Select Your Language

Notifications

webdunia
webdunia
webdunia
webdunia

ಕಾವೇರಿ ಸಮಸ್ಯೆ ಕೇಂದ್ರ ನಾಯಕರಿಗೆ ಕಾಣಿಸುತ್ತಿಲ್ವಾ-ಸಚಿವ ರಾಮಲಿಂಗಾರೆಡ್ಡಿ

ಕಾವೇರಿ ಸಮಸ್ಯೆ ಕೇಂದ್ರ ನಾಯಕರಿಗೆ ಕಾಣಿಸುತ್ತಿಲ್ವಾ-ಸಚಿವ ರಾಮಲಿಂಗಾರೆಡ್ಡಿ
bangalore , ಶುಕ್ರವಾರ, 29 ಸೆಪ್ಟಂಬರ್ 2023 (21:05 IST)
ಕಾಂಗ್ರೆಸ್ ಎಂದೂ ನಾಡಿನ ವಿಚಾರವಾಗಿ ದ್ರೋಹ ಮಾಡಿಲ್ಲ. ಆದ್ರೆ ಬಿಜೆಪಿಯೇ ನಾಡದ್ರೋಹಿ ಪಕ್ಷ. ಬಿಜೆಪಿ ಆಡಳಿತದ ಅವಧಿಯಲ್ಲೇ ಪ್ರಾಧಿಕಾರ ರಚನೆಯಾಗಿದೆ. ಇವರು ಅಧಿಕಾರಕ್ಕೆ ಬಂದು 9 ವರ್ಷಗಳು ಆದರೂ ಯಾಕೆ ಇದಕ್ಕೆ ಪರಿಹಾರ ಕಂಡುಕೊಳ್ಳುತ್ತಿಲ್ಲ. ತಮ್ಮ ಬೇಳೆ ಬೇಯಿಸಿಕೊಳ್ಳಲು ಮಾತ್ರ ರಾಜಕೀಯ ಮಾಡುತ್ತಿದ್ದಾರೆ ಎಂದು ಬಿಜೆಪಿ ಸರ್ಕಾರದ ವಿರುದ್ಧ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ವಾಗ್ದಾಳಿ ನಡೆಸಿದರು.ಇದೇ ವೇಳೆ ಹೋರಾಟಗಾರರಿಗೆ ಮನವಿ ಮಾಡಿದ ಸಚಿವರು ಯಾರೂ ಕೂಡ ಕಲ್ಲು ತೂರಾಟ ಮಾಡಬಾರದು. ಬಂದ್ ಪರವಾಗಿ ಎಲ್ಲ ಜನ ಇದ್ದಾರೆ. ಜನರು ರಾಜ್ಯ ಸರ್ಕಾರದ ವಿರುದ್ಧ ಬಂದ್ ಮಾಡುತ್ತಿಲ್ಲ. ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಎಂದು ಕೇಂದ್ರದ ವಿರುದ್ಧ ರಾಮಲಿಂಗಾರೆಡ್ಡಿ ಕಿಡಿಕಾರಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

40 ವರ್ಷಗಳ ಬಳಿಕ 75 ವರ್ಷದ ವೃದ್ಧನಿಗೆ ಬೇಲ್ ಕೊಟ್ಟ ಸುಪ್ರೀಂ..!