Webdunia - Bharat's app for daily news and videos

Install App

ಕ್ರಿಶ್ಚಿಯನ್ ಪಾದ್ರಿಗಳ ಕೈವಾಡದಿಂದ ತಿರುಪತಿ ಲಡ್ಡಿನಲ್ಲಿ ಕಲಬೆರಕೆ: ಈಶ್ವರಪ್ಪ ಆರೋಪ

Krishnaveni K
ಶನಿವಾರ, 21 ಸೆಪ್ಟಂಬರ್ 2024 (14:08 IST)
ಹೈದರಾಬಾದ್: ವಿದೇಶೀ ಕ್ರಿಶ್ಚಿಯನ್ನರ ಕೈವಾಡದಿಂದ ತಿರುಪತಿ ತಿಮ್ಮಪ್ಪನ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಬಳಕೆ ಮಾಡಿ ಕಲಬೆರಕೆ ಮಾಡಲಾಗಿದೆ ಎಂದು ಮಾಜಿ ಸಚಿವ ಕೆಎಸ್ ಈಶ್ವರಪ್ಪ ಗಂಭೀರ ಆರೋಪ ಮಾಡಿದ್ದಾರೆ.

ತಿರುಪತಿ ತಿಮ್ಮಪ್ಪ ಬರೀ ನಮ್ಮ ದೇಶ ಮಾತ್ರವಲ್ಲ, ಅಂತಾರಾಷ್ಟ್ರೀಯ ಮನ್ನಣೆ ಪಡೆದ ದೇವರು. ದೇವರ ಮೇಲೆ ನಂಬಿಕೆಯಿರುವ ಪ್ರತಿಯೊಬ್ಬರಿಗೂ ತಿರುಪತಿ ತಿಮ್ಮಪ್ಪನ ದರ್ಶನ ಮಾಡಬೇಕು, ಲಡ್ಡು ಪ್ರಸಾದ ತಂದರೆ ನನ್ನ ಜನ್ಮ ಪಾವನಾಯಿತು ಎಂಬ ಭಾವನೆಯಿದೆ.

ಆದರೆ ಈಗ ನಿನ್ನೆ ಈ ಘಟನೆಯಾಗಿಲ್ಲ. ಜಗಮೋಹನ್ ರೆಡ್ಡಿ ಆಡಳಿತದಲ್ಲೇ ಕಲಬೆರಕೆ ಯಾಕೆ ಆಯಿತು ಅಂತ ನೀವು ಕೇಳಿದ್ರಲ್ಲಾ? ಇದಕ್ಕೆ ಕಾರಣ ವಿದೇಶೀ ಕ್ರಿಶ್ಚಿಯನ್ ಪಾದ್ರಿಗಳ ಷಡ್ಯಂತ್ರ. ಜಗಮೋಹನ್ ರೆಡ್ಡಿ ಅವರು ಕನ್ವರ್ಟೆಡ್ ಕ್ರಿಶ್ಚಿಯನ್. ಅವರು ಗೊತ್ತಿಲ್ಲದೇ ಮಾಡಿದ್ದಾರಾ? ಅಲ್ಲಿನ ಅಧಿಕಾರಿಗಳೇ ಕಲಬೆರಕೆಯಾಗಿದೆ ಎಂದು ಹೇಳುತ್ತಲೇ ಇದ್ದಾರೆ. ಗೊತ್ತಿದ್ದೂ  ಮಾಡಿದ್ಯಾಕೆ?

ಹಿಂದೂ ಸಮುದಾಯದ ಮೇಲೆ ಆಗುತ್ತಿರುವ ಷಡ್ಯಂತ್ರ, ಗಣೇಶ ದೇವರ ಮೇಲಾಗುತ್ತಿರುವ ಅನ್ಯಾಯ, ತಿರುಪತಿ ತಿಮ್ಮಪ್ಪನ ಲಡ್ಡಿನಲ್ಲಿ ಆಗಿರುವ ಕಲಬೆರಕೆ ಅಥವಾ ರಾಷ್ಟ್ರಭಕ್ತದ ಧ್ವಜದ ಬಗ್ಗೆಯಿರಬಹುದು ಎಲ್ಲವೂ ಷಡ್ಯಂತ್ರ ಎಂದು ಈಶ್ವರಪ್ಪ ಗಂಭೀರ ಆರೋಪ ಮಾಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments