Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಬೆಂಗಳೂರು: ಇಂದು ಶನಿವಾರವಾಗಿದ್ದು, ಶನಿ ದೇವನಿಗೆ ಅರ್ಪಿತವಾದ ವಾರವಾಗಿದೆ. ಸಾಮಾನ್ಯವಾಗಿ ಈ ದಿನ ಶುಭ ಕೆಲಸಗಳನ್ನು ಮಾಡುವುದಿಲ್ಲ. ಕೆಲವೊಂದು ಕೆಲಸಗಳನ್ನು ಮಾಡುವುದರಿಂದ ಶನಿ ದೋಷ ಎದುರಿಸಬೇಕಾದೀತು ಎನ್ನಲಾಗುತ್ತದೆ. ಅಂತಹ ಕೆಲಸಗಳು ಯಾವುವು ನೋಡೋಣ.
ಶನಿವಾರ ಮದುವೆ, ಮುಂಜಿ, ಹೊಸ ಕೆಲಸಗಳನ್ನು ಆರಂಭಿಸಲು ಉತ್ತಮವಾದ ದಿನವಲ್ಲ. ಆದರೆ ಅಪರಕ್ರಿಯೆಗಳನ್ನು ಮಾಡುವುದಕ್ಕೆ ಸಮಸ್ಯೆಯಿಲ್ಲ. ಅದೇ ರೀತಿ ಶುಭ ವಸ್ತುಗಳು, ಮಂಗಲ ವಸ್ತುಗಳನ್ನು ಖರೀದಿಸಲೂ ಇಂದಿನ ದಿನ ಶುಭ ದಿನವಲ್ಲ ಎಂದು ಶಾಸ್ತ್ರಗಳು ಹೇಳುತ್ತವೆ.
ಶನಿವಾರದಂದು ಯಾವುದೇ ಕಪ್ಪು ವಸ್ತುಗಳನ್ನು ಮತ್ತು ಕಬ್ಬಿಣದ ವಸ್ತುಗಳನ್ನು ಮನೆಗೆ ತರಬೇಡಿ. ಇಂದು ಯಾರಿಗೂ ನಿಂದಿಸಲು ಅಥವಾ ವಾಗ್ವಾದ ನಡೆಸಲು ಹೋಗಬೇಡಿ. ಅದೇ ರೀತಿ ಛತ್ರಿ, ಉದ್ದಿನ ಬೇಳೆ ಮುಂತಾದ ವಸ್ತುಗಳನ್ನು ಮನೆಗೆ ತಂದರೆ ಶನಿಯ ಕೋಪಕ್ಕೆ ಗುರಿಯಾಗಬೇಕಾದೀತು.
ಇಂದು ಶನಿಯ ವಕ್ರದೃಷ್ಟಿಯಿಂದ ಪಾರಾಗಬೇಕು ಎಂದರೆ ಶನಿಗೆ ಸಾಸಿವೆ ಎಣ್ಣೆಯ ದೀಪ ಹಚ್ಚಿ ಅರಳಿ ಮರದ ಬುಡದಲ್ಲಿಡಿ. ಶನಿಯ ಅವಕೃಪೆಗೊಳಗಾಗಿದ್ದರೆ ಈ ದಿನ ಆಂಜನೇಯ ಸ್ವಾಮಿಯ ಪೂಜೆ ಮಾಡುವುದರಿಂದಲೂ ದೋಷಗಳು ನಿವಾರಣೆಯಾಗುತ್ತವೆ.