Webdunia - Bharat's app for daily news and videos

Install App

ಗುರುವಾರ ರಾಯರ ಆರಾಧನೆ ಮಾಡುವಾಗ ಈ ತಪ್ಪುಗಳು ಆಗದಿರುವಂತೆ ನೋಡಿಕೊಳ್ಳಿ

Krishnaveni K
ಗುರುವಾರ, 22 ಆಗಸ್ಟ್ 2024 (08:41 IST)
ಬೆಂಗಳೂರು: ಮಂತ್ರಾಲಯದಲ್ಲಿ ಈಗ ರಾಯರ ಆರಾಧನೆ ಆರಂಭವಾಗಿದೆ. ಕೆಲವರಿಗೆ ಮಂತ್ರಾಲಯಕ್ಕೆ ಹೋಗಲು ಅನುಕೂಲವಿರುವುದಿಲ್ಲ. ಹೀಗಾಗಿ ಮನೆಯಲ್ಲಿಯೇ ರಾಯರ ಪೂಜೆ ಮಾಡಬಹುದು. ಆದರೆ ಮಾಡುವಾಗ ಕೆಲವೊಂದು ತಪ್ಪುಗಳಾಗದಂತೆ ಎಚ್ಚರಿಕೆ ವಹಿಸಿ.

ಪೂಜಾ ವಿಧಿ ವಿಧಾನಗಳನ್ನು ಮಾಡುವಾಗ ಯಾವುದೇ ತಪ್ಪುಗಳಾಗಬಾರದು. ಗೊತ್ತಿದ್ದೂ ತಪ್ಪು ಮಾಡಿದರೆ ಅದರಿಂದ ಪೂಜೆಯ ಫಲ ಸಿಗದು. ಅರಿವಲ್ಲದೇ ಮಾಡುವ ತಪ್ಪುಗಳಿಗೆ ಕೊನೆಯಲ್ಲಿ ದೇವರ ಬಳಿ ಕ್ಷಮೆ ಯಾಚಿಸುತ್ತೇವೆ. ರಾಯರ ಪೂಜೆ ಮಾಡುವಾಗಲೂ ಹಾಗೇ ಕೆಲವೊಂದು ತಪ್ಪುಗಳಾಗದಂತೆ ಎಚ್ಚರಿಕೆ ವಹಿಸಬೇಕು.

ರಾಯರ ಪೂಜೆಯನ್ನು ಯಾವ ದಿನ ಬೇಕಾದರೂ ಮಾಡಬಹುದು. ಆದರೆ ಗುರುವಾರ ರಾಯರಿಗೆ ಅತ್ಯಂತ ವಿಶೇಷ ದಿನವಾಗಿದೆ. ಹೀಗಾಗಿ ಗುರುವಾರ ಬೆಳಿಗ್ಗೆಯೇ ಪೂಜೆ ಮಾಡಬೇಕು. ರಾಯರ ಪೂಜೆ ಮಾಡುವಾಗ ಅಶುದ್ಧ, ಅಸಂಪ್ರದಾಯಿಕ ಬಟ್ಟೆಗಳನ್ನು ಧರಿಸಬೇಡಿ. ಹಿಂದಿನ ದಿನವೇ ಶುದ್ಧೀಕರಿಸಿಟ್ಟ ಪಂಚೆ, ವಸ್ತ್ರ, ಸ್ತ್ರೀಯರಾದರೆ ಸೀರೆ ಉಟ್ಟು ಪೂಜೆ ಮಾಡಬೇಕು.

ಮನಸ್ಸು ಚಾಂಚಲ್ಯವಿರುವಾಗ, ಮಾಂಸಾಹಾರ ಸೇವಿಸಿಕೊಂಡು ಪೂಜೆ ಮಾಡಿ. ರಾಯರ ಪೂಜೆ ಮಾಡುವಾಗ ಮನಸ್ಸು ಶಾಂತವಾಗಿರಬೇಕು ಮತ್ತು ಸಾತ್ವಿಕ ಆಹಾರ ಅಥವಾ ಉಪವಾಸ ವ್ರತವಿದ್ದು ಪೂಜೆ ಮಾಡಬೇಕು. ಅಪ್ಪಿತಪ್ಪಿಯೂ ಮದ್ಯ ಸೇವನೆ ಮಾಡಿ ಪೂಜೆ ಮಾಡಬಾರದು. ಭಕ್ತಿಯಿಂದ ಗುರುವಾರದಂದು ಪೂಜೆ ಮಾಡಿದರೆ ಆ ಮಹಾವಿಷ್ಣುವೇ ಸಂಪ್ರೀತನಾಗುತ್ತಾನೆ ಎಂಬ ನಂಬಿಕೆಯಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Subramanya Mantra: ಸುಬ್ರಹ್ಮಣ್ಯ ಸ್ವಾಮಿಯ ಈ ಸ್ತೋತ್ರವನ್ನು ತಪ್ಪದೇ ಓದಿ

ಪಾಂಡುರಂಗಾಷ್ಟಕಂ ಕನ್ನಡದಲ್ಲಿ ಇಲ್ಲಿದೆ

Sai Baba astakam: ಸಾಯಿಬಾಬ ಪ್ರಾರ್ಥನಾಷ್ಟಕಂ ಕನ್ನಡದಲ್ಲಿ ಇಲ್ಲಿದೆ ನೋಡಿ

Durga Mantra: ಮಂಗಳವಾರ ಈ ಸ್ತೋತ್ರ ಓದಿದರೆ ದುರ್ಗಾ ದೇವಿಯ ಅನುಗ್ರಹ ಸಿಗುತ್ತದೆ

Shiva Astakam: ಶಿವನ ಅನುಗ್ರಹಕ್ಕೆ ಪಾತ್ರರಾಗಲು ಶಿವಾಷ್ಟಕಂ ಓದಿ

ಮುಂದಿನ ಸುದ್ದಿ
Show comments