Webdunia - Bharat's app for daily news and videos

Install App

ಮಕ್ಕಳು ನಿಶ್ಯಕ್ತರಾಗಿದ್ದರೆ ಮಂಗಳವಾರ ಆಂಜನೇಯಸ್ವಾಮಿಗೆ ಈ ಸೇವೆ ಮಾಡಿ

Krishnaveni K
ಮಂಗಳವಾರ, 27 ಆಗಸ್ಟ್ 2024 (08:29 IST)
ಬೆಂಗಳೂರು: ಕೆಲವೊಮ್ಮೆ ಮಕ್ಕಳು ಎಷ್ಟೇ ಆಹಾರ ತಿಂದರೂ ನಿಶ್ಯಕ್ತರಾಗಿರುವಂತೆ ತೋರುತ್ತದೆ. ಇಂತಹ ಮಕ್ಕಳಿಗಾಗಿ ಮಂಗಳವಾರವಾದ ಇಂದು ಆಂಜನೇಯಸ್ವಾಮಿಗೆ ಈ ಒಂದು ಸೇವೆ ಮಾಡಿದರೆ ಪರಿಹಾರ ಸಿಗುತ್ತದೆ. ಅದರ ಬಗ್ಗೆ ಇಲ್ಲಿ ನೋಡೋಣ.

ಮಂಗಳವಾರ ಆಂಜನೇಯಸ್ವಾಮಿಗೆ ವಿಶೇಷ ದಿನವಾಗಿರುತ್ತದೆ. ಈ ದಿನ ಆಂಜನೇಯನನ್ನು ಪೂಜೆ ಮಾಡುವುದರಿಂದ ಶನಿಯ ಕಾಟದಿಂದಲೂ ಮುಕ್ತಿ ಸಿಗುತ್ತದೆ. ಅಲ್ಲದೆ, ವಿದ್ಯೆ, ಬುದ್ಧಿ, ಆರೋಗ್ಯ ಸೇರಿದಂತೆ ಜೀವನದ ಹಲವು ಸಮಸ್ಯೆಗಳಿಗೆ ಇಂದು ಆಂಜನೇಯ ಸ್ವಾಮಿಯನ್ನು ಪೂಜೆ ಮಾಡುವುದರಿಂದ ಪರಿಹಾರ ಸಿಗುತ್ತದೆ.

ಮಂಗಳವಾರದಂದು ಆಂಜನೇಯ ಸ್ವಾಮಿಗೆ ವೀಳ್ಯದ ಎಲೆಯ ಹಾರ ಮಾಡಿ ಅರ್ಪಿಸುವುದರಿಂದ ಮಕ್ಕಳು ನಿಶ್ಯಕ್ತರೆನಿಸಿದ್ದರೆ ಅವರ ಆರೋಗ್ಯ ಸುಧಾರಿಸಿ ಚುರುಕಾಗುತ್ತಾರೆ. ಮಕ್ಕಳು ಮೈ-ಕೈ ತುಂಬಿಕೊಂಡು ದೈಹಿಕವಾಗಿ ಸದೃಢರಾಗಲು ಇಂದು ವೀಳ್ಯದೆಲೆಯ ಹಾರ ಅರ್ಪಿಸಿ.

ಇದಲ್ಲದೆ ಮನೆಯಲ್ಲಿ ನೆಮ್ಮದಿ ಇಲ್ಲದೇ ಇದ್ದರೆ, ಶತ್ರು ಕಾಟವಿದ್ದರೆ, ಯಾರೋ ಮಂತ್ರ-ಮಾಟ ಮಾಡಿಸಿದ್ದರೆ, ವ್ಯಾಪಾರ, ವ್ಯವಹಾರದಲ್ಲಿ ನಷ್ಟವಾಗಿದ್ದರೆ, ದೈಹಿಕ ಮತ್ತು ಮಾನಸಿಕ ಖಾಯಿಲೆಗಳಿಂದ ಬಳಲುತ್ತಿದ್ದರೆ ಇಂದು ಆಂಜನೇಯ ಸ್ವಾಮಿಗೆ ಸುಂದರ ಕಾಂಡ ಪಾರಾಯಣ ಮಾಡಿ ವೀಳ್ಯದೆಲೆಯ ಹಾರ ಅರ್ಪಿಸುವುದು ಶ್ರೇಷ್ಠವಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಹನುಮಾನ್ ಚಾಲೀಸಾ ಓದುವುದರ ಲಾಭಗಳು

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಶುಕ್ರವಾರ ಈ ಒಂದು ವಸ್ತು ತಂದಿಟ್ಟರೆ ಲಕ್ಷ್ಮಿ ನಿಮ್ಮ ಮನೆಗೆ ಬರುತ್ತಾಳೆ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಗುರು ಗ್ರಹ ದೋಷ ನಿವಾರಣೆಗೆ ಏನು ಮಾಡಬೇಕು

ಮುಂದಿನ ಸುದ್ದಿ
Show comments