Select Your Language

Notifications

webdunia
webdunia
webdunia
webdunia

ಕನ್ಯಾಕುಮಾರಿಗೆ ಧ್ಯಾನಕ್ಕೆ ತೆರಳುವ ಮೋದಿಯನ್ನು ಲೇವಾಡಿ ಮಾಡಿದ ಸಿಬಲ್

kapil sibal

sampriya

ಚಂಡೀಗಢ , ಬುಧವಾರ, 29 ಮೇ 2024 (18:34 IST)
Photo By X
ಚಂಡೀಗಢ: ಎರಡು ದಿನಗಳ ಕಾಲ ಧ್ಯಾನ ಮಾಡಲು ಕನ್ಯಾಕುಮಾರಿಯಲ್ಲಿರುವ ವಿವೇಕಾನಂದರ ಸ್ಮಾರಕಕ್ಕೆ ತೆರಳಲಿರುವ ಪ್ರಧಾನಿ ಮೋದಿ ಅವರನ್ನು ರಾಜ್ಯಸಭಾ ಸದಸ್ಯ ಕಪಿಲ್‌ ಸಿಬಲ್‌ ವ್ಯಂಗ್ಯಮಾಡಿದ್ದಾರೆ.

ವಿವೇಕಾನಂದರ ಬಗ್ಗೆ ಏನೂ ತಿಳಿಯದ ಮೋದಿ ಅವರು ಏನು ಧ್ಯಾನ ಮಾಡುತ್ತಾರೆ. ‘ಮೋದಿ ಅವರು ‘ಪ್ರಾಯಶ್ಚಿತ್ತ’ಕ್ಕಾಗಿ ಕನ್ಯಾಕುಮಾರಿಗೆ ಹೋಗುವುದು ಒಳ್ಳೆಯದು ಎಂದು ಲೇವಡಿ ಮಾಡಿದರು.

ವಿವೇಕಾನಂದರ ಸ್ಮಾರಕಕ್ಕೆ ಮೋದಿ ಅವರು ಧ್ಯಾನದ ಬದಲಿಗೆ ‘ಪ್ರಾಯಶ್ಚಿತ್ತ’ಕ್ಕಾಗಿ ಹೋದರೆ ತುಂಬಾನೇ ಒಳ್ಳೆಯದು. ಅದಲ್ಲದೆ ಅಲ್ಲಿ ಸ್ವಾಮಿ ವಿವೇಕಾನಂದರ ಬರಹಗಳು ಮತ್ತು ಭಾಷಣಗಳಿಂದ ಸ್ಫೂರ್ತಿ ಪಡೆಯಲು ಹೊರಟರೆ ಒಳ್ಳೆಯದು ಎಂದು ಸಿಬಲ್ ಲೇವಡಿ ಮಾಡಿದ್ದಾರೆ.

ಲೋಕಸಭೆ ಚುನಾವಣೆಗೆ ಬಹಿರಂಗ ಪ್ರಚಾರ ಮುಗಿದ ನಂತರ ಮೇ 30ರ ಸಂಜೆಯಿಂದ ಜೂನ್‌ 1ರ ಸಂಜೆಯವರೆಗೆ ವಿವೇಕಾನಂದ ಸ್ಮಾರಕದ ‘ಧ್ಯಾನ ಮಂಟಪ’ದಲ್ಲಿ ಧ್ಯಾನ ಮಾಡಲಿದ್ದಾರೆ ಎಂದು ಬಿಜೆಪಿ ನಾಯಕರು ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಧ್ಯಾನಕ್ಕಾಗಿ ಕನ್ಯಾಕುಮಾರಿಗೆ ನಾಳೆ ಪ್ರಧಾನಿ ಮೋದಿ ಭೇಟಿ: 2000ಕ್ಕೂ ಅಧಿಕ ಪೊಲೀಸರಿಂದ ಬಿಗಿ ಭದ್ರತೆ