Publish Date: Tue, 10 Sep 2019 (09:33 IST)
Updated Date: Tue, 10 Sep 2019 (09:34 IST)
ಬೆಂಗಳೂರು : ಮನೆಯಲ್ಲಿ ಸಂಪತ್ತು ವೃದ್ಧಿಯಾಗಲಿ ಎಂದು ಎಲ್ಲರೂ ಲಕ್ಷ್ಮೀದೇವಿಯ ಪೂಜೆ ಮಾಡುತ್ತಾರೆ. ಆದರೆ ಎಲ್ಲರಿಗೂ ಲಕ್ಷ್ಮೀ ದೇವಿ ಒಲಿಯುವುದಿಲ್ಲ. ಲಕ್ಷ್ಮೀ ಯಾರಿಗೆ ಒಲಿದಿದ್ದಾಳೋ ಅವರ ಮನೆಗೆ ಬರುವ ಮೊದಲು ಈ 2 ಸಂಕೇತ ನೀಡುತ್ತಾಳಂತೆ. ಅದು ಏನೆಂಬುದು ಇಲ್ಲಿದೆ ನೋಡಿ.
ಲಕ್ಷ್ಮೀದೇವಿಯ ವಾಹನವಾದ ಗೂಬೆ ಯಾರಿಗೆ ಕಾಣುತ್ತದೆಯೋ ಅಥವಾ ಯಾರ ಮನೆಯ ಬಳಿ ಗೂಬೆ ಕಾಣಿಸುತ್ತದೆಯೋ ಅವರ ಮನೆಗೆ ಲಕ್ಷ್ಮೀ ಬರುತ್ತಾಳೆ ಎಂಬ ನಂಬಿಕೆ. ಲಕ್ಷ್ಮೀ ತನ್ನ ವಾಹನ ಗೂಬೆಯ ಹಿಂದೆ ಬರುತ್ತಾಳೆ ಎನ್ನುತ್ತಾರೆ. ಹಾಗೇ ಬೆಳಿಗ್ಗೆ ಏಳುವಾಗ ಶಂಖದ ಸ್ವರ ಕೇಳಿದ್ರೆ ಅವರ ಮನೆಗೆ ಲಕ್ಷ್ಮೀ ಬರುತ್ತಾಳೆ ಎಂದರ್ಥ.