ಕೊಳೆತ ತರಕಾರಿ, ಹುಳ ಹತ್ತಿದ ಬೆಳೆಕಾಳು ಇದು ಹಾಸ್ಟೆಲ್ ಊಟದ ಹಾಡುಪಾಡು!

Webdunia
ಗುರುವಾರ, 22 ನವೆಂಬರ್ 2018 (20:53 IST)
ಸರಕಾರ ವಿದ್ಯಾರ್ಥಿಗಳಿಗಾಗಿ ಏನೆಲ್ಲ ಅನುಕೂಲತೆಗಳನ್ನು ಮಾಡಿಕೊಡುತ್ತದೆ. ಆದರೆ ಅಧಿಕಾರಿಗಳ ಬೇಜವಾಬ್ದಾರಿತನದಿಂದ ಆ ಅನುಕೂಲತೆಗಳು ಯಾವ ರೀತಿ ಹಳ್ಳ ಹಿಡಿಯುತ್ತವೆ ಅನ್ನೋದಕ್ಕೆ ಸಾಕ್ಷಿ ಸಾಕಷ್ಟಿವೆ.

ಗದಗ ನಗರದ ಕಳಸಾಪೂರ ರಸ್ತೆ ಬಳಿ ಇರುವ ಮೆಟ್ರಿಕ್ ನಂತರದ ಎಸ್ ಸಿ, ಎಸ್ ಟಿ ವಸತಿ ನಿಲಯದಲ್ಲಿ ತರಕಾರಿ, ಬೆಳೆ, ಅಕ್ಕಿ ಹೀಗೆ ಎಲ್ಲ ಧವಸ ಧಾನ್ಯಗಳಿಗೂ ಅನುದಾನ ಇರುತ್ತೆ. ಆದರೆ ಇಲ್ಲಿ ಆ ಅನುದಾನ ಅಧಿಕಾರಿಗಳ ಹಾಗೂ ಅಲ್ಲಿಯ ಸಿಬ್ಬಂದಿಗಳ ಜೇಬಿ ಸೇರ್ತಿದೆ ಅನ್ನೋದರಲ್ಲಿ ಎರೆಡು ಮಾತಿಲ್ಲ. ಯಾಕಂದ್ರೆ ಕೊಳೆತು ಹೋಗಿರೋ ತರಕಾರಿ, ಹುಳ ಹತ್ತಿರುವ ಬೆಳೆಕಾಳು, ಕೆಟ್ಟು ಹೋಗಿರುವ ಆಹಾರ ಸಾಮಗ್ರಿ ಬಳಸಿ ವಿದ್ಯಾರ್ಥಿಗಳಿಗೆ ಊಟ ಕೊಡ್ತಿದಾರೆ. ಹಾಸ್ಟೆಲ್ ನ ಅವ್ಯವಸ್ಥೆ ಎಷ್ಟರ ಮಟ್ಟಿಗೆ ಇದೆ ಎಂದರೆ ವಿದ್ಯಾರ್ಥಿಗಳಿಗೆ ಕೈ ತೊಳೆಯಲು ಸಿಂಕ್ ವ್ಯವಸ್ಥೆ ಇದ್ದರೂ ಸಿಂಕ್ ಗಳು ಗಲೀಜಿನ ನೀರಿನಿಂದ ತುಂಬಿ ನಲ್ಲಿ ಸಹ ಕೆಟ್ಟು ನಿಂತಿವೆ.

ವಿದ್ಯಾರ್ಥಿಗಳಿಗೆ ಸೋಲಾರ್ ಮೂಲಕ ಬಿಸಿನೀರಿನ ವ್ಯವಸ್ಥೆ ಇದ್ರೂ ಸಹ ಹೊರಗಡೆ ಇರುವ ಟ್ಯಾಂಕನಲ್ಲಿ ತಣ್ಣಿರು ಸ್ನಾನ ಮಾಡುವ ಹಾಗಾಗಿದೆ. ಹೇಳುವವರಿಲ್ಲ ಕೇಳುವವರಿಲ್ಲ ಅನ್ನೋ ಹಾಗಾಗಿದೆ ಈ ಹಾಸ್ಟೆಲ್ ನ ದುಸ್ಥಿತಿ. ಈ ಅವ್ಯವಸ್ಥೆಗೆ ಬೇಸತ್ತು ಹಾಸ್ಟೆಲ್ ನ ವಿದ್ಯಾರ್ಥಿಗಳು ಯಾವುದೇ ಮೆನು ಪ್ರಕಾರ ಊಟ ಕೊಡ್ತಿಲ್ಲ ಹಾಗೂ ಮೂಲ ಸೌಲಭ್ಯಗಳ ಕೊರತೆ ಇದೆ ಅಂತ ಹೇಳಿ ಪ್ರತಿಭಟನೆ ನಡೆಸಿದ್ದಾರೆ. ಹಾಸ್ಟೆಲ್ ವಾರ್ಡನ್ ವಿರುದ್ಧ ಪ್ರತಿಭಟಿಸ್ತರೋ ವಿದ್ಯಾರ್ಥಿಗಳು ಅವ್ಯವಸ್ಥೆ ಸರಿಪಡಿಸುವಂತೆ ಆಗ್ರಹ ಮಾಡಿದ್ದಾರೆ.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನೀಟ್ ಪರೀಕ್ಷೆ ಅಕ್ರಮ ಖಂಡಿಸಿ ಬಿಜೆಪಿ ಕಚೇರಿಗೆ ಕಾಂಗ್ರೆಸ್ ಕಾರ್ಯಕರ್ತರ ಮುತ್ತಿಗೆ

ಪ್ರಿಯಕರ ಬರುವವರೆಗೂ ಕೆಳಗಿಳಿಯಲ್ಲ ಎಂದು ಟವರ್ ಏರಿ ಕೂತ ಮಹಿಳೆ: ಮುಂದೇನಾಯ್ತು ನೋಡಿ Video

Gold Price: ಇಂದಿನ ಚಿನ್ನ,ಬೆಳ್ಳಿ ದರ ವಿವರ ಇಲ್ಲಿದೆ

ನಮ್ಮ ಸಮಯ ವ್ಯರ್ಥ ಮಾಡಬೇಡಿ: ಸಿಜೆಪಿ ವಿರುದ್ಧ ದೆಹಲಿ ಪೊಲೀಸರ ಕ್ರಮ ಪ್ರಶ್ನಿಸಿದ್ದಕ್ಕೆ ಸುಪ್ರೀಂಕೋರ್ಟ್ ಚಾಟಿ

19 ವರ್ಷದ ಯುವಕನೊಂದಿಗೆ ಸರಸ ಸಲ್ಲಾಪ ಮಾಡಿ ಸಿಕ್ಕಿಬಿದ್ದ 35 ರ ವಿವಾಹಿತ ಮಹಿಳೆ: ಮುಂದೇನಾಯ್ತು ನೋಡಿ Video

ಮುಂದಿನ ಸುದ್ದಿ
Show comments