ಆಷಾಢ ಮಾಸದಲ್ಲಿ ಈ ಕೆಲಸಗಳನ್ನು ಮಾಡಬೇಡಿ

Krishnaveni K
ಸೋಮವಾರ, 15 ಜುಲೈ 2024 (08:41 IST)
ಬೆಂಗಳೂರು: ಆಷಾಢ ಮಾಸ ಈಗಾಗಲೇ ಶುರುವಾಗಿದ್ದು ಆಗಸ್ಟ್ ಮೊದಲ ವಾರದವರೆಗೆ ಮುಂದುವರಿಯಲಿದೆ. ಆಷಾಢ ಮಾಸದಲ್ಲಿ ಶಾಸ್ತ್ರಗಳ ಪ್ರಕಾರ ಕೆಲವೊಂದು ಕೆಲಸಗಳಿಗೆ ನಿಷಿದ್ಧವಾಗಿದೆ. ಅವುಗಳು ಯಾವುವು ನೋಡೋಣ.

ಆಷಾಢ ಮಾಸದಲ್ಲಿ ಗಂಡು-ಹೆಣ್ಣು ಸಮಾಗಮವಾಗಬಾರದು ಎನ್ನುತ್ತಾರೆ. ಹೀಗಾಗಿಯೇ ಕೆಲವರು ಹೊಸದಾಗಿ ಮದುವೆಯಾದ ದಂಪತಿಯನ್ನು ಈ ಸಂದರ್ಭದಲ್ಲಿ ಪ್ರತ್ಯೇಕವಾಗಿರಿಸುತ್ತಾರೆ.
ಆಷಾಢ ಮಾಸದಲ್ಲಿ ತಾಮಸ ಆಹಾರಗಳಾದ ಈರುಳ್ಳಿ, ಬದನೆಕಾಯಿ, ಬೆಳ್ಳುಳ್ಳಿ, ಹೂಕೋಸು, ಉದ್ದಿನಬೇಳೆ ಮುಂತಾದ ಅಹಾರ ವಸ್ತುಗಳನ್ನು ಸೇವಿಸಬಾರದು.  ಅಲ್ಲದೆ, ಮೀನು, ಮಾಂಸ, ಮದ್ಯಪಾನದಂತಹ ಅಭ್ಯಾಸಗಳಿಂದಲೂ ದೂರವಿರಬೇಕು.

ಆಷಾಢ ಮಾಸದಲ್ಲಿ ಸೊಪ್ಪು ತರಕಾರಿಗಳು, ಎಣ್ಣೆ ಪದಾರ್ಥಗಳನ್ನು ಕಡಿಮೆ ಸೇವಿಸಬೇಕು.
ಆಷಾಢ ಮಾಸದಲ್ಲಿ ಮದುವೆ, ಮುಂಜಿಯಂತಹ ಶುಭ ಕಾರ್ಯಗಳನ್ನು ನಡೆಸಲು ಯೋಗ್ಯ ಸಮಯವಲ್ಲ
ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳುವುದು, ಇನ್ನೊಬ್ಬರನ್ನು ನಿಂದಿಸುವುದು, ಜಗಳಕ್ಕಿಳಿಯುವುದು ಖಂಡಿತಾ ಮಾಡಬೇಡಿ.
ಅದೇ ರೀತಿ ಮನೆಗೆ ಬಂದ ಅತಿಥಿಗಳನ್ನು ಬರಿಗೈಯಲ್ಲಿ ಕಳುಹಿಸದಿರಿ.

ಆಷಾಢ ಮಾಸದಲ್ಲಿ ಏನು ಮಾಡಬೇಕು?
ಆಷಾಢ ಮಾಸದಲ್ಲಿ ಮಹಾವಿಷ್ಣು, ದುರ್ಗಾದೇವಿಯ ಆರಾಧನೆ, ಪಿತೃಗಳ ಪೂಜೆಯಲ್ಲಿ ತೊಡಗಿಸಿಕೊಳ್ಳಬೇಕು. ಇದರಿಂದ ನಿಮಗೆ ಪುಣ್ಯ ಪ್ರಾಪ್ತಿಯಾಗುತ್ತದೆ.
ಆಷಾಢ ಮಾಸ ತೀರ್ಥಯಾತ್ರೆಗೆ ಹೇಳಿ ಮಾಡಿಸಿದ ಸಮಯ. ಅದೇ ರೀತಿ ನಿಮ್ಮ ಬಳಿ ಬೇಡಿಕೊಂಡು ಬಂದವರಿಗೆ ದಾನ ಮಾಡಿದರೆ ಅತ್ಯಂತ ಫಲಪ್ರದವಾಗಿರುತ್ತದೆ.
ಆಷಾಢ ಮಾಸದಲ್ಲಿ ಪ್ರತಿನಿತ್ಯ ಬ್ರಾಹ್ಮಿ ಮುಹೂರ್ತದಲ್ಲಿ ತುಳಸಿ ಪೂಜೆ ಮಾಡಿದರೆ ಶ್ರೇಷ್ಠ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಗುರುವಾರ ಮಹಾವಿಷ್ಣುವಿನ ಅನುಗ್ರಹಕ್ಕೆ ಈ ಸ್ತೋತ್ರವನ್ನು ತಪ್ಪದೇ ಓದಿ

ಗಣಪತಿಯ ಅನುಗ್ರಹಕ್ಕಾಗಿ ಇಂದು ಈ ಸ್ತೋತ್ರವನ್ನು ಪಠಿಸಿ

ಇಂದು ಚಂದ್ರಗ್ರಹಣ: ಕರ್ನಾಟಕದಲ್ಲಿ ಎಷ್ಟು ಹೊತ್ತು ಗೋಚರ, ಈ ರಾಶಿಗೆ ಲಾಭದಾಯಕ

ಇಂದು ದುರ್ಗಾದೇವಿಯ ಈ ಮಂತ್ರವನ್ನು ತಪ್ಪದೇ ಪಠಿಸಿ

ರುದ್ರಾಷ್ಟಕಂ ಸ್ತೋತ್ರ ಕನ್ನಡದಲ್ಲಿ, ಇಂದು ತಪ್ಪದೇ ಓದಿ

ಮುಂದಿನ ಸುದ್ದಿ
Show comments