Select Your Language

Notifications

webdunia
webdunia
webdunia
webdunia

ಆದಿಚುಂಚನಗಿರಿ ಮಠದ ಪರಮ ಭಕ್ತ:ನನ್ನ ಶ್ರೀಗಳ ನಡುವೆ ತಂದೆ,ಮಗನ ಸಂಬಂಧ-ಸಚಿವ ವಿ.ಸೋಮಣ್ಣ

ಆದಿಚುಂಚನಗಿರಿ ಮಠದ ಪರಮ ಭಕ್ತ:ನನ್ನ ಶ್ರೀಗಳ ನಡುವೆ ತಂದೆ,ಮಗನ ಸಂಬಂಧ-ಸಚಿವ ವಿ.ಸೋಮಣ್ಣ
bangalore , ಬುಧವಾರ, 18 ಜನವರಿ 2023 (18:31 IST)
ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ:ಬಿ.ಜಿ.ಎಸ್.ಆಟದ ಮೈದಾನದಲ್ಲಿ ಪದ್ಮಭೂಷಣ ಶ್ರೀ ಶ್ರೀ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ 78ನೇ ಜಯಂತ್ಯುತ್ಸವ ಕಾರ್ಯಕ್ರಮ ಮತ್ತು ಸನ್ಮಾನ ಸಮಾರಂಭ.
 
ಎಡೆಯೂರು ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನ ಮಠದ ಜಗದ್ಗುರು ಡಾ. ಶ್ರೀ ತೋಂಟದ ಸಿದ್ಧರಾಮ ಮಹಾಸ್ವಾಮಿಗಳು, ಆದಿ ಚುಂಚನಗಿರಿ ಶಾಖಮಠದ ಶ್ರೀ ಸೌಮ್ಯನಾಥ ಸ್ವಾಮೀಜಿ,ವಸತಿ ಸಚಿವರಾದ ವಿ. ಸೋಮಣ್ಣರವರು,ಪದ್ಮಶ್ರೀ ಡಾ. ದೊಡ್ಡರಂಗೇಗೌಡರು,ವಿಧಾನಪರಿಷತ್ ಸದಸ್ಯರಾದ ಅ.ದೇವೇಗೌಡ, ಶ್ರೀ ವಿ. ಸೋಮಣ್ಣ ಪ್ರತಿಷ್ಠಾನ ಅಧ್ಯಕ್ಷರಾದ ಶ್ರೀಮತಿ ಶೈಲಜಾ ಸೋಮಣ್ಣರವರು,ಕನ್ನಡ ಪರ ಹೋರಾಟಗಾರ ಪಾಲನೇತ್ರರವರು ಶ್ರೀ ಶ್ರೀ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿರವರ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿ, ದೀಪಾ ಬೆಳಗಿಸಿ ಜಯಂತ್ಯುತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
 
ಸಚಿವರಾದ ವಿ.ಸೋಮಣ್ಣರವರು ಮಾತನಾಡಿ ಇಂದ ಶ್ರೀ ಶ್ರೀ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿರವರು 78ನೇ ಜಯಂತ್ಯುತ್ಸವ ಶುಭಾ ದಿನ. ಪರಮಪೂಜ್ಯ ಆದಿಚುಂಚನಗಿರಿ ಮಠದ ಪರಮಭಕ್ತ ನಾನು ಬಾಲಗಂಗಾಧರನಾಥ ಸ್ವಾಮಿಜೀರವರು ನನ್ನ ನಡುವೆ ತಂದೆ,ಮಗನ ಸಂಬಂಧದಂತೆ ಇತ್ತು.ಶ್ರೀಗಳ ಕೃಪಾ ಆಶೀರ್ವಾದದಿಂದ ರಾಜಕೀಯ ರಂಗದಲ್ಲಿ ನನಗೆ ಶಕ್ತಿ ಬಂದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಗಾಳಿಪಟದೊಂದಿಗೆ ಮೇಲಕ್ಕೆ ಹಾರಿದ ಮಗು!