Select Your Language

Notifications

webdunia
webdunia
webdunia
webdunia

ಬ್ಯಾಂಕಾಕ್ ಏರ್ ಪೋರ್ಟ್ ತಲುಪಿದ ಸ್ಪಂದನಾ ಮೃತದೇಹ

ಬ್ಯಾಂಕಾಕ್ ಏರ್ ಪೋರ್ಟ್ ತಲುಪಿದ ಸ್ಪಂದನಾ ಮೃತದೇಹ
ಬೆಂಗಳೂರು , ಮಂಗಳವಾರ, 8 ಆಗಸ್ಟ್ 2023 (20:45 IST)
ಬೆಂಗಳೂರು: ಹೃದಯಾಘಾತದಿಂದ ಮೃತಪಟ್ಟ ನಟ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ಮೃತದೇಹ ಬ್ಯಾಂಕಾಕ್ ವಿಮಾನ ನಿಲ್ದಾಣಕ್ಕೆ ತಲುಪಿದೆ.

ಇಲ್ಲಿಂದ ಈಗ ತಾನೇ ವಿಮಾನ ಟೇಕ್ ಆಫ್ ಆಗಿದ್ದು, ಮಧ್ಯರಾತ್ರಿ 12 ಗಂಟೆ ಸುಮಾರಿಗೆ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿಯುವ ಸಾಧ‍್ಯತೆಯಿದೆ. ಬ್ಯಾಂಕಾಕ್ ನಿಂದ ಆಂಬ್ಯುಲೆನ್ಸ್ ಮೂಲಕವಾಗಿ ವಿಮಾನ ನಿಲ್ದಾಣಕ್ಕೆ ಸ್ಪಂದನಾ ಮೃತದೇಹ ಕರೆತರಲಾಯಿತು. ಬಳಿಕ ವಿಮಾನದ ಮೂಲಕ ಕರೆತರಲಾಗುತ್ತಿದೆ.

ಈಗಾಗಲೇ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಸ್ಪಂದನಾ ಕುಟುಂಬಸ್ಥರು ತೆರಳಿದ್ದು, ಅಲ್ಲಿನ ಪ್ರಕ್ರಿಯೆಗಳನ್ನು ಪೂರ್ತಿಗೊಳಿಸಿ ಬೇಗನೇ ಮೃತದೇಹ ಕರೆತರುವ ವ್ಯವಸ್ಥೆ ಮಾಡಲಾಗುತ್ತಿದೆ. ಸ್ಪಂದನಾ ತಂದೆ ಬಿ.ಕೆ. ಶಿವರಾಂ ನಿವಾಸದ ಎದುರು ಅಂತಿಮ ದರ್ಶನಕ್ಕೆ ಸಕಲ ಸಿದ್ಧತೆ ನಡೆಸಲಾಗಿದೆ. ವಿಐಪಿ ಮತ್ತು ಜನ ಸಾಮಾನ್ಯರಿಗೆ ದರ್ಶನ ಪಡೆಯಲು ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪುಷ್ಪ 2 ನಲ್ಲಿ ಫಹಾದ್ ಫಾಸಿಲ್ ಪಾತ್ರ ಹೀಗಿರಲಿದೆ!