Publish Date: Mon, 03 Feb 2020 (04:41 IST)
Updated Date: Mon, 03 Feb 2020 (04:44 IST)
ಬೆಂಗಳೂರು : ಕೆಲವು ಜನರು ಇನ್ನೊಬ್ಬರು ಯಶಸ್ಸು ಸಾಧಿಸುವುದನ್ನು ನೋಡಿ ಅವರ ಮೇಲಿನ ಹೊಟ್ಟೆಕಚ್ಚಿನಿಂದ ಅವರು ನಾಶವಾಗಲೆಂದು ಮಾಟಮಂತ್ರಗಳ ಪ್ರಯೋಗ ಮಾಡುತ್ತಾರೆ. ಇಂತಹ ಮಾಟಮಂತ್ರಗಳ ಸಮಸ್ಯೆ ಎದುರಿಸುತ್ತಿರುವವರು ಈ ಸಮಸ್ಯೆಯಿಂದ ಮುಕ್ತಿಹೊಂದಲು ಈ ಪರಿಹಾರ ಮಾಡಿ.
ಲಕ್ಷ್ನೀ ನರಸಿಂಹ ದೇವಸ್ಥಾನಕ್ಕೆ ಹೋಗಿ ಬೆಲ್ಲವನ್ನು ನೈವೇದ್ಯವಾಗಿ ನೀಡಿ. ಬಳಿಕ ಅದನ್ನು ದೇವಸ್ಥಾನದಲ್ಲಿದ್ದ ದಂಪತಿಗಳಿಗೆ ನೀಡಿ ಅವರಿಂದ ಆಶೀರ್ವಾದ ಪಡೆದುಕೊಂಡರೆ ನಿಮ್ಮ ಮೇಲೆ ಲಕ್ಷ್ಮೀ ನರಸಿಂಹನ ಅನುಗ್ರಹ ದೊರೆತು ಯಾವುದೇ ಮಾಟಮಂತ್ರ ನಿಮಗೆ ತಗಲದಂತೆ ಕಾಪಾಡುತ್ತಾನೆ ಎಂದು ಪಂಡಿತರು ಹೇಳುತ್ತಾರೆ.