Webdunia - Bharat's app for daily news and videos

Install App

ಬೆಳಿಗ್ಗೆ ಎದ್ದ ತಕ್ಷಣ ಇವುಗಳನ್ನು ನೋಡಿದರೆ ದಿನವಿಡೀ ದುರಾದೃಷ್ಟ ಹಿಂಬಾಲಿಸುತ್ತದೆ

Krishnaveni K
ಮಂಗಳವಾರ, 22 ಅಕ್ಟೋಬರ್ 2024 (08:35 IST)
Photo Credit: AI Image
ಬೆಂಗಳೂರು: ಬೆಳಿಗ್ಗೆ ಎದ್ದ ತಕ್ಷಣವೇ ಒಳ್ಳೆಯನ್ನೇ ನೋಡಿದರೆ ದಿನವಿಡೀ ಶುಭವಾಗಿರುತ್ತದೆ ಎಂಬ ನಂಬಿಕೆಯಿದೆ. ಅದೇ ರೀತಿ ಬೆಳಿಗ್ಗೆ ಕೆಲವೊಂದು ವಸ್ತುಗಳನ್ನು ನೋಡಿದರೆ ದಿನವಿಡೀ ಖರಾಬು ಆಗಿರುತ್ತದೆ. ಅಂತಹ ವಿಚಾರಗಳು ಯಾವುವು ನೋಡೋಣ.

ಬೆಳಿಗ್ಗೆ ಎದ್ದ ತಕ್ಷಣ ನಾವು ಏನು ನೋಡುತ್ತೇವೆಯೋ ಅದರ ಮೇಲೆ ನಮ್ಮ ದಿನ ಹೇಗಿರುತ್ತದೆ ಎಂದು ನಿರ್ಧಾರವಾಗುತ್ತದೆ. ದಿನವಿಡೀ ಒಳ್ಳೆಯದಾಗಿರಬೇಕೆಂದರೆ ಬೆಳಿಗ್ಗೆ ಎದ್ದ ತಕ್ಷಣ ಅಂಗೈ ನೋಡಿ ದೇವರ ಧ್ಯಾನ ಮಾಡಬೇಕು ಎಂದು ಹಿರಿಯರು ಹೇಳುತ್ತಾರೆ. ಭೂಮಿ ಸ್ಪರ್ಶಿಸುವ ಮೊದಲು ಭೂಮಿ ದೇವಿಗೆ ನಮಿಸಿ ಏಳಬೇಕು.

ಅದರ ಬದಲು ಬೆಳಿಗ್ಗೆ ಎದ್ದ ತಕ್ಷಣ ಒಡೆದ ಕನ್ನಡಿಯನ್ನು ನೋಡಿದರೆ ನಿಮ್ಮನ್ನು ದುರಾದೃಷ್ಟ ಹಿಂಬಾಲಿಸಿ ಬರುತ್ತದೆ. ಒಡೆದ ಕನ್ನಡಿ ಅಶುಭದ ಸಂಕೇತವಾಗಿದ್ದು ಇದರಿಂದ ಮನೆಯಲ್ಲಿ ಕಲಹ, ಅಶಾಂತಿ ಮೂಡಬಹುದು. ಹೀಗಾಗಿ ಒಡೆದ ಕನ್ನಡಿಯನ್ನು ಮನೆಯಲ್ಲಿಟ್ಟುಕೊಳ್ಳಬಾರದು.

ಅದೇ ರೀತಿ ಬೆಳಿಗ್ಗೆ ಎದ್ದ ತಕ್ಷಣ ಮನುಷ್ಯನ ನೆರಳನ್ನು ನಾವು ನೋಡಬಾರದು. ಇದರಿಂದ ಸಾವು, ನೋವಿನ ಅಶುಭ ವಾರ್ತೆ ಕೇಳಬೇಕಾದೀತು.  ಹಾಗೆಯೇ ನಿಂತು ಹೋದ ಗಡಿಯಾರವನ್ನು ನೋಡುವುದರಿಂದ ಆ ದಿನ ಅಶುಭದ ವಾರ್ತೆ ಕೇಳಬೇಕಾದೀತು. ದೇವರ ಒಡೆದ ವಿಗ್ರಹ, ತೊಳೆಯದ ಪಾತ್ರೆಗಳನ್ನು ನೋಡುವುದೂ ಶುಭಕರವಲ್ಲ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Subramanya Mantra: ಸುಬ್ರಹ್ಮಣ್ಯ ಸ್ವಾಮಿಯ ಈ ಸ್ತೋತ್ರವನ್ನು ತಪ್ಪದೇ ಓದಿ

ಪಾಂಡುರಂಗಾಷ್ಟಕಂ ಕನ್ನಡದಲ್ಲಿ ಇಲ್ಲಿದೆ

Sai Baba astakam: ಸಾಯಿಬಾಬ ಪ್ರಾರ್ಥನಾಷ್ಟಕಂ ಕನ್ನಡದಲ್ಲಿ ಇಲ್ಲಿದೆ ನೋಡಿ

Durga Mantra: ಮಂಗಳವಾರ ಈ ಸ್ತೋತ್ರ ಓದಿದರೆ ದುರ್ಗಾ ದೇವಿಯ ಅನುಗ್ರಹ ಸಿಗುತ್ತದೆ

Shiva Astakam: ಶಿವನ ಅನುಗ್ರಹಕ್ಕೆ ಪಾತ್ರರಾಗಲು ಶಿವಾಷ್ಟಕಂ ಓದಿ

ಮುಂದಿನ ಸುದ್ದಿ
Show comments