Select Your Language

Notifications

webdunia
webdunia
webdunia
webdunia

ಡ್ರಗ್ಸ್‌ ಕೊಡ್ತೀವಿ ಅಂತ ಕರೆಸಿ ಕಿಡ್ನಾಪ್‌ ಮಾಡಿದ ಖದೀಮರು

crime news

geetha

bangalore , ಭಾನುವಾರ, 25 ಫೆಬ್ರವರಿ 2024 (18:02 IST)
ಬೆಂಗಳೂರು: ಮೊನೀಶ್‌ ಎಂಬ ಟ್ಯಾಟೂ ಕಲಾವಿದ ಡ್ರಗ್ಸ್‌ ದಂಧೆಯನ್ನೂ ನಡೆಸುತ್ತಿದ್ದ. ಈತನ ಬಳಿ ತನ್ನ ಅಣ್ಣನನ್ನು ನೋಡಲು ಬಂದಿದ್ದ ವಿದೇಶಿ ಪ್ರಜೆಯೊಬ್ಬ ಡ್ರಗ್ಸ್‌ ಕೊಳ್ಳಲು ಬರುತ್ತಿದ್ದ. ಈತನ ಬಳಿ ಸಾಕಷ್ಟು ಹಣವಿರಬೇಕೆಂದು ಭಾವಿಸಿದ ಮೊನೀಶ್‌ ತನ್ನ ಸ್ನೇಹಿತರೊಡಗಗೂಡಿ ಆತನನ್ನು ಅಪಹರಿಸಲು ಸ್ಕೆಚ್‌ ಹಾಕಿದ್ದರು. ಮೊನೀಶ್‌ ತನ್ನ ಸ್ನೇಹಿತರಾದ ಲೋಕೇಶ್‌, ಕಿಶೋರ್‌, ರವಿ, ದಿಲೀಪ್‌, ಸತೀಶ್‌ ರ ಜೊತೆಗೂಡಿ ವಿದೇಶಿ ಪ್ರಜೆಯನ್ನು ಅಪಹರಿಸಿ ಮನಬಂದಂತೆ ಹಲ್ಲೆ ನಡೆಸಿದ್ದ. ಬಳಿಕ ಅವರಿಂದ 1 ಲಕ್ಷ ರೂ. ಹಣವನ್ನೂ ಕಿತ್ತಿದ್ದ. 
 
ಅಲ್ಲಿಂದ ತಪ್ಪಿಸಿಕೊಂಡಿದ್ದ ವಿದೇಶಿ ಪ್ರಜೆ ತನ್ನ ಮೇಲೆಯೂ ಡ್ರಗ್ಸ್‌ ಸೇವನೆ ಕೇಸ್‌ ಪ್ರಕರಣ ದಾಖಲಾಗಬಹುದೆಂಬ ಭಯದಿಂದ ದೂರು ನೀಡಿರಲಿಲ್ಲ. 15 ದಿನಗಳ ಬಳಿಕ ತನ್ನ ಪರಿಚಿತ ಪೊಲೀಸ್‌ ಸಿಬ್ಬಂದಿಗೆ ಈ ವಿಷಯ ತಿಳಿಸಿದಾಗ ಪ್ರಕರಣ ಹೊರಬಿದ್ದಿದೆ. ವಿದೇಶಿ ಪ್ರಜೆಯನ್ನು ಡ್ರಗ್ಸ್‌ ನೀಡುವುದಾಗಿ ಕರೆಸಿ ಅಪಹರಣ ನಡೆಸಿದ್ದ ತಂಡವನ್ನು ಬಂಧಿಸಿರುವ ಘಟನೆ ಬೊಮ್ಮನಹಳ್ಳಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪುರಾತನ ದ್ವಾರಕಾನಗರಿಯಲ್ಲಿದ್ದಂತೆ ಭಾಸವಾಗುತ್ತಿದೆ