Publish Date: Sun, 23 Sep 2018 (09:35 IST)
Updated Date: Sun, 23 Sep 2018 (09:37 IST)
ಬೆಂಗಳೂರು: ಎಷ್ಟು ದೇವಾಲಯ ಸುತ್ತಿದರೂ ಏನು ಪ್ರಯೋಜನ. ಅವರೊಳಗಿನ ಕೆಟ್ಟ ಮನಸ್ಸು ಹಾಗೇ ಉಳಿದುಕೊಂಡಿದೆಯಲ್ಲಾ? ಎಂದು ಬಿಜೆಪಿ ನಾಯಕ ಅರವಿಂದ ಲಿಂಬಾವಳಿ ಸಿಎಂ ಕುಮಾರಸ್ವಾಮಿ ಬಗ್ಗೆ ವ್ಯಂಗ್ಯವಾಡಿದ್ದಾರೆ.
ಬಿಜೆಪಿ ವಿರುದ್ಧ ಜನರು ದಂಗೆ ಏಳುವಂತೆ ಮಾಡುತ್ತೇನೆ ಎಂದು ಕುಮಾರಸ್ವಾಮಿ ನೀಡಿದ ಹೇಳಿಕೆಯನ್ನು ಆಧರಿಸಿ ಅರವಿಂದ ಲಿಂಬಾವಳಿ ಈ ಮಾತುಗಳನ್ನಾಡಿದ್ದಾರೆ.
100 ದಿನದಲ್ಲಿ 50 ಕ್ಕೂ ಹೆಚ್ಚು ದೇವಾಲಯ ಸುತ್ತಿದರೂ ಅವರೊಳಗಿನ ಕೆಟ್ಟ ಮನಸ್ಸು ತಮ್ಮ ಗೂಂಡಾಗಳಿಗೆ ದಂಗೆ ಏಳುವಂತೆ ಆದೇಶಿಸುವುದನ್ನು ಬಿಟ್ಟಿಲ್ಲ. ಅಂದರೆ ಅವರು ಎಷ್ಟೇ ದೇವಾಲಯ ಸುತ್ತಿದರೂ ಅವರೊಳಗೆ ಕೆಟ್ಟ ಬುದ್ಧಿ ಹಾಗೇ ಉಳಿದುಕೊಂಡಿದೆ ಎಂದರ್ಥ ಎಂದು ಲಿಂಬಾವಳಿ ಟಾಂಗ್ ಕೊಟ್ಟಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.