲ್ಲಿ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದರೆ ಮಂಗಳ ಗ್ರಹದ ದೋಷ ಅಂಟಿಕೊಳ್ಳುತ್ತದೆ. ಹಾಗಾಗಿ ಅಡುಗೆ ಮನೆ ಸದಾ ಸ್ವಚ್ಛವಾಗಿರಬೇಕು. ಹಾಗೇ ಬುಧ, ಸೂರ್ಯ, ಶುಕ್ರ, ಚಂದ್ರನ ದೋಷ ಪರಿಹಾರಕ್ಕೆ ಮನೆಯ ಮುಂದೆ ಗಿಡ ನೆಟ್ಟು ಬೆಳೆಸಬೇಕು. ಮನೆ ಮುಂದೆ ಗಿಡ ನೆಟ್ಟು ಬೆಳೆಸುವುದ್ರಿಂದ ಮನಸ್ಸಿಗೆ ಶಾಂತಿಯೂ ಸಿಗುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.